Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಪಂದ್ಯಾವಳಿ: ಯಾವ ತಂಡದಲ್ಲಿ ಯಾವ ನಟರಿದ್ದಾರೆ? ಇಲ್ಲಿದೆ ಪೂರ್ಣ ಪಟ್ಟಿ
ಸ್ಯಾಂಡಲ್ವುಡ್ ನಟರು ಸೇರಿ ಆಡುತ್ತಿರುವ ಕೆಸಿಎಲ್ ಕ್ರಿಕೆಟ್ ಟೂರ್ನಿಯ ಮೂರನೇ ಆವೃತ್ತಿ ಕೆಲವೇ ದಿನಗಳಲ್ಲಿ ಆರಂಭವಾಗುತ್ತಿದೆ.
ಸ್ಯಾಂಡಲ್ವುಡ್ ನಟರೊಟ್ಟಿಗೆ ಪ್ರಖ್ಯಾತ ಅಂತರಾಷ್ಟ್ರೀಯ ಕ್ರಿಕೆಟಿಗರಾದ ಕ್ರಿಸ್ ಗೇಲ್, ಸುರೇಶ್ ರೈನಾ, ಬ್ರಿಯನ್ ಲಾರಾ, ಹರ್ಷಲ್ ಗಿಬ್ಸ್ ಇನ್ನೂ ಕೆಲವರು ಸಹ ಆಡಲಿದ್ದು, ಎರಡು ದಿನಗಳ ಕಾಲ ಈ ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿವೆ.
ಒಂದೇ ಟೈಟಲ್.. ಮೂರು ಸಿನಿಮಾ.. ಹೊಯ್ ಯಾರದ್ದು 'ಹೊಯ್ಸಳ'?
ಹೊಯ್ಸಳ ಈಗಲ್ಸ್, ಗಂಗ ವಾರಿಯರ್ಸ್, ವಿಜಯನಗರ ಪೇಟ್ರಿಯಾಟ್ಸ್, ಕದಂಬ ವಾರಿಯರ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್ , ಒಡೆಯರ್ ಚಾರ್ಜಸ್ ತಂಡಗಳು ಪ್ರಶಸ್ತಿಗಾಗಿ ಪರಸ್ಪರ ಸೆಣೆಸಲಿದ್ದು, ಸುದೀಪ್, ಶಿವರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ಉಪೇಂದ್ರ, ಡಾಲಿ ಧನಂಜಯ್ ಇನ್ನೂ ಕೆಲವು ಪ್ರಮುಖ ನಟರು ತಂಡದ ನಾಯಕರಾಗಿ ಆಟಗಾರರಾಗಿ ಆಡಲಿದ್ದಾರೆ. ಫೆಬ್ರವರಿ 11 ಹಾಗೂ 12 ರಂದು ಮೈಸೂರಿನಲ್ಲಿ ಪಂದ್ಯಗಳು ನಡೆಯಲಿದ್ದು, ತಂಡಗಳು ಹಾಗೂ ಆಟಗಾರರ ಪೂರ್ಣ ಪಟ್ಟಿ ಇಲ್ಲಿದೆ.
ಹೊಯ್ಸಳ ತಂಡದಲ್ಲಿ ಸುದೀಪ್-ಕ್ರಿಸ್ ಗೇಲ್
ಹೊಯ್ಸಳ ಈಗಲ್ಸ್: ನಾಯಕ ಸುದೀಪ್, ಕ್ರಿಸ್ ಗೇಲ್, ಸಾಗರ್ ಗೌಡ, ಅನುಪ್ ಭಂಡಾರಿ, ನಾಗಾರ್ಜುನ ಶರ್ಮಾ, ಅರ್ಜುನ್ ಬಚ್ಚನ್, ವಿಶ್ವ, ಮಂಜು ಪಾವಗಡ, ಸುನಿಲ್ ಗೌಡ, ತರುಣ್ ಸುಧೀರ್, ರೋಹಿತ್ ಗೌಡ, ರಿತೇಶ್ ಭಟ್ಕಳ್, ಅಭಿಷೇಕ್ ಬಾಡ್ಕರ್.
ಒಡೆಯರ್ ಚಾರ್ಜಸ್, ನಾಯಕ ಶಿವಣ್ಣ
ಬ್ರಿಯನ್ ಲಾರಾ, ಶಿವರಾಜ್ ಕುಮಾರ್ (ನಾಯಕ), ಅರ್ಜುನ್ ಯೋಗಿ, ನಿರುಪ್ ಭಂಡಾರಿ, ಸಿಎಂ ಹರ್ಷ, ರಾಮ್ ಪವನ್, ವಿಜಯ್, ಗಣೇಶ್ ರಾಜ್, ಮಧು, ಮೋಹಿತ್ ಬಿಎ, ರಾಹುಲ್ ಪ್ರಸನ್ನ, ಆರ್ಯನ್, ತಮನ್ ಎಸ್.
ಗಂಗ ವಾರಿಯರ್ಸ್ನಲ್ಲಿ ಡಾಲಿ ಧನಂಜಯ್
ಡಾಲಿ ಧನಂಜಯ್ ನಾಯಕ, ಸುರೇಶ್ ರೈನಾ, ಕೃಷ್ಣ (ನಾಯಕ), ಕರಣ್ ಆರ್ಯ, ನವೀನ್ ರಘು, ವೈಭವ್ ರಾಮ್, ಮಲ್ಲಿಕಾ ಚರಣ್ ವಾಡಿ, ನರೇಶ್ ಗಾಂಧಿ, ಸುದರ್ಶನ್, ಸುನಿಲ್ ರಾವ್, ಸಿಂಪಲ್ ಸುನಿ, ಪ್ರಸನ್ನ, ಪ್ರವೀಶ್, ಶಿವಕುಮಾರ್ ಬಿ.ಯು.
ವಿಜಯನಗರ ಪೇಟ್ರಿಯಾಟ್ಸ್ ನಲ್ಲಿ ಉಪೇಂದ್ರ
ಹರ್ಷಬ್ ಗಿಬ್ಸ್, ಉಪೇಂದ್ರ, ತ್ರಿವಿಕ್ರಮ್, ಗರುಡಾ ರಾಮ್, ವಿಕಾಸ್, ಧರ್ಮ ಕೀರ್ತಿ ರಾಜ್, ವಿಟ್ಟಲ್ ಕಾಮತ್, ಕಿರಣ್, ಸಚಿನ್, ಮಹೇಶ್, ಆದರ್ಶ್, ರಜತ್ ಹೆಗ್ಡೆ, ಪ್ರದೀಪ್ (ನಾಯಕ)
ಕದಂಬ ವಾರಿಯರ್ಸ್ ತಂಡದಲ್ಲಿ ಯಾರ್ಯಾರು?
ತಿಲಕರತ್ನೆ ದಿಲ್ಶಾನ್, ಗೋಲ್ಡನ್ ಸ್ಟಾರ್ ಗಣೇಶ್ (ನಾಯಕ), ವ್ಯಾಸರಾಜ್, ಲೋಕಿ, ಪ್ರತಾಪ್ ವಿ, ಯೋಗೇಶ್, ಪವನ್ ಒಡೆಯರ್, ಪ್ರೀತಮ್ ಗುಬ್ಬಿ, ರಕ್ಷಿತ್ ಎಸ್, ರಿಶಿ ಬೋಪಣ್ಣ, ರಾಜೀವ್ ಹನು.
ರಾಷ್ಟ್ರಕೂಟ ಪ್ಯಾಂಥರ್ಸ್ ನಲ್ಲಿ ಯಾವ ನಟರು?
ಎಸ್ ಬದ್ರಿನಾಥ್, ಧ್ರುವ ಸರ್ಜಾ, ವಿನೋದ್ ಕಿಣಿ, ಚಂದನ್ ಕುಮಾರ್, ಸಂಜಯ್, ಪ್ರತಾಪ್ ನಾರಾಯಣ್, ಮನು ಅಯ್ಯಪ್ಪ, ಅಕಲ್ ಆನಂದ್, ಜಗ್ಗಿ, ಸೈಯ್ಯದ್, ನಿಹಾಲ್ ಉಲ್ಲಾಳ್, ಅನೀಶ್ವರ್ ಗೌತಮ್, ಜಯರಾಮ್ ಕಾರ್ತಿಕ್ (ನಾಯಕ).