Don't Miss!
- News karnataka Rain: ಕರ್ನಾಟಕದಲ್ಲಿ ಮುಂದಿನ ಮೂರು ದಿನ ದಾರಕಾರ ಮಳೆ: ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣನ ಅರ್ಭಟ!
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಭಿಮಾನಿಗಳಲ್ಲಿ ಕನಸುಗಾರ ರವಿಚಂದ್ರನ್ ಮಾಡಿದ ಮನವಿ
ಕನಸುಗಾರ ರವಿಚಂದ್ರನ್ 59ರ ಹರೆಯಕ್ಕೆ ಕಾಲಿರಿಸಿದ್ದಾರೆ. 'ಪ್ರೇಮಲೋಕ'ದ ಮೂಲಕ ಚಿತ್ರರಂಗಕ್ಕೆ ಹೊಸ ಭಾಷ್ಯ ಬರೆದ ರವಿಚಂದ್ರನ್ ಅವರ ಜನ್ಮದಿನಕ್ಕೆ ಶುಭ ಹಾರೈಸಲು ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ. ಆದರೆ ಈಗಿನ ಸನ್ನಿವೇಶದಲ್ಲಿ ಮೊದಲಿನಂತೆ ಹುಟ್ಟುಹಬ್ಬವನ್ನು ಅಭಿಮಾನಿಗಳ ನಡುವೆ ಆಚರಿಸಲು ರವಿಚಂದ್ರನ್ ಸಿದ್ಧರಿಲ್ಲ. ಆಚರಣೆಗೆ ಸೂಕ್ತ ಪರಿಸ್ಥಿತಿಯೂ ಇಲ್ಲ.
Recommended Video
ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ ಕ್ರೇಜಿ ಸ್ಟಾರ್ ರವಿಚಂದ್ರನ್
ಕೊರೊನಾ ವೈರಸ್ ಭಯದ ನಡುವೆಯೂ ಅಭಿಮಾನಿಗಳು ರವಿಚಂದ್ರನ್ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇರುವುದರಿಂದ ರವಿಚಂದ್ರನ್ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ. ಮನೆಯಲ್ಲಿಯೇ ಸುರಕ್ಷಿತವಾಗಿ ಇರಿ ಎಂದು ಅಭಿಮಾನಿಗಳಿಗೆ ಅವರು ಸಲಹೆ ನೀಡಿದ್ದಾರೆ.
ನೀವು ಎಂದೆಂದಿಗೂ ಸ್ಫೂರ್ತಿ: ಕ್ರೇಜಿ ಸ್ಟಾರ್ಗೆ ಕಿಚ್ಚ ಸುದೀಪ್ ಶುಭಾಶಯ
'ಎಲ್ಲಾ ಅಭಿಮಾನಿಗಳಲ್ಲಿ ವಿನಂತಿ, ದಯವಿಟ್ಟು ಈ ವರ್ಷ ಯಾರು ನಮ್ಮ ಮನೆಯ ಹತ್ತಿರ ಬರುವುದು ಬೇಡ. ಈ ವರ್ಷ ನನ್ನ ಹುಟ್ಟಿದ ಹಬ್ಬದ ಆಚರಣೆಯನ್ನು ಮಾಡುತ್ತಿಲ್ಲ, ಕಾರಣ ಕೋವಿಡ್ 1. ವೈರಸ್ ನಿಂದ ತೊಂದರೆ ಇರುವುದರಿಂದ, ಎಲ್ಲಾ ಅಭಿಮಾನಿಗಳು ತಮ್ಮ ತಮ್ಮ ಮನೆಯಲ್ಲಿ ಇರಬೇಕು. ನಿಮ್ಮ ಕುಟುಂಬದವರೊಂದಿಗೆ ಸುರಕ್ಷಿತರಾಗಿ ಇರಬೇಕು. ಬಿ ಸೇಫ್, ಸ್ಟೇ ಇನ್ ಹೋಮ್' ಎಂದು ರವಿಚಂದ್ರನ್ ಮನವಿ ಮಾಡಿದ್ದಾರೆ.