Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ದರ್ಶನ್ ಚಿತ್ರಕ್ಕೆ ಸಿಪಿ ಯೋಗೀಶ್ವರ್ ಪುತ್ರಿ ನಿಶಾ
ದರ್ಶನ್ ಮುಖ್ಯಭೂಮಿಕೆಯಲ್ಲಿರುವ 'ಅಂಬರೀಷ' ಚಿತ್ರದಲ್ಲಿ ನಿಶಾ ಅವರು ನಾಯಕಿ ಪಾತ್ರವನ್ನು ಪೋಷಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮತ್ತೊಬ್ಬ ನಟಿ ಪ್ರಿಯಾಮಣಿ ಸಹ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಮಹೇಶ್ ಸುಖಧರೆ.
ಸೌತ್ ಬ್ಯೂಟಿ ಅಮಲಾ ಪೌಲ್ ಅವರನ್ನು ಕರೆತರಲು ಮಹೇಶ್ ಪ್ರಯತ್ನಿಸಿದ್ದರು, ಆದರೆ ಡೇಟ್ಸ್ ಹೊಂದಾಣಿಕೆಯಾಗದೆ ಆ ಜಾಗಕ್ಕೆ ನಿಶಾ ಯೋಗೀಶ್ವರ್ ಅವರನ್ನು ಕರೆತರುತ್ತಿದ್ದಾರೆ. ಸದ್ಯಕ್ಕೆ ಮಾತುಕತೆ ಆಗಿದ್ದು ಕೆಲವೇ ದಿನಗಳಲ್ಲಿ ಎಲ್ಲವೂ ಫೈನಲ್ ಆಗುತ್ತದೆ ಎನ್ನುತ್ತವೆ ಮೂಲಗಳು.
ಇನ್ನೊಂದು ಮೂಲದ ಪ್ರಕಾರ, ಈಗಾಗಲೆ ಇಬ್ಬರೂ 'ಅಂಬರೀಷ' ಚಿತ್ರದಲ್ಲಿ ಅಭಿನಯಿಸಲು ಅಂಕಿತ ಹಾಕಿದ್ದು, ಫೋಟೋಶೂಟ್ ಸಹ ಮುಗಿದಿದೆಯಂತೆ. ಆಗಸ್ಟ್ 15ರಂದು ಚಿತ್ರ ಸೆಟ್ಟೇರುತ್ತಿರುವುದು ಮತ್ತೊಂದು ವಿಶೇಷ.
ಮಹೇಶ್ ಸುಖಧರೆ ಅವರು ಈ ಹಿಂದೆ ಸಿಪಿ ಯೋಗೀಶ್ವರ್ ಅವರೊಂದಿಗೆ 'ಸೈನಿಕ' ಚಿತ್ರ ಮಾಡಿದ್ದರು. ಈಗ ಅವರ ಮಗಳನ್ನು ಬೆಳ್ಳೆಪರದೆಗೆ ಪರಿಚಯಿಸುತ್ತಿದ್ದಾರೆ. ಇನ್ನು ನಿಶಾ ಅವರು 2013ರ ವಿಧಾನಸಭೆ ಚುನಾವಣೆಯಲ್ಲಿ ಅಪ್ಪನ ಪರ ಪ್ರಚಾರದಲ್ಲೂ ಭಾಗಿಯಾಗಿದ್ದರು. (ಏಜೆನ್ಸೀಸ್)