Don't Miss!
- News ಎಸ್ಸಿ, ಎಸ್ಟಿ ಮೀಸಲಾತಿ ಮುಸ್ಲಿಮರಿಗೆ ಹಂಚಿಕೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬ್ರಹ್ಮಾಂಡ ಗುರೂಜಿ ಬಗ್ಗೆ ರವಿಚಂದ್ರನ್ ಕಾಮೆಂಟ್
ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಆತ್ಮೀಯ ಗೆಳೆಯ ಅರ್ಜುನ್ ಸರ್ಜಾ ಅವರ 'ಅಭಿಮನ್ಯು' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದರು. 'ಅಭಿಮನ್ಯು' ಹಾಗೂ 'ಚಕ್ರವ್ಯೂಹ' ಎಂಬೆರಡು ಚಿತ್ರಗಳು ನನ್ನದೇ. ಈಗ 'ಅಭಿಮನ್ಯು' ಹೆಸರಿನಲ್ಲಿ ಅರ್ಜುನ್ ಚಿತ್ರ ಮಾಡುತಿದ್ದಾರೆ. ಅವರ ಅಭಿಮನ್ಯು ಚಕ್ರವ್ಯೂಹ ಭೇದಿಸಿಕೊಂಡು ಬರಲಿ ಎಂದು ಹಾರೈಸಿದರು.
"ನಾನು ಹಾಗೂ ಅರ್ಜುನ್ ಸರ್ಜಾ ಒಟ್ಟಿಗೆ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು. ಅವರ ತಂದೆ ಶಕ್ತಿ ಪ್ರಸಾದ್ ನಮಗೆ ತುಂಬಾ ಆತ್ಮೀಯರು ಅದಕ್ಕಿಂತಲೂ ಹೆಚ್ಚಾಗಿ ವೆಲ್ ವಿಶರ್. ನಾವು ಈವಾಗ ಏನು ಸಿಕ್ಸ್ ಪ್ಯಾಕ್ ನೋಡುತ್ತಿದ್ದೇವೋ ಅರ್ಜುನ್ ಸರ್ಜಾ ಆ ಕಾಲಕ್ಕೆ ಸಿಕ್ಸ್ ಪ್ಯಾಕ್ ಮಾಡಿ ತೋರಿಸಿದವನು" ಎಂದರು.
"ಅರ್ಜುನ್ ಸರ್ಜಾ ಅವರಲ್ಲಿ ಡೆಡಿಕೇಷನ್ ಎಂಬುದು ಮೈಯಲ್ಲಿ ಸೇರಿಕೊಂಡುಬಿಟ್ಟಿದೆ. ನಾನು ಒಂದು ಸಲ ಸಡನ್ ಆಗಿ ಚೆನ್ನೈಗೆ ಹೋಗಬೇಕಾಗಿತ್ತು. ಜೊತೆಯಲಿ ಅರ್ಜುನ್ ಇದ್ದಾಗ. ಬಾರೋ ಹಂಗೆ ಚೆನ್ನೈಗೆ ಹೋಗೋಣ ಎಂದು ಕರೆದುಕೊಂಡು ಹೋದೆ...
ಬಟ್ಟೆ ಇಲ್ಲ ಎಂದಿದ್ದ. ನಾನು ಕೊಡುಸ್ತೀನಿ ಬಾರೋ ಎಂದೆ. ಅಪ್ಪನಿಗೆ ಹೇಳಿಲ್ಲ ಎಂದ. ನಾನೂ ಹೇಳ್ತೀನಿ ಬಾರೋ ಎಂದೆ. ಆಗ ಅವರ ತಂದೆಯವರಿಗೆ ಹೇಳಿದಾಗ. ನಿನ್ನ ಜೊತೆ ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗಪ್ಪ" ಎಂದಿದ್ದರು.
ಚೆನ್ನೈಗೆ ಹೋಗಿ ಬಂದ ಮೇಲೆ ಅವನು ಅಲ್ಲೇ ಸೆಟ್ಲ್ ಆಗ್ಬಿಟ್ಟ ಎಂದು ನೆನಪಿನ ಪುಟಗಳನ್ನು ರವಿಚಂದ್ರನ್ ತಿರುವಿ ಹಾಕಿದರು. ಪತ್ರಿಕಾಗೋಷ್ಠಿ ಬಳಿಕ ಬ್ರಹ್ಮಾಂಡ ಗುರುಗಳ ಬಗ್ಗೆ ಅವರು ಹೇಳಿದ್ದೇನೆಂದರೆ. ಆವಾಗ ನನ್ನ ಚಿತ್ರದಲ್ಲಿ ಆಕ್ಟ್ ಮಾಡಿದ್ದ. ಆಗಲೂ ನಾನು ಹೋಗೋ ಬಾರೋ ಎಂದು ಕರೆಯುತ್ತಿದ್ದೆ.
ಆಗ ಅವರು ಹಾಗೆಲ್ಲಾ ಕರೆದರೆ ನಾನು ಬರೋದೇ ಇಲ್ಲ ಎಂದು ತಪ್ಪಿಸಿಕೊಂಡು ಓಡಿಹೋಗುತ್ತಿದ್ದ. ಅವನನ್ನು ಸಮಾಧಾನ ಮಾಡಬೇಕೆಂದರೆ ಸಾಕಾಗಿ ಹೋಗುತ್ತಿತ್ತು. ಮೊನ್ನೆ ಬಿಗ್ ಬಾಸ್ ನೋಡುತ್ತಿದ್ದೆ. ವೇಲಾಯುಧ ತನಗೆ ಹೇಗೆ ಸಿಕ್ಕಿತು ಎಂದು ಹೇಳುತ್ತಿದ್ದ. (ಬಿಗ್ ಬಾಸ್ ಕುರಿತ ಸಮಗ್ರ ಸುದ್ದಿಗಳು)
ಆದರೆ ಇವನ ಬಾಯಲ್ಲಿ ಮಾತ್ರ ಎಲ್ಲ ಕೆಟ್ಟ ಕೆಟ್ಟ ಮಾತುಗಳೇ ಬರುತ್ತವೆ. ಇದನ್ಯಾಕೆ ವೇಲಾಯುಧ ಕೊಟ್ಟ ದೇವರು ಸರಿಮಾಡಲಿಲ್ಲ ಎಂದು ಹಾಸ್ಯಚಟಾಕಿ ಸಿಡಿಸಿದರು. ಇಂತಹವರೆಲ್ಲಾ ಸ್ವಾಮಿಗಳಾಗಿ ಬಿಟ್ಟರೆ ಇನ್ನೇನಾಗುತ್ತದೆ ಎಂಬ ವ್ಯಂಗ್ಯ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. (ಒನ್ಇಂಡಿಯಾ ಕನ್ನಡ)