Don't Miss!
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದಲ್ಲ ಎರಡಲ್ಲ.. ದುನಿಯಾ ವಿಜಯ್ ಕಿರಿಕ್ ಗಳ ಪಟ್ಟಿ ನೋಡಿ
Recommended Video
ನಟ ದುನಿಯಾ ವಿಜಯ್ ಮೇಲಿಂದ ಮೇಲೆ ಕಿರಿಕ್ ಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಮಾಡಿರುವ ಹೆಸರನ್ನು ತಮ್ಮ ಪುಂಡಾಟಗಳ ಮೂಲಕ ಕಳೆದುಕೊಳ್ಳುತ್ತಿದ್ದಾರೆ.
ಜಿಮ್ ಟ್ರೈನರ್ ಪಾನಿ ಪುರಿ ಕಿಟ್ಟಿಯ ಅಣ್ಣನ ಮಗ ಮಾರುತಿ ಗೌಡ ಎನ್ನುವವರನ್ನ ದುನಿಯಾ ವಿಜಯ್ ಹಾಗೂ ಮಣಿಪ್ರಸಾದ್ ಕಿಡ್ನಾಪ್ ಮಾಡಿದ್ದರು. ಈ ಸಂಬಂಧ ಈಗಾಗಲೇ ನಟ ದುನಿಯಾ ವಿಜಯ್ ರನ್ನ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ದುನಿಯಾ ವಿಜಯ್ ತನಿಖೆಗೆ ಸಿಸಿಬಿ : ಡಿಸಿಎಂ ಪರಮೇಶ್ವರ್ ಪ್ರತಿಕ್ರಿಯೆ
ದುನಿಯಾ ವಿಜಯ್ ಗೆ ಈ ರೀತಿಯ ಪ್ರಕರಣಗಳು ಹೊಸತೇನಲ್ಲ. ಪೊಲೀಸ್ ಠಾಣೆಯಲ್ಲಿ ವಿಜಯ್ ವಿರುದ್ಧ ಸಾಲು ಸಾಲು ಪ್ರಕರಣಗಳು ದಾಖಲಾಗಿವೆ. ಅಂದಹಾಗೆ, ದುನಿಯಾ ವಿಜಯ್ ಈ ಹಿಂದೆ ಮಾಡಿಕೊಂಡ ಕಿರಿಕ್ ಗಳ ಪಟ್ಟಿ ಮುಂದಿದೆ ಓದಿ....
ಪತ್ನಿ ನಾಗರತ್ನಗೆ ಜೀವ ಬೆದರಿಕೆ
ದುನಿಯಾ ವಿಜಯ್ ತಮ್ಮ ಪತ್ನಿ ನಾಗರತ್ನ ಅವರಿಗೆ ಜೀವ ಬೆದರಿಕೆ ಹಾಕಿದ್ದ. ಜೊತೆಗೆ ಅವರ ಸಂಬಂಧಿ ಶಿವಶಂಕರಗೌಡ ಎಂಬಾತನಿಗೆ ಹಲ್ಲೆಗೆ ಪ್ರಯತ್ನ ಮಾಡಿದ್ದ. 2013 ಜನವರಿಯಲ್ಲಿ ಈ ಘಟನೆ ನೆಡೆದಿತ್ತು. ಸಿಕೆ ಅಚ್ಚುಕಟ್ಟು ಪೊಲೀಸರು ಈ ಪ್ರಕರಣಗಳನ್ನು ನಿಭಾಹಿಸಿದ್ದರು.
ದುನಿಯಾ ವಿಜಯ್ ಮೇಲೆ ಮತ್ತೊಂದು ಕೇಸ್ : ನಿವೃತ್ತ ಯೋಧನಿಗೆ ಕೋಲೆ ಬೆದರಿಕೆ ಆರೋಪ
'ಮಾಸ್ತಿಗುಡಿ' ಪ್ರಕರಣ
ಮಾಸ್ತಿಗುಡಿ ಚಿತ್ರದಲ್ಲಿ ಆದ ಅನಾಹುತ ಎಲ್ಲರಿಗೂ ತಿಳಿದಿದೆ. ಇದೆ. ಚಿತ್ರದ ಶೂಟಿಂಗ್ ನಲ್ಲಿ ಅನಿಲ್, ಉದಯ್ ನೀರಿನಲ್ಲಿ ಮುಳುಗಿ ವಿಧಿವಶರಾದರು. ಈ ಪ್ರಕರಣದ ತನಿಖೆಯ ವೇಳೆ ನಿರ್ಮಾಪಕ ಸುಂದರ್ ಪಿ ಗೌಡಗೆ ತಪ್ಪಿಸಿಕೊಳ್ಳಲು ವಿಜಿ ಸಹಾಯ ಮಾಡಿದ್ದ. ಬಳಿಕ ಸುಂದರ್ ಪಿ ಗೌಡ ಹಾಗೂ ದುನಿಯಾ ವಿಜಯ್ ಇಬ್ಬರು ಪೋಲೀಸರ ಅತಿಥಿ ಆಗಿದ್ದರು.
ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣದಲ್ಲಿ ದುನಿಯಾ ವಿಜಯ್ ಬಂಧನ
ವೃದ್ಧ ವ್ಯಕ್ತಿಗೆ ಹಲ್ಲೆ
ವೃದ್ಧ ವ್ಯಕ್ತಿಯೊಬ್ಬರಿಗೆ ಎದೆಗೆ ಒದ್ದು ದುನಿಯಾ ವಿಜಯ್ ಹಲ್ಲೆ ಮಾಡಿದ್ದರು. ಘಟನೆಯ ಬಳಿಕ ಚೆನ್ನಮ್ಮನ ಅಚ್ಚುಕಟ್ಟು ಠಾಣೆಯಲ್ಲಿ ವಿಜಿ ಅರೆಸ್ಟ್ ಆಗಿದ್ದರು. ಆದರೆ, ಬೇಲ್ ಪಡೆದು ಹೊರ ಬಂದ ವಿಜಿಗೆ ಪೋಲೀಸರು ಮತ್ತೆ ರೀತಿ ಮಾಡಬೇಡ ಎಂದು ವಾರ್ನ್ ಮಾಡಿದ್ದರು.
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪ
ಚೆನ್ನಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಕರಿಚಿರತೆ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿತ್ತು. 2018 ರಲ್ಲಿ ಪೊಲೀಸರ ಕರ್ತವ್ಯಕ್ಕೆ ವಿಜಿ ಅಡ್ಡಿಪಡಿಸಿದ್ದರು ಹಾಗೂ ಕರ್ತವ್ಯ ನಿರತ ಪೊಲೀಸ್ ಜೊತೆ ಮಾತು ಬೆಳೆಸಿದ್ದರು ಈ ಆರೋಪದಲ್ಲಿ ವಿಜಿ ವಿರುದ್ಧ 31 ಐಪಿಸಿ ಕಲಂ 353 ಪ್ರಕಾರ ಎಫ್ಐಆರ್ ದಾಖಲಾಗಿತ್ತು.
ಇಂದಿನ ಘಟನೆ
ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ದುನಿಯಾ ವಿಜಿ ತಂಡ ಹಾಗೂ ಟ್ರೈನರ್ ಮಾರುತಿ ಗೌಡ ನಡುವೆ ಜಗಳ ಶುರುವಾಗಿತ್ತು. ಬಳಿಕ ಮಾರುತಿ ಗೌಡ ಎನ್ನುವವರನ್ನ ದುನಿಯಾ ವಿಜಯ್ ಹಾಗೂ ಮಣಿಪ್ರಸಾದ್ ಕಿಡ್ನಾಪ್ ಮಾಡಿದ್ದರು. ಈ ಹಿನ್ನಲೆಯಲ್ಲಿ ನಟ ದುನಿಯಾ ವಿಜಯ್ ರನ್ನ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.