Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕ್ರಿಕೆಟಿಗ ಮನೀಶ್ ಪಾಂಡೆ ಕೈ ಹಿಡಿದ ಕುಡ್ಲದ ಸುಂದರಿ ಯಾರು ಗೊತ್ತಾ?
Recommended Video
ಟೀಮ್ ಇಂಡಿಯಾ ಆಟಗಾರ, ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಇಂದು ಮುಂಬೈಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ದಕ್ಷಿಣ ಭಾರತದ ನಟಿ ಮತ್ತು ಕನ್ನಡತಿ ಆಶ್ರಿತಾ ಶೆಟ್ಟಿ ಜೊತೆ ಮನೀಶ್ ಹಸೆಮಣೆ ಏರಿದ್ದಾರೆ. ಮುಂಬೈನಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಇಬ್ಬರು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.
30ರ ಹರೆಯದ ಮನೀಶ್ ಪಾಂಡೆ ಮತ್ತು 26ರ ಹರೆಯದ ನಟಿ ಆಶ್ರಿತಾ ಮದುವೆ ಸಮಾರಂಭದಲ್ಲಿ ಇಬ್ಬರ ಕುಟುಂಬಸ್ಥರು, ಸ್ನೇಹಿತರು ಮತ್ತು ಕ್ರೀಡಾ ಜಗತ್ತಿನ ಗಣ್ಯರು ಪಾಲ್ಗೊಂಡಿದ್ದಾರೆ. ಮೂಲತಃ ಮಂಗಳೂರಿನವರಾದ ಆಶ್ರಿತಾ ಶೆಟ್ಟಿ, ತಮಿಳು, ತೆಲುಗು ಮತ್ತು ತುಳು ಚಿತ್ರಗಳಲ್ಲಿ ಅಭಿನಿಯಿಸಿದ್ದಾರೆ. 2012ರಲ್ಲಿ ತೆರೆಕಂಡ ತೆಲಿಕೆದ ಬೊಳ್ಳಿಯ ಎನ್ನುವ ತುಳು ಚಿತ್ರದ ಮೂಲಕ ಆಶ್ರಿತಾ ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದಾರೆ.
ದಕ್ಷಿಣ ಭಾರತದ ನಟಿಯ ಜೊತೆ ಕ್ರಿಕೆಟಿಗ ಮನೀಶ್ ಪಾಂಡೆ ಮದುವೆ
ಆಶ್ರಿತಾ ಶೆಟ್ಟಿ ಅಭಿನಯದ ಚಿತ್ರಗಳು
ಆಶ್ರಿತಾ ಒಟ್ಟು 5 ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಈ ನಟಿ ಕನ್ನಡ ಚಿತ್ರಗಳನ್ನು ಬಿಟ್ಟು ದಕ್ಷಿಣ ಭಾರತ ಎಲ್ಲಾ ಭಾಷೆಯಲ್ಲಿ ಬಣ್ಣಹಚ್ಚಿದ್ದಾರೆ. ತಮಿಳಿನ ಇಂದ್ರಜಿತ್, ತುಳುವಿನಲ್ಲಿ ತೆಲಿಕೆದ ಬೊಳ್ಳಿ, ತಮಿಳಿನಲ್ಲಿ 'ಒರು ಕನ್ನಿಯುಮ್ ಮೂನು ಕಲಾವಾನಿಕಲಂ' ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.
ಆಶ್ರಿತಾ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ
ಮಂಗಳೂರು ಮೂಲಕ ಆಶ್ರಿತಾ ಹುಟ್ಟಿ ಬೆಳೆದಿದ್ದೆಲ್ಲ ಮಾಯ ನಗರಿ ಮುಂಬೈನಲ್ಲಿ. ಫ್ಯಾಶನ್ ಶೋಗಳಲ್ಲಿ ಭಾಗಿಯಾಗುತ್ತಿದ್ದ ಆಶ್ರಿತಾ ನಂತರ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಮೂಲಕ ಬಣ್ಣದ ಲೋಕದ ನಂಟನ್ನು ಬೆಳೆಸಿಕೊಂಡಿದ್ದರು.
ನಿಶ್ಚಿತಾರ್ಥ ಸಡಗರದಲ್ಲಿ ನಿತ್ಯ ರಾಮ್: ಹುಡುಗ ಯಾರು.?
ಪಾರ್ಟಿಯಲ್ಲಿ ಪರಿಚಯ
ಸಿನಿಮಾಗಳ ಜೊತೆಗೆ ಆಶ್ರಿತಾ ಅನೇಕ ಜಾಹಿರಾತುಗಳಲ್ಲಿಯೂ ಮಿಂಚಿದ್ದಾರೆ. ಕರ್ನಾಟಕ ಮೂಲಕದ ಆಶ್ರಿತಾ ಉತ್ತರಖಂಡ ಮೂಲದ ಮನೀಶ್ ಅವರ ಪರಿಚಯವಾಗಿದ್ದು ಮುಂಬೈನ ಪಾರ್ಟಿವೊಂದರಲ್ಲಿ. ಪರಿಚಯವಾದ ನಂತರ ಇಬ್ಬರು ಸಾಕಷ್ಟು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಆದ್ರೆ ಇಬ್ಬರ ಮದುವೆ ವಿಚಾರ ಯಾರಿಗೂ ತಿಳಿದಿರಲಿಲ್ಲ. ಸುಮಾರು ನಾಲ್ಕೈದು ವರ್ಷಗಳ ಪ್ರೀತಿಗೆ ಈಗ ಮದುವೆ ಮುದ್ರೆ ಬಿದ್ದಿದೆ.
ಮದುವೆಗೆ ಟ್ರೋಫಿ ಉಡುಗೊರೆ
ಮನೀಶ್ ಹಸೆಮಣೆಗೇರುವ ಮುನ್ನಾದಿನ, ಡಿಸೆಂಬರ್ 1ರಂದು ಪಾಂಡೆ ನಾಯಕತ್ವದ ಕರ್ನಾಟಕ ತಂಡ, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಚಾಂಪಿಯನ್ ಪಟ್ಟ ಜಯಿಸಿತ್ತು. ಫೈನಲ್ನಲ್ಲಿ ತಮಿಳುನಾಡು ತಂಡವನ್ನು ಕರ್ನಾಟಕ 1 ರನ್ನಿಂದ ಸೋಲಿಸಿತ್ತು.
ಗಟ್ಟಿಮೇಳ.. ಗಟ್ಟಿಮೇಳ.. ಪ್ರೇರಣಾ ಕೊರಳಿಗೆ ಧ್ರುವ ಸರ್ಜಾ ಮಾಂಗಲ್ಯಧಾರಣೆ
ಭಾರತ ಪರ ಬ್ಯಾಟಿಂಗ್
ಟೀಮ್ ಇಂಡಿಯಾ ಪರ ಪಾಂಡೆ 23 ಏಕದಿನ, 32 ಟಿ20ಐ ಪಂದ್ಯಗಳನ್ನಾಡಿದ್ದಾರೆ. ಕ್ರಮವಾಗಿ 440, 587 ರನ್ ಗಳಿಸಿದ್ದಾರೆ. 120 ಐಪಿಎಲ್ ಇನ್ನಿಂಗ್ಸ್ಗಳಲ್ಲಿ ಮನೀಶ್ 2,843 ರನ್ ಕಲೆ ಹಾಕಿದ್ದಾರೆ.