Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕುರುಕ್ಷೇತ್ರ' ಕಟ್ ಔಟ್ ನಲ್ಲಿ ಸೀನಿಯರ್ ಮತ್ತು ಜೂನಿಯರ್
'ಕುರುಕ್ಷೇತ್ರ' ಮಹಾ ಯುದ್ಧಕ್ಕೆ ಇನ್ನು ಆರು ದಿನಗಳು ಬಾಕಿ ಇದೆ. ವರ್ಷಗಳಿಂದ ಕಾಯುತ್ತಿದ್ದ ಈ ಸಿನಿಮಾ ಇದೇ ಶುಕ್ರವಾರ ಅಂದರೆ, ಆಗಸ್ಟ್ 9 ರಂದು ಬಿಡುಗಡೆ ಆಗುತ್ತಿದೆ.
'ಕುರುಕ್ಷೇತ್ರ' ಸಂಭ್ರಮ ಈಗಾಗಲೇ ಶುರು ಆಗಿದೆ. ಚಿತ್ರಮಂದಿರದ ಮುಂದೆ ಕಟ್ ಔಟ್ ಗಳು ಕಂಗೊಳಿಸುತ್ತಿವೆ. ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಇಂದೇ ಸಿನಿಮಾದ ಕಟ್ ಔಟ್ ಹಾಕಲಾಗಿದೆ.
ವಿದೇಶದಲ್ಲಿ ಒಂದು ದಿನ ಮುಂಚಿತವಾಗಿ 'ಕುರುಕ್ಷೇತ್ರ' ಯುದ್ಧ
ಕಟ್ ಔಟ್ ನಲ್ಲಿ ದರ್ಶನ್ ಮಾತ್ರವಲ್ಲದೆ ಅಂಬರೀಶ್ ಅವರ ಚಿತ್ರ ಸಹ ಮೂಡಿದೆ. ಅಗಲಿದ ನಾಯಕನಿಗೆ ಈ ರೀತಿ 'ಕುರುಕ್ಷೇತ್ರ' ಚಿತ್ರತಂಡ ನಮನ ಸಲ್ಲಿಸಿದೆ. ಇದೊಂದು ಮಲ್ಟಿಸ್ಟಾರ್ ಸಿನಿಮಾ ಆಗಿದ್ದು, ಉಳಿದ ನಾಯಕರ ಪೋಸ್ಟರ್ ಗಳೂ ಚಿತ್ರಮಂದಿರದಲ್ಲಿ ಇರಲಿದೆ.
ಕರ್ನಾಟಕದಲ್ಲಿ ಸಿನಿಮಾದ ಅಬ್ಬರ ಬಹಳ ಜೋರಾಗಿದೆ. ಬೆಂಗಳೂರಿನಲ್ಲಿ ನರ್ತಕಿ ಮುಖ್ಯ ಚಿತ್ರಮಂದಿರವಾಗಿದೆ. ವಿದೇಶದಲ್ಲಿ ಒಂದು ದಿನ ಮುಂಚಿತವಾಗಿ ಸಿನಿಮಾವನ್ನು ರಿಲೀಸ್ ಮಾಡಲು ವಿತರಕರು ನಿರ್ಧಾರ ಮಾಡಿದ್ದಾರೆ.
ದುರ್ಯೋಧನ ಮತ್ತು ಪೈಲ್ವಾನ ಇಬ್ಬರಲ್ಲಿಯೂ ಒಂದು ಶಕ್ತಿ ಇದೆ- ನಾಗೇಂದ್ರ ಪ್ರಸಾದ್
ದರ್ಶನ್, ಅಂಬರೀಶ್, ರವಿಚಂದ್ರನ್, ಭಾರತಿ ವಿಷ್ಣುವರ್ಧನ್, ಅರ್ಜುನ್ ಸರ್ಜಾ, ರವಿಶಂಕರ್, ನಿಖಿಲ್ ಕುಮಾರ್, ಸ್ನೇಹ ಸೇರಿದಂತೆ ಅನೇಕ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ನಾಗಣ್ಣ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಮುನಿರತ್ನ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ಬಹಳ ವರ್ಷಗಳ ನಂತರ ಒಂದು ಪೌರಾಣಿಕ ಸಿನಿಮಾ ಕನ್ನಡದಲ್ಲಿ ಬರುತ್ತಿದ್ದು, ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಇದೆ.