twitter
    For Quick Alerts
    ALLOW NOTIFICATIONS  
    For Daily Alerts

    ಮಲೆಮಾದೇಶ್ವರ ಅರಣ್ಯದಲ್ಲಿ ದರ್ಶನ್, ಚಿಕ್ಕಣ್ಣ ಸುತ್ತಾಟ

    |

    ನಟ ದರ್ಶನ್ ಮತ್ತೆ ಕಾಡು ಸೇರಿದ್ದಾರೆ. ಕಾಡು ಸುತ್ತುವುದು, ಕಾಡುಪ್ರಾಣಿಗಳ ಚಿತ್ರ ತೆಗೆಯುವುದು ದರ್ಶನ್ ರೂಢಿಸಿಕೊಂಡಿರುವ ಹವ್ಯಾಸ.

    Recommended Video

    Deepika Padukone a create record in Indian film industry | Filmibeat Kannada

    ದರ್ಶನ್ ಪ್ರಾಣಿ ಪ್ರೇಮದ ಬಗ್ಗೆ ಅಭಿಮಾನಿಗಳಿಗೆ ಗೊತ್ತಿರುವಂಥಹದ್ದೆ. ದರ್ಶನ್ ಪ್ರಕೃತಿ ಪ್ರೇಮಿ ಸಹ. ಕಾಡು ಪ್ರಾಣಿಗಳ ಚಿತ್ರ ತೆಗೆಯಲು ದೇಶದ ಉತ್ತಮ ಕಾಡುಗಳನ್ನು ಸುತ್ತಿತ್ತುತ್ತಾರೆ ದರ್ಶನ್. ಸ್ವಾಭಾವಿಕವಗಿ ಪ್ರಕೃತಿ ಪ್ರೇಮ ದರ್ಶನ್ ಒಳಗೆ ಮೊಳೆತಿದೆ.

    ದರ್ಶನ್ ಜೊತೆಗೆ ಊಟ ಮಾಡುತ್ತಿರುವ ಯುವತಿ ಯಾರು?ದರ್ಶನ್ ಜೊತೆಗೆ ಊಟ ಮಾಡುತ್ತಿರುವ ಯುವತಿ ಯಾರು?

    ಇದೇ ಕಾರಣಕ್ಕೆ ದರ್ಶನ್ ಅವರನ್ನು ರಾಜ್ಯದ ಅರಣ್ಯ ಇಲಾಖೆ ರಾಯಭಾರಿಯನ್ನಾಗಿ ಮಾಡಿಕೊಂಡಿದೆ. ದರ್ಶನ್ ಸಹ ಪ್ರೀತಿಯಿಂದಲೇ ಗೌರವವನ್ನು ಒಪ್ಪಿಕೊಂಡಿದ್ದಾರೆ. ಇದರ ಭಾಗವಾಗಿಯೇ ದರ್ಶನ್ ಮಲೆಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಗೆ ಭೇಟಿ ನೀಡಿದ್ದಾರೆ.

    ದರ್ಶನ್ ಜೊತೆ ಚಿಕ್ಕಣ್ಣ ಭೇಟಿ

    ದರ್ಶನ್ ಜೊತೆ ಚಿಕ್ಕಣ್ಣ ಭೇಟಿ

    ದರ್ಶನ್ ಹಾಗೂ ನಟ ಚಿಕ್ಕಣ್ಣ ಅವರು ಮಲೆಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ದೊಡ್ಡಮಕ್ಕಳಿ ವ್ಯಾಪ್ತಿಯಲ್ಲಿರುವ ಎಪಿಸಿ ಶಿಬಿರಕ್ಕೆ ಭೇಟಿ ನೀಡಿ ಸಸಿ ನೆಟ್ಟು ಅರಣ್ಯ ಪ್ರಸ್ತಾಹ ಯೋಜನೆಗೆ ಚಾಲನೆ ನೀಡಿದ್ದಾರೆ. ದರ್ಶನ್ ಅವರೊಟ್ಟಿಗೆ ನಟ ಚಿಕ್ಕಣ್ಣ ಸಹ ಇದ್ದು, ದರ್ಶನ್ ಜೊತೆ ಕೈಜೋಡಿಸಿದ್ದಾರೆ.

    ಕೆಲ ಕಾಲ ಸುತ್ತಾಟ ಸಹ ನಡೆಸಿದ್ದಾರೆ

    ಕೆಲ ಕಾಲ ಸುತ್ತಾಟ ಸಹ ನಡೆಸಿದ್ದಾರೆ

    ದರ್ಶನ್ ಹಾಗೂ ಚಿಕ್ಕಣ್ಣ ಅವರು ಮಲೆಮಹದೇಶ್ವರ ಅರಣ್ಯ ವ್ಯಾಪ್ತಿಯಲ್ಲಿ ಕೆಲ ಕಾಲ ಸುತ್ತಾಟ ನಡೆಸಿ ಅರಣ್ಯದ ಅನುಭವ ಸವಿದಿದ್ದಾರೆ. ಇವರೊಂದಿಗೆ ಕೆಲ ಅರಣ್ಯಾಧಿಕಾರಿಗಳು ಸಹ ಸಾಥ್ ನೀಡಿದ್ದಾರೆ.

    ಕೊರೊನಾ ನಿಯಮ ಉಲ್ಲಂಘನೆ: ದರ್ಶನ್ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿಕೊರೊನಾ ನಿಯಮ ಉಲ್ಲಂಘನೆ: ದರ್ಶನ್ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ

    ಫಾರೆಸ್ಟ್ ವಾಚರ್‌ಗಳೊಂದಿಗೆ ಸಂವಹನ

    ಫಾರೆಸ್ಟ್ ವಾಚರ್‌ಗಳೊಂದಿಗೆ ಸಂವಹನ

    ನಂತರ ದರ್ಶನ್ ಅವರು ಫಾರೆಸ್ಟ್ ವಾಚರ್‌ಗಳೊಟ್ಟಿಗೆ ಮಾತುಕತೆ ನಡೆಸಿ ಅವರಿಗೆ ಸ್ಪೂರ್ತಿ ತುಂಬವ ಕಾರ್ಯ ಮಾಡಿದ್ದಾರೆ. ಈ ಹಿಂದೆಯೂ ದರ್ಶನ್ ಅವರು ವಾಚರ್ಸ್‌ಗಳೊಟ್ಟಿಗೆ ಮಾತುಕತೆ ನಡೆಸಿದ್ದರು. ಅವರೊಂದಿಗೆ ಚಿತ್ರಗಳನ್ನು ತೆಗೆಸಿಕೊಂಡಿದ್ದರು.

    ಐಎಫ್ಎಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ಐಎಫ್ಎಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್

    ವನ್ಯಜೀವಿ ಚಿತ್ರಗಳನ್ನು ಹರಾಜು ಹಾಕುತ್ತಾರೆ

    ವನ್ಯಜೀವಿ ಚಿತ್ರಗಳನ್ನು ಹರಾಜು ಹಾಕುತ್ತಾರೆ

    ದರ್ಶನ್ ಅವರು ತೆಗೆದ ವನ್ಯಜೀವಿ ಚಿತ್ರಗಳನ್ನು ಹರಾಜು ಹಾಕಿ ಅದರಿಂದ ಬಂದ ಹಣವನ್ನು ಅರಣ್ಯಾಭಿವೃದ್ಧಿ ಹಾಗೂ ಇನ್ನೂ ಹಲವು ಉತ್ತಮ ಕಾರ್ಯಗಳಿಗೆ ಬಳಸಿಕೊಳ್ಳುತ್ತಾರೆ. ಚಿಕ್ಕಣ್ಣ ಅವರು ಈ ಹಿಂದೆ ದರ್ಶನ್ ತೆಗೆದ ಚಿತ್ರವನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದ್ದರು.

    ದುಬಾರಿ ಕಾರು ಬಿಟ್ಟು ರೈತ ಮಿತ್ರ ಟ್ರ್ಯಾಕ್ಟರ್ ಓಡಿಸುತ್ತಿರುವ ಡಿ ಬಾಸ್ ದರ್ಶನ್ದುಬಾರಿ ಕಾರು ಬಿಟ್ಟು ರೈತ ಮಿತ್ರ ಟ್ರ್ಯಾಕ್ಟರ್ ಓಡಿಸುತ್ತಿರುವ ಡಿ ಬಾಸ್ ದರ್ಶನ್

    English summary
    Actor Darshan and Chikkanna visited Malemadeshwara forest and participated in Forest department program.
    Monday, July 27, 2020, 14:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X