Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮೆಜೆಸ್ಟಿಕ್' ನಿರ್ಮಾಪಕರ ಜೊತೆ ದರ್ಶನ್ ಹ್ಯಾಟ್ರಿಕ್ ಸಿನಿಮಾ
ನಟ ದರ್ಶನ್ ಅಭಿನಯದ ಸಾಲು ಸಾಲು ಸಿನಿಮಾಗಳು ಶುರು ಆಗುತ್ತಿವೆ. ಇದೀಗ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಜೊತೆಗೆ ಮತ್ತೊಬ್ಬ ನಿರ್ಮಾಪಕರು ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ.
ದರ್ಶನ್ ಮೊದಲ ಸಿನಿಮಾ 'ಮೆಜಸ್ಟಿಕ್'ಗೆ ಹಣ ಹಾಕಿದ್ದ ನಿರ್ಮಾಪಕ ರಾಮಮೂರ್ತಿ ಈಗ ದಶಕಗಳ ನಂತರ ಮತ್ತೆ ಡಿ ಬಾಸ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ವಿಶೇಷ ಅಂದರೆ, ಈ ಸಿನಿಮಾ ಈ ಜೋಡಿಯ ಹ್ಯಾಟ್ರಿಕ್ ಚಿತ್ರ.
ಕನ್ನಡದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ 5 ಟ್ರೈಲರ್: ಯಜಮಾನ, ಕೆಜಿಎಫ್ ಎಷ್ಟನೇ ಸ್ಥಾನ?
ಈ ಚಿತ್ರತಂಡ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ನೀಡಿದೆ. ದರ್ಶನ್ ಹುಟ್ಟುಹಬ್ಬದ ದಿನ ಈ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಲಿದೆ. ಅಂದಹಾಗೆ, ದರ್ಶನ್ ಹಾಗೂ ಎಮ್ ಜಿ ರಾಮಮೂರ್ತಿ ಕಾಂಬಿನೇಶನ್ ನಲ್ಲಿ ಬರುತ್ತಿರುವ ಆ ಸಿನಿಮಾದ ವಿವರ ಮುಂದಿದೆ ಓದಿ...
'ಡಿ 55' ಅನೌನ್ಸ್
ದರ್ಶನ್ ಹಾಗೂ ಎಮ್ ಜಿ ರಾಮಮೂರ್ತಿ ಕಾಂಬಿನೇಶನ್ ಸಿನಿಮಾಗೆ ಸದ್ಯಕ್ಕೆ 'ಡಿ 55' ಎಂಬ ಹೆಸರಿನ್ನು ಇಡಲಾಗಿದೆ. ಇದು ದರ್ಶನ್ ನಟನೆಯ 55ನೇ ಸಿನಿಮಾವಾಗಿದೆ. ಈ ಸಿನಿಮಾದ ದರ್ಶನ್ ಹುಟ್ಟುಹಬ್ಬದ ವಿಶೇಷವಾಗಿ ಅನೌನ್ಸ್ ಆಗಿಲಿದೆ. ಈ ಮೂಲಕ ಬರ್ತ್ ಡೇ ದಿನ ಅಭಿಮಾನಿಗಳಿಗೆ ಈ ತಂಡ ಗಿಫ್ಟ್ ನೀಡುತ್ತಿದೆ.
'ಯಜಮಾನ'ನ ಬಗ್ಗೆ ಟ್ವೀಟ್ ಮಾಡಿದ ಯೂಟ್ಯೂಬ್ ಸಂಸ್ಥೆ: ಕಾಲರ್ ಎತ್ತಿದ ಜಗ್ಗೇಶ್
ಹ್ಯಾಟಿಕ್ ಸಿನಿಮಾ
ದರ್ಶನ್ ಗಾಗಿ ಎಮ್ ಜಿ ರಾಮಮೂರ್ತಿ ಮಾಡುತ್ತಿರುವ ಮೂರನೇ ಸಿನಿಮಾ ಇದಾಗಿದೆ. 'ಮೆಜೆಸ್ಟಿಕ್' ಬಳಿಕ 'ಧರ್ಮ' ಕೂಡ ಎಮ್ ಜಿ ರಾಮಮೂರ್ತಿ ನಿರ್ಮಾಣದ ಸಿನಿಮಾವಾಗಿತ್ತು. ಇದೀಗ 15 ವರ್ಷಗಳ ನಂತರ ಮತ್ತೆ ರಾಮಮೂರ್ತಿ ಬ್ಯಾನರ್ ನಲ್ಲಿ ದರ್ಶನ್ ಸಿನಿಮಾ ಮಾಡುತ್ತಿದ್ದಾರೆ.
ಯಜಮಾನನ ಈ ಎರಡು ಡೈಲಾಗ್ ಬಗ್ಗೆ ಇಂತಹದೊಂದು ಚರ್ಚೆ.!
ನಿರ್ದೇಶಕರು ಯಾರು ?
ದರ್ಶನ್ ಅವರ ಈ ಹೊಸ ಸಿನಿಮಾದ ನಿರ್ದೇಶಕರು ಯಾರು? ಎನ್ನುವುದು ಇನ್ನು ರಿವೀಲ್ ಆಗಿಲ್ಲ. ರಾಮಮೂರ್ತಿ ಹಾಗೂ ದರ್ಶನ್ ಚಿತ್ರದ ಟೈಟಲ್ 'ಮದಗಜ' ಆಗಬೇಕಾಗಿತ್ತು. ಆದರೆ, ಆ ಟೈಟಲ್ ಅನ್ನು ಶ್ರೀಮುರಳಿ ಸಿನಿಮಾಗೆ ದರ್ಶನ್ ಬಿಟ್ಟು ಕೊಟ್ಟರು.
ದರ್ಶನ್ ಮುಂದಿನ ಸಿನಿಮಾಗಳು
ಮಾರ್ಚ್ 1 ರಂದು 'ಯಜಮಾನ' ಸಿನಿಮಾ ಬಿಡುಗಡೆಯಾಗುತ್ತಿದೆ. 'ಕುರುಕ್ಷೇತ್ರ' ರಿಲೀಸ್ ಗೆ ರೆಡಿ ಇದೆ. ಇದರ ನಂತರ ನಟ ದರ್ಶನ್ 'ಒಡೆಯ', 'ರಾಬರ್ಟ್', 'ಮದಕರಿ ನಾಯಕ' ಸಿನಿಮಾಗಳಲ್ಲಿ ದರ್ಶನ್ ನಟಿಸುತ್ತಿದ್ದಾರೆ.