Don't Miss!
- Lifestyle ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
- News ಮಳೆ ಬರದೇ ಇದ್ದರೆ ಮುಗೀತು ಕಥೆ!
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸ್ಟಾರ್' ನಿರ್ದೇಶಕನ ಚಿತ್ರಕ್ಕೆ ಆಯ್ಕೆಯಾದ 'ಕುರುಕ್ಷೇತ್ರ'ದ ಭೀಮ.!
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿರುವ ಪೌರಾಣಿಕ ಚಿತ್ರ 'ಕುರುಕ್ಷೇತ್ರ'ದಲ್ಲಿ ಬಾಲಿವುಡ್ ನಟ ಡ್ಯಾನಿಶ್ ಅಖ್ತರ್ ಸೈಫ್ ನಟಿಸಿದ್ದಾರೆ. ದರ್ಶನ್ ದುರ್ಯೋಧನನಾಗಿ ಅಬ್ಬರಿಸಿದ್ರೆ, 'ಡಿ-ಬಾಸ್' ಗೆ ಪ್ರತಿಸ್ಪರ್ಧಿಯಾಗಿ ಅಂದ್ರೆ, ಭೀಮನ ಪಾತ್ರದಲ್ಲಿ ಡ್ಯಾನಿಶ್ ಘರ್ಜಿಸಿದ್ದಾರೆ.
ಇದು ಡ್ಯಾನಿಶ್ ಗೆ ಮೊದಲ ಕನ್ನಡ ಸಿನಿಮಾ. ಈಗಾಗಲೇ ಕುರುಕ್ಷೇತ್ರ ಚಿತ್ರವನ್ನ ಸಂಪೂರ್ಣವಾಗಿ ಮುಗಿಸಿ, ಬಿಡುಗಡೆಗಾಗಿ ಕಾಯ್ತಿದ್ದಾರೆ. ಈ ನಡುವೆ ಡ್ಯಾನಿಶ್ ಮತ್ತೊಂದು ಕನ್ನಡ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ.
'ಕುರುಕ್ಷೇತ್ರ' ಶೂಟಿಂಗ್ ಸೆಟ್ ನಲ್ಲಿ 'ಭೀಮ'ನ ಹುಟ್ಟುಹಬ್ಬ ಆಚರಣೆ
ಇದು ಚಿಕ್ಕ ಸಿನಿಮಾ ಅಲ್ಲ, ಇದು ಬಹುಭಾಷೆಯಲ್ಲಿ ತಯಾರಾಗ್ತಿರುವ ಮೆಗಾ ಸಿನಿಮಾ. ಈ ಚಿತ್ರಕ್ಕೆ ಕನ್ನಡದ ಹೆಸರಾಂತ ನಿರ್ದೇಶಕ ಆಕ್ಷನ್ ಕಟ್ ಹೇಳ್ತಿದ್ದಾರೆ. ಅಷ್ಟಕ್ಕೂ, ಡ್ಯಾನಿಶ್ ಅವರ ಎರಡನೇ ಕನ್ನಡ ಸಿನಿಮಾ ಯಾವುದು? ಯಾರು ಈ ಚಿತ್ರದ ನಿರ್ದೇಶಕ.? ಮುಂದೆ ಓದಿ.....
ದೇಸಾಯಿ ನಿರ್ದೇಶನದಲ್ಲಿ 'ಭೀಮ'
ಪೌರಾಣಿಕ ಚಿತ್ರದಲ್ಲಿ ಭೀಮನಾಗಿದ್ದ ಡ್ಯಾನಿಶ್ ಅಖ್ತರ್ ಸೈಫ್ ಈಗ ಕನ್ನಡದ ಸ್ಟಾರ್ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ ಅವರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚೊಚ್ಚಲ ಸಿನಿಮಾ ಬಿಡುಗಡೆಯಾಗದಿರುವಾಗಲೇ ಇನ್ನೊಂದು ದೊಡ್ಡ ಸಿನಿಮಾಗೆ ಡ್ಯಾನಿಶ್ ಆಯ್ಕೆಯಾಗಿದ್ದಾರೆ. ಈಗಾಗಲೇ ದೇಸಾಯಿ ಚಿತ್ರದಲ್ಲಿ ಸೈಫ್ ನಟಿಸಿದ್ದಾರೆ.
ದೇಸಾಯಿ ಬಿಟ್ಟ ಪೋಸ್ಟರ್ ಗಳ ಹಿಂದಿನ ಅರ್ಥ ಏನು?
'ಉದ್ಘರ್ಷ' ಸೇರಿದ ಡ್ಯಾನಿಶ್
ಸುನೀಲ್ ಕುಮಾರ್ ದೇಸಾಯಿ ನಿರ್ದೇಶನ ಮಾಡ್ತಿರುವ ಸಸ್ಪೆನ್ಸ್ ಥ್ರಿಲ್ಲರ್ 'ಉದ್ಘರ್ಷ' ಚಿತ್ರದಲ್ಲಿ ಡ್ಯಾನಿಶ್ ಅಭಿನಯಿಸಿದ್ದಾರೆ. ಪಾತ್ರದ ಬಗ್ಗೆ ಸದ್ಯಕ್ಕೆ ಸ್ಪಷ್ಟನೆ ಸಿಕ್ಕಿಲ್ಲವಾದರೂ, ಉದ್ಘರ್ಷಕ್ಕೆ ಮತ್ತೊಬ್ಬ ಅಜಾನುಬಾಹು ಸೇರಿಕೊಂಡಿರುವುದು ತೀರಾ ಕುತೂಹಲ ಕೆರಳಿಸಿದೆ. ಈ ವಿಷ್ಯವನ್ನ ಖುದ್ದು ನಿರ್ದೇಶಕರೇ ಖಚಿತಪಡಿಸಿದ್ದು, ಶೂಟಿಂಗ್ ಸೆಟ್ ನಲ್ಲಿದ್ದ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ.
ಕನ್ನಡ, ತಮಿಳು ಎರಡು ಭಾಷೆಗಳಲ್ಲಿ ಡಬ್ಬಿಂಗ್ ಮುಗಿಸಿದ 'ಉದ್ಘರ್ಷ'
ಸೌತ್ ಸ್ಟಾರ್ ನಟರು
ಅಂದ್ಹಾಗೆ, ಉದ್ಘರ್ಷ ಸಿನಿಮಾ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿದ್ಧವಾಗ್ತಿದೆ. ರಜನಿಕಾಂತ್ 'ಕಬಾಲಿ' ಚಿತ್ರದಲ್ಲಿ ಅಭಿನಯಿಸಿದ್ದ ಸಾಯಿ ಧನ್ಸಿಕಾ ಮತ್ತು ಬಹುಭಾಷಾ ನಟ ಠಾಕೂರ್ ಅನೂಪ್ ಸಿಂಗ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಇವರ ಜೊತೆಗೆ ಕಬೀರ್ ದುಹಾನ್ ಸಿಂಗ್, ಹರ್ಷಿಕಾ ಪೂಣಚ್ಚ ಮತ್ತು ಕಿಶೋರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ದೇಸಾಯಿ 'ಉದ್ಘರ್ಷ'ಕ್ಕೆ ಆವೇಶ ಮತ್ತು ಆಕ್ರೋಶದ 'ಸ್ಪರ್ಶ'
ಕುತೂಹಲ ಮೂಡಿಸಿರುವ ಉದ್ಘರ್ಷ
ಮೇಕಿಂಗ್ ನಿಂದಲೇ ಹೆಚ್ಚು ಕುತೂಹಲ ಮೂಡಿಸಿರುವ ದೇಸಾಯಿ ಅವರ ಈ ಸಿನಿಮಾ ಆಲ್ ಮೋಸ್ಟ್ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿದೆ. ಎಲ್ಲಾ ಅಂದುಕೊಂಡಂತೆ ಆದ್ರೆಮ ಜನವರಿಯಲ್ಲಿ ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರವನ್ನು ಡಿ ಕ್ರಿಯೇಷನ್ಸ್ ಅಡಿಯಲ್ಲಿ ದೇವರಾಜ್ R ನಿರ್ಮಿಸುತ್ತಿದ್ದು, ಅವರ ಮಿತ್ರರಾದ ಮಂಜುನಾಥ್ .ಡಿ , ತಿರುಮಲೈ , ರಾಜೇಂದ್ರ ಕುಮಾರ್ ಸಹ ನಿರ್ಮಾಪಕರರಾಗಿ ಕೈ ಜೋಡಿಸಿದ್ದಾರೆ. ಚಿತ್ರದ ಕಥಾವಸ್ತು ವಿಭಿನ್ನವಾಗಿದ್ದು ಅದಕ್ಕೆ M.S ಧೋನಿ , ಬೇಬೀ, ಏ ವೆಡ್ನೆಸ್ಡೇ ಖ್ಯಾತಿಯ ಸಂಜೋಯ್ ಚೌದುರಿ ಸಂಗೀತ ಸಂಯೋಜಿಸುತ್ತಿದ್ದಾರೆ. ವಿಷ್ಣು ವರ್ಧನ್ ಹಾಗೂ P.ರಾಜನ್ ಅವರ ಛಾಯಾಗ್ರಹಣವಿದೆ. ಇನ್ನು ಚಿತ್ರಕ್ಕೆ B.S ಕೆಂಪರಾಜು ಅವರು ಸಂಕಲನಕಾರರಾಗಿ ಕಾರ್ಯನಿರ್ವಹಿಸಿದ್ದಾರೆ.