twitter
    For Quick Alerts
    ALLOW NOTIFICATIONS  
    For Daily Alerts

    ವೀರಪ್ಪನ್ ಕುರಿತ ವೆಬ್ ಸೀರಿಸ್ ಬಿಡುಗಡೆಗೆ ತಡೆಯಾಜ್ಞೆ ನೀಡಿದ ಕೋರ್ಟ್; ಮುತ್ತುಲಕ್ಷ್ಮಿ ಹೇಳಿದ್ದೇನು?

    |

    ಕಾಡುಗಳ್ಳ ವೀರಪ್ಪನ್ ಕುರಿತ ವೈಬ್ ಸೀರಿಯಸ್ ಬಿಡುಗಡೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. 'ವೀರಪ್ಪನ್; ಹಂಗರ್ ಫರ್ ಕಿಲಿಂಗ್' ಟೈಟಲ್ ನಲ್ಲಿ ಅಟ್ಟಹಾಸ ನಿರ್ದೇಶಕ ಎ ಎಂ ಆರ್ ರಮೇಶ್ ವೆಬ್ ಸೀರಿಸ್ ನಿರ್ದೇಶನ ಮಾಡಿದ್ದಾರೆ. ಇದೀಗ ಈ ವೆಬ್ ಸೀರಿಸ್ ಬಿಡುಗಡೆಗೆ ಮಾಡದಂತೆ ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ.

    ವೆಬ್ ಸಿರಿಸ್ ನ ಯಾವುದೇ ಸ್ಕ್ರೀನಿಂಗ್ ಮಾಡುವಂತಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಹಾಕುವಂತಿಲ್ಲ, ಒಟಿಟಿಯಲ್ಲೂ ರಿಲೀಸ್ ಮಾಡುವಂತಿಲ್ಲ ಅಲ್ಲದೇ ಯಾವುದೇ ಭಾಷೆಯಲ್ಲೂ ಈ ಸೀರಿಸ್ ಬಿಡುಗಡೆ ಮಾಡುವಂತಿಲ್ಲ ಎಂದು ಕೋರ್ಟ್ ಆದೇಶಿಸಿದೆ.

    ವೆಬ್ ಸೀರಿಸ್ ರಿಲೀಸ್ ಗೆ ತಡೆಕೋರಿ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಕೋರ್ಟ್ ಮೆಟ್ಟಿಲೇರಿದ್ದು. ಈ ಬಗ್ಗೆ ಮಾತನಾಡಿರುವ ನೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ, 'ನ್ಯಾಯಾಲಯದಲ್ಲಿ ನಮ್ಮ ಅರ್ಜಿಗೆ ತಡೆಯಾಜ್ಞೆ ಸಿಕ್ಕಿದೆ ನಿರ್ದೇಶಕ ಎ ಎಮ್ ಆರ್ ರಮೇಶ್ ಯಾಕೆ ವೀರಪ್ಪನ ಹೆಸರು ಹೇಳಿ ಹಣ ಮಾಡುತ್ತಿದ್ದಾರೆ ಗೊತ್ತಿಲ್ಲ. ಇದರಿಂದ ನಮ್ಮ ಮಕ್ಕಳ ಮತ್ತು ಮೊಮ್ಮಕ್ಕಳು ಗೌರವಯುತ ಜೀವನಕ್ಕೆ ಧಕ್ಕೆಯಾಗುತ್ತಿದೆ' ಎಂದಿದ್ದಾರೆ.

    Court ordered to Stay Veerappan web series release; What did Muthulakshmi say?

    'ವೀರಪ್ಪನ್ ಮಾಡಿರುವ ಒಳ್ಳೆ ಕೆಲಸಗಳನ್ನು ಯಾಕೆ ಎ ಎಮ್ ರಮೇಶ್ ತೋರಿಸಲ್ಲ. ಪದೇ ಪದೇ ತನ್ನ ಗಂಡನ ಹೆಸರಿನಲ್ಲಿ ಸಿನಿಮಾ ಮತ್ತು ವೆಬ್ ಸೀರಿಸ್ ಮಾಡಬೇಡಿ' ಎಂದು ಪತ್ನಿ ಮುತ್ತುಲಕ್ಷ್ಮಿ ಮನವಿ ಮಾಡಿಕೊಂಡಿದ್ದಾರೆ.

    'ಎ ಎಂ ರಮೇಶ್ ಅವರು ಈ ಹಿಂದೆ ಅಟ್ಟಹಾಸ ಎಂಬ ಸಿನಿಮಾ ಮಾಡಿದ್ರು. ವೆಬ್ ಸೀರಿಸ್ ಮೂಲಕ ಎ ಎಂ ರಮೇಶ್ ಪೊಲೀಸರ ಸಾಹಸದ ಕುರಿತಾಗಿ ಹೇಳಲು ಹೊರಟ್ಟಿದ್ದಾರೆ. ಈಗಾಗಲೇ ವೆಬ್ ಸೀರಿಸ್ ಚಿತ್ರೀಕರಣವಾಗಿದೆ. ಆಗಸ್ಟ್ ನಿಂದ ಪ್ರಾರಂಭವಾಗುವ ಸಾಧ್ಯತೆ ಇದೆ. ಆದರೀಗ ನ್ಯಾಯಾಲಯದಲ್ಲಿ ನಮ್ಮ ಅರ್ಜಿ ತಡೆಯಾಜ್ಞೆ ಸಿಕ್ಕಿದೆ' ಎಂದಿದ್ದಾರೆ.

    ಪತಿಯ ಹೆಸರಿನಲ್ಲಿ ಸಿನಿಮಾ ವೆಬ್ ಸೀರಿಸ್ ಮಾಡಿ ಹಣ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಮಗೆ ಯಾವುದೇ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ರೇಷನ್ ಕಾರ್ಡ್ ಸಿಕ್ಕಿಲ್ಲ ಎಂದು ಮುತ್ತುಲಕ್ಷ್ಮಿ ಅಳಲು ತೋಡಿಕೊಂಡಿದ್ದಾರೆ.

    Recommended Video

    KGF2 Teaser ನೋಡಿ Yash ಗೆ ನೋಟೀಸ್ ಕೆಳುಹಿಸಿದ ಆರೋಗ್ಯ ಇಲಾಖೆ | Filmibeat Kannada

    'ವೀರಪ್ಪನ್; ಹಂಗರ್ ಫರ್ ಕಿಲಿಂಗ್' ವೆಬ್ ಸೀರಿಸ್ ನಲ್ಲಿ ನಟ ಕಿಶೋರ್ ವೀರಪ್ಪನ್ ಪಾತ್ರದಲ್ಲಿ ಮಿಂಚಿದ್ದಾರೆ. ಈ ವೆಬ್ ಸೀರಿಸ್ ಒಟ್ಟು 10 ಸಂಚಿಕೆಗಳಿದ್ದು, ಕನ್ನಡದ ಜೊತೆಗೆ ತಮಿಳು, ತೆಲುಗು ಮತ್ತು ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಈ ಸೀರಿಸ್ ನಲ್ಲಿ ಬೇರೆ ಬೇರೆ ಭಾಷೆಯ ಕಲಾವಿದರು ನಟಿಸಿದ್ದಾರೆ ಎನ್ನಲಾಗುತ್ತಿದೆ.

    English summary
    Court ordered to Stay Veerappan web series release; What did Muthulakshmi say?.
    Tuesday, January 12, 2021, 14:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X