Don't Miss!
- News ವೃದ್ಧರ ಗೌಪ್ಯ ಮತದಾನ ವೇಳೆ ಅಕ್ರಮ: ಸಿಪಿಎಂ ಏಜೆಂಟ್ ಹಸ್ತಕ್ಷೇಪ: Video Viral
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ದಂಡುಪಾಳ್ಯ' ನಿರ್ದೇಶಕನ ಹೊಸ ಸಿನಿಮಾದಲ್ಲಿ ಪೂಜಾ ಗಾಂಧಿ
'ಮುಂಗಾರು ಮಳೆ' ಸಿನಿಮಾದಿಂದ ಕನ್ನಡಕ್ಕೆ ಪರಿಚಯವಾದ ಪೂಜಾ ಗಾಂಧಿ ಒಂದುವರೆ ದಶಕದಿಂದಲೂ ಹೆಚ್ಚು ಕಾಲದಿಂದ ಕನ್ನಡ ಸಿನಿಮಾರಂಗದ ಭಾಗವೇ ಆಗಿದ್ದಾರೆ.
ರಾಜಕೀಯದಲ್ಲಿಯೂ ಒಂದು ಕೈ ನೋಡಿ ಬಂದ ಪೂಜಾ ಗಾಂಧಿ 2018 ರ ಬಳಿಕ ಮೂರು ವರ್ಷ ಯಾವ ಸಿನಿಮಾವನ್ನೂ ಒಪ್ಪಿಕೊಂಡಿರಲಿಲ್ಲ. ವರ್ಷಾರಂಭದಲ್ಲಿ ಕೆ.ಎಸ್.ಜವಾಹರ್ ನಿರ್ದೇಶನದ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದ ಪೂಜಾ ಈಗ ಮತ್ತೊಂದು ಸಿನಿಮಾಕ್ಕೆ ಸಹಿ ಹಾಕಿದ್ದಾರೆ.
ಪೂಜಾ ಗಾಂಧಿಗೆ ಭಿನ್ನ ಲುಕ್ ತಂದುಕೊಟ್ಟ 'ದಂಡುಪಾಳ್ಯ' ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀನಿವಾಸ ರಾಜು ನಿರ್ದೇಶಿಸಲಿರುವ ಹೊಸ ಸಿನಿಮಾದಲ್ಲಿ ಪೂಜಾ ಗಾಂಧಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪೂಜಾ ಗಾಂಧಿ ಅವರದ್ದು ಮುಖ್ಯ ಪಾತ್ರ.
ಪೂಜಾ ಗಾಂಧಿ-ಶ್ರೀನಿವಾಸ ರಾಜು ಕಾಂಬಿನೇಷನ್ನ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಹೊಂದಿರಲಿದ್ದು, ಈಗಾಗಲೇ ಸಿನಿಮಾದ ಚಿತ್ರೀಕರಣ ಆರಂಭವಾಗಿ ಚಿತ್ರೀಕರಣ 50% ಮುಗಿದಿದೆಯಂತೆ. ಈ ಸಿನಿಮಾವು ಕನ್ನಡ ಮಾತ್ರವೇ ಅಲ್ಲದೆ ದಕ್ಷಿಣ ಭಾರತದ ಇತರ ಭಾಷೆಗಳಲ್ಲಿಯೂ ಬಿಡುಗಡೆ ಆಗಲಿದೆ.
2012 ರಲ್ಲಿ ಮೊದಲ ಬಾರಿಗೆ ಶ್ರೀನಿವಾಸ ರಾಜು 'ದಂಡುಪಾಳ್ಯ' ಸಿನಿಮಾ ನಿರ್ದೇಶಿಸಿದ್ದರು ಆ ಬಳಿಕ 2017 ಹಾಗೂ 2018 ರಲ್ಲಿ ದಂಡುಪಾಳ್ಯ 2 ಹಾಗೂ ದಂಡುಪಾಳ್ಯ 3 ಸಿನಿಮಾಗಳನ್ನು ನಿರ್ದೇಶಿಸಿದರು.
Recommended Video
ದಂಡುಪಾಳ್ಯ 3 ಬಳಿಕ ಇನ್ನಾವ ಸಿನಿಮಾದಲ್ಲಿಯೂ ನಟಿಸದಿದ್ದ ಪೂಜಾ ಗಾಂಧಿ ಈಗ 'ಸಂಹಾರಿಣಿ' ಹೆಸರಿನ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ ಜೊತೆಗೆ ಈಗ ಶ್ರೀನಿವಾಸ ರಾಜು ನಿರ್ದೇಶನದ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.