Don't Miss!
- Finance ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ಶುಲ್ಕ ಹೆಚ್ಚಳ: ಕಾರುಗಳಿಗೆ 330 ರೂ. ತಾಕೀತು?
- Automobiles ಥಾರ್ 5 ಡೋರ್ ಬಿಡುಗಡೆಗೂ ಮುನ್ನವೇ ಎದುರಾಳಿ ರೆಡಿ: ಹೊಸ ಗೂರ್ಖಾಗೆ ನಲುಗುತ್ತಾ ಮಹೀಂದ್ರಾ!
- Sports Hardik Pandya: ಸ್ವತಃ ಮುಂಬೈ ಇಂಡಿಯನ್ಸ್ ಫ್ಯಾನ್ಸ್ನಿಂದಲೂ ಹಾರ್ದಿಕ್ ಪಾಂಡ್ಯ ಟ್ರೋಲ್!
- News ಬಿಜೆಪಿ ಯುವಕರಿಗೆ ಪಕೋಡಾ ಮಾರಿ ಎಂದು ಹೇಳಿ ಅವಮಾನ ಮಾಡಿದೆ- ಡಿ ಕೆ ಶಿವಕುಮಾರ್ ಕಿಡಿ
- Technology ಅಗ್ಗದ ಬೆಲೆಯಲ್ಲಿ 5G ಫೋನ್ ಬೇಕೆ?..ಹಾಗಿದ್ರೆ ಈ ಆಫರ್ ನಿಮಗೆ ಸೂಪರ್!
- Lifestyle ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಭಿಮಾನಿಗಳಲ್ಲಿ ಕನಸುಗಾರ ರವಿಚಂದ್ರನ್ ಮಾಡಿದ ಮನವಿ
ಕನಸುಗಾರ ರವಿಚಂದ್ರನ್ 59ರ ಹರೆಯಕ್ಕೆ ಕಾಲಿರಿಸಿದ್ದಾರೆ. 'ಪ್ರೇಮಲೋಕ'ದ ಮೂಲಕ ಚಿತ್ರರಂಗಕ್ಕೆ ಹೊಸ ಭಾಷ್ಯ ಬರೆದ ರವಿಚಂದ್ರನ್ ಅವರ ಜನ್ಮದಿನಕ್ಕೆ ಶುಭ ಹಾರೈಸಲು ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ. ಆದರೆ ಈಗಿನ ಸನ್ನಿವೇಶದಲ್ಲಿ ಮೊದಲಿನಂತೆ ಹುಟ್ಟುಹಬ್ಬವನ್ನು ಅಭಿಮಾನಿಗಳ ನಡುವೆ ಆಚರಿಸಲು ರವಿಚಂದ್ರನ್ ಸಿದ್ಧರಿಲ್ಲ. ಆಚರಣೆಗೆ ಸೂಕ್ತ ಪರಿಸ್ಥಿತಿಯೂ ಇಲ್ಲ.
Recommended Video
ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ ಕ್ರೇಜಿ ಸ್ಟಾರ್ ರವಿಚಂದ್ರನ್
ಕೊರೊನಾ ವೈರಸ್ ಭಯದ ನಡುವೆಯೂ ಅಭಿಮಾನಿಗಳು ರವಿಚಂದ್ರನ್ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇರುವುದರಿಂದ ರವಿಚಂದ್ರನ್ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ. ಮನೆಯಲ್ಲಿಯೇ ಸುರಕ್ಷಿತವಾಗಿ ಇರಿ ಎಂದು ಅಭಿಮಾನಿಗಳಿಗೆ ಅವರು ಸಲಹೆ ನೀಡಿದ್ದಾರೆ.
ನೀವು ಎಂದೆಂದಿಗೂ ಸ್ಫೂರ್ತಿ: ಕ್ರೇಜಿ ಸ್ಟಾರ್ಗೆ ಕಿಚ್ಚ ಸುದೀಪ್ ಶುಭಾಶಯ
'ಎಲ್ಲಾ ಅಭಿಮಾನಿಗಳಲ್ಲಿ ವಿನಂತಿ, ದಯವಿಟ್ಟು ಈ ವರ್ಷ ಯಾರು ನಮ್ಮ ಮನೆಯ ಹತ್ತಿರ ಬರುವುದು ಬೇಡ. ಈ ವರ್ಷ ನನ್ನ ಹುಟ್ಟಿದ ಹಬ್ಬದ ಆಚರಣೆಯನ್ನು ಮಾಡುತ್ತಿಲ್ಲ, ಕಾರಣ ಕೋವಿಡ್ 1. ವೈರಸ್ ನಿಂದ ತೊಂದರೆ ಇರುವುದರಿಂದ, ಎಲ್ಲಾ ಅಭಿಮಾನಿಗಳು ತಮ್ಮ ತಮ್ಮ ಮನೆಯಲ್ಲಿ ಇರಬೇಕು. ನಿಮ್ಮ ಕುಟುಂಬದವರೊಂದಿಗೆ ಸುರಕ್ಷಿತರಾಗಿ ಇರಬೇಕು. ಬಿ ಸೇಫ್, ಸ್ಟೇ ಇನ್ ಹೋಮ್' ಎಂದು ರವಿಚಂದ್ರನ್ ಮನವಿ ಮಾಡಿದ್ದಾರೆ.