twitter
    For Quick Alerts
    ALLOW NOTIFICATIONS  
    For Daily Alerts

    'ಕುರುಕ್ಷೇತ್ರ' ಕಟ್ ಔಟ್ ನಲ್ಲಿ ಸೀನಿಯರ್ ಮತ್ತು ಜೂನಿಯರ್

    |

    'ಕುರುಕ್ಷೇತ್ರ' ಮಹಾ ಯುದ್ಧಕ್ಕೆ ಇನ್ನು ಆರು ದಿನಗಳು ಬಾಕಿ ಇದೆ. ವರ್ಷಗಳಿಂದ ಕಾಯುತ್ತಿದ್ದ ಈ ಸಿನಿಮಾ ಇದೇ ಶುಕ್ರವಾರ ಅಂದರೆ, ಆಗಸ್ಟ್ 9 ರಂದು ಬಿಡುಗಡೆ ಆಗುತ್ತಿದೆ.

    'ಕುರುಕ್ಷೇತ್ರ' ಸಂಭ್ರಮ ಈಗಾಗಲೇ ಶುರು ಆಗಿದೆ. ಚಿತ್ರಮಂದಿರದ ಮುಂದೆ ಕಟ್ ಔಟ್ ಗಳು ಕಂಗೊಳಿಸುತ್ತಿವೆ. ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಇಂದೇ ಸಿನಿಮಾದ ಕಟ್ ಔಟ್ ಹಾಕಲಾಗಿದೆ.

    ವಿದೇಶದಲ್ಲಿ ಒಂದು ದಿನ ಮುಂಚಿತವಾಗಿ 'ಕುರುಕ್ಷೇತ್ರ' ಯುದ್ಧ ವಿದೇಶದಲ್ಲಿ ಒಂದು ದಿನ ಮುಂಚಿತವಾಗಿ 'ಕುರುಕ್ಷೇತ್ರ' ಯುದ್ಧ

    ಕಟ್ ಔಟ್ ನಲ್ಲಿ ದರ್ಶನ್ ಮಾತ್ರವಲ್ಲದೆ ಅಂಬರೀಶ್ ಅವರ ಚಿತ್ರ ಸಹ ಮೂಡಿದೆ. ಅಗಲಿದ ನಾಯಕನಿಗೆ ಈ ರೀತಿ 'ಕುರುಕ್ಷೇತ್ರ' ಚಿತ್ರತಂಡ ನಮನ ಸಲ್ಲಿಸಿದೆ. ಇದೊಂದು ಮಲ್ಟಿಸ್ಟಾರ್ ಸಿನಿಮಾ ಆಗಿದ್ದು, ಉಳಿದ ನಾಯಕರ ಪೋಸ್ಟರ್ ಗಳೂ ಚಿತ್ರಮಂದಿರದಲ್ಲಿ ಇರಲಿದೆ.

    darshan and ambareeshs kurukshetra cut out placed in prasanna theatre

    ಕರ್ನಾಟಕದಲ್ಲಿ ಸಿನಿಮಾದ ಅಬ್ಬರ ಬಹಳ ಜೋರಾಗಿದೆ. ಬೆಂಗಳೂರಿನಲ್ಲಿ ನರ್ತಕಿ ಮುಖ್ಯ ಚಿತ್ರಮಂದಿರವಾಗಿದೆ. ವಿದೇಶದಲ್ಲಿ ಒಂದು ದಿನ ಮುಂಚಿತವಾಗಿ ಸಿನಿಮಾವನ್ನು ರಿಲೀಸ್ ಮಾಡಲು ವಿತರಕರು ನಿರ್ಧಾರ ಮಾಡಿದ್ದಾರೆ.

    ದುರ್ಯೋಧನ ಮತ್ತು ಪೈಲ್ವಾನ ಇಬ್ಬರಲ್ಲಿಯೂ ಒಂದು ಶಕ್ತಿ ಇದೆ- ನಾಗೇಂದ್ರ ಪ್ರಸಾದ್

    ದರ್ಶನ್, ಅಂಬರೀಶ್, ರವಿಚಂದ್ರನ್, ಭಾರತಿ ವಿಷ್ಣುವರ್ಧನ್, ಅರ್ಜುನ್ ಸರ್ಜಾ, ರವಿಶಂಕರ್, ನಿಖಿಲ್ ಕುಮಾರ್, ಸ್ನೇಹ ಸೇರಿದಂತೆ ಅನೇಕ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ನಾಗಣ್ಣ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಮುನಿರತ್ನ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ಬಹಳ ವರ್ಷಗಳ ನಂತರ ಒಂದು ಪೌರಾಣಿಕ ಸಿನಿಮಾ ಕನ್ನಡದಲ್ಲಿ ಬರುತ್ತಿದ್ದು, ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಇದೆ.

    English summary
    Challenging star Darshan's and Ambareesh's 'Kurukshetra' kannada movie cut out placed in prasanna theatre Bengaluru. The movie will be releasing on august 9th.
    Saturday, August 3, 2019, 12:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X