Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಟ್ರ 'ದನ ಕಾಯೋನು' ಬಿಡುಗಡೆಗೆ ಮುಹೂರ್ತ ಇಟ್ಟಾಯ್ತು
ಯೋಗರಾಜ್ ಭಟ್ರು ಮತ್ತು ದುನಿಯಾ ವಿಜಯ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ದನ ಕಾಯೋನು' ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದೆ.
ತರಾತುರಿಯಲ್ಲಿ ಸೆನ್ಸಾರ್ ಪರೀಕ್ಷೆ ಮುಗಿಸಿ, ಇದೀಗ ಪ್ರಮಾಣಪತ್ರ ಪಡೆದುಕೊಂಡ 'ದನ ಕಾಯೋನು' ದಸರಾ ಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆಯಾಗಿ ಬಿಡುಗಡೆ ಆಗ್ತಾ ಇದೆ.[ದಸರಾ ಹಬ್ಬಕ್ಕೆ ನಟಿ ಪ್ರಿಯಾಮಣಿಗೆ ಅಗ್ನಿಪರೀಕ್ಷೆ !]
ಸಾಕಷ್ಟು ಕುತೂಹಲ ಹುಟ್ಟು ಹಾಕಿರುವ 'ದನ ಕಾಯೋನು' ಚಿತ್ರದಲ್ಲಿ ದುನಿಯಾ ವಿಜಿ ಅವರಿಗೆ ನಟಿ ಪ್ರಿಯಾಮಣಿ ಅವರು ಸಾಥ್ ಕೊಟ್ಟಿದ್ದಾರೆ. ಹಳ್ಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಈ ಚಿತ್ರದ ಚಿತ್ರೀಕರಣ ನಡೆದಿದ್ದು, ಪ್ರಿಯಾಮಣಿ ಮತ್ತು ದುನಿಯಾ ವಿಜಯ್ ಅವರು ಅಪ್ಪಟ ಮಣ್ಣಿನ ಮಕ್ಕಳ ಅವತಾರದಲ್ಲಿ ಮಿಂಚಿದ್ದಾರೆ. ಮುಂದೆ ಓದಿ...
ಸೆನ್ಸಾರ್ ನಲ್ಲಿ ಗ್ರೀನ್ ಸಿಗ್ನಲ್
ಯೋಗರಾಜ್ ಭಟ್ರ ಬಹು ನಿರೀಕ್ಷೆಯ 'ದನ ಕಾಯೋನು' ಸಿನಿಮಾ ನೋಡಿದ ಸೆನ್ಸಾರ್ ಮಂಡಳಿ 'ಯು' ಪ್ರಮಾಣಪತ್ರ ನೀಡುವ ಮೂಲಕ, ಸಿನಿಮಾ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದೆ.[ವಿಡಿಯೋ: ದುನಿಯಾ ವಿಜಿ-ಭಟ್ರ 'ಕಾವೇರಿ ಗಾನ'ದ ಸಣ್ಣ ಝಲಕ್]
ಯಾವಾಗ ರಿಲೀಸ್?
ದಸರಾ ಹಬ್ಬದ ಸಂದರ್ಭದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಅಂತ, ಭಟ್ರು ಈ ಮೊದಲೇ ಹೇಳಿದ್ದರು. ಇದೀಗ ಕೊಟ್ಟ ಮಾತಿನಂತೆ ಇದೇ ವಾರ ಅಂದ್ರೆ, ಅಕ್ಟೋಬರ್ 7 ರಂದು ಇಡೀ ಕರ್ನಾಟಕದಾದ್ಯಂತ ಗ್ರ್ಯಾಂಡ್ ಆಗಿ 'ದನ ಕಾಯೋನು' ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಬೆಂಗಳೂರಿನ ಅನುಪಮ ಚಿತ್ರಮಂದಿರದಲ್ಲಿ 'ದನ ಕಾಯೋನು' ತೆರೆ ಕಾಣುತ್ತಿದೆ.[ಧನ ಬೇಕು ಅಂದರೆ ಇನ್ನೊಂದಷ್ಟು ದಿನ ದನ ಕಾಯಬೇಕು!]
ಮೊದಲ ಬಾರಿಗೆ ವಿಜಿಗೆ 'ಯು' ಪ್ರಮಾಣಪತ್ರ
ಇನ್ನು ನಟ ದುನಿಯಾ ವಿಜಯ್ ಅವರ ಸಿನಿ ಜರ್ನಿಯಲ್ಲಿ ಮೊಟ್ಟ ಮೊದಲ ಬಾರಿಗೆ 'ಯು' ಪ್ರಮಾಣಪತ್ರ ಪಡೆದುಕೊಂಡಿದ್ದಾರೆ. ಇದುವರೆಗೆ ಅವರು ನಟಿಸಿರುವ ಯಾವೊಂದು ಸಿನಿಮಾಗಳಿಗೂ ಬರೀ 'ಯು' ಪ್ರಮಾಣಪತ್ರ ದೊರೆತಿರಲಿಲ್ಲವಂತೆ.
ಚಿತ್ರ-ವಿಚಿತ್ರ ಹೆಸರುಗಳು
ಯೋಗರಾಜ್ ಭಟ್ರ ಸಿನಿಮಾ ಅಂದ್ರೆ ಹಾಗೆ, ಅದರಲ್ಲಿ ಕೊಂಚ ವಿಭಿನ್ನತೆ ಇರಲೇಬೇಕು. ಅವರು ತಮ್ಮ ಚಿತ್ರದಲ್ಲಿ ಪಾತ್ರಧಾರಿಗಳಿಗೆ ನೀಡುವ ಹೆಸರೂ ಕೂಡ ಭಿನ್ನ-ವಿಭಿನ್ನ. ಅಂದಹಾಗೆ ಈ ಚಿತ್ರದಲ್ಲಿ ನಟ ದುನಿಯಾ ವಿಜಯ್ ಅವರ ಹೆಸರು ಕೆಂಪರಾಜು ಅಲಿಯಾಸ್ ಡೊಕೊಮೊ, ನಟಿ ಪ್ರಿಯಾಮಣಿ ಅವರ ಹೆಸರು ಜಗದಾಂಬ ಅಲಿಯಾಸ್ ಜುಮ್ಮಿ ಅಂತಾದ್ರೆ, ರಂಗಾಯಣ ರಘು ಅವರ ಹೆಸರು ಸಬ್ಸಿಡಿ ಶಾಮಣ್ಣ ಎಂದಿದೆ.