Don't Miss!
- News 2024ರ ಲೋಸಕಭೆ ಚುನಾವಣೆಗೆ ಮತ ಹಾಕುವುದು ಹೇಗೆ?
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಚಿತ್ರದಲ್ಲಿ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಮಿತ್ರ ವಿನೋದ್ ಕಾಂಬ್ಳಿ ಕನ್ನಡ ಚಿತ್ರರಂದಲ್ಲಿ ಅಭಿನಯಿಸಲಿದ್ದಾರೆ. ಈಗವರು ಕ್ರಿಕೆಟ್ ಆಡದೇ ಇದ್ದರೂ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ, ಕ್ರಿಕೆಟ್ ಕಾಮೆಂಟ್ರಿಯಲ್ಲಿ ಬಿಜಿಯಾಗಿದ್ದಾರೆ.
ಈಗವರು ಕನ್ನಡಕ್ಕೆ ಅಡಿಯಿಡುತ್ತಿರುವುದು 'ಸಿಲ್ಕ್' ಖ್ಯಾತಿಯ ಅಕ್ಷಯ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಬೆತ್ತನಗೆರೆ ಚಿತ್ರದಲ್ಲಿ. ಈ ಬಗ್ಗೆ ಚಿತ್ರತಂಡ ಜಾಹೀರಾತನ್ನೂ ಕೊಟ್ಟಿದೆ.
ಈ ಚಿತ್ರದಲ್ಲಿ ವಿನೋದ್ ಕಾಂಬ್ಳಿ ಅವರದು ಅತಿಥಿ ಪಾತ್ರವೋ ಅಥವಾ ವಿಶೇಷ ಪಾತ್ರವೋ ಗೊತ್ತಿಲ್ಲ. ಈ ಬಗ್ಗೆ ಚಿತ್ರದ ನಿರ್ದೇಶಕ ಮೋಹನ್ ಗೌಡ ಹೇಳುವುದೇನೆಂದರೆ, "ಅವರದು ವಿಭಿನ್ನ ಪಾತ್ರ. ಇದಕ್ಕೆ ಅವರೇ ಸೂಕ್ತ ಎನ್ನಿಸಿ ಸಂಪರ್ಕಿಸಿದೆವು. ಇಂಪ್ರೆಸ್ ಆದ ಅವರು ಒಪ್ಪಿಕೊಂಡಿದ್ದಾರೆ" ಎಂದಿದ್ದಾರೆ.
ಬೆತ್ತನಗೆರೆ ಚಿತ್ರದ ಮತ್ತೊಬ್ಬ ನಾಯಕ ನಟ ಸುಮಂತ್. ದೆಹಲಿ ಮೂಲಕ ನಯನಾ ಚಿತ್ರದ ನಾಯಕಿ. ಇದು ನೈಜ ಘಟನೆ ಆಧಾರಿತ ಚಿತ್ರ. ಇದೇ ಅ.31ರಂದು ಚಿತ್ರ ಸೆಟ್ಟೇರುತ್ತಿದೆ.
ಬೆತ್ತನಗೆರೆಯ ಸೀನನ ಎನ್ ಕೌಂಟರ್ ಆದದ್ದೇ ತಡ ಸ್ಯಾಂಡಲ್ ವುಡ್ ನಲ್ಲಿ ಬೆತ್ತನಗೆರೆ ಅನ್ನೋ ಟೈಟಲ್ ಗಾಗಿ ಕಿತ್ತಾಟಗಳೇ ಶುರುವಾಗಿದ್ವು. ಅಶ್ವಿನಿ ಆಡಿಯೋದ ಅಶ್ವಿನಿ ರಾಮ್ ಪ್ರಸಾದ್ ಸೇರಿದಂತೆ ಆರೇಳು ನಿರ್ಮಾಪಕರು ಈ ಒಂದೇ ಟೈಟಲ್ ಗೆ ಮುಗಿಬಿದ್ದಿದ್ರು ಮುಂದೆ ಓದಿ...(ಏಜೆನ್ಸೀಸ್)