Don't Miss!
- Sports 2024ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಒಲಿಂಪಿಕ್ ಐಕಾನ್ ಉಸೇನ್ ಬೋಲ್ಟ್ ನೇಮಕ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Finance ಒಂದೇ ವರ್ಷದಲ್ಲಿ 210 ಕೋಟಿ ರೂ. ಆದಾಯ ಗಳಿಸಿದ ಭಾರತದಲ್ಲಿನ ಆಪಲ್ ಸ್ಟೋರ್ಗಳು
- News Subrahmanya Dhareshwara: ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ವಿಧಿವಶ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೈಲೆಂಟ್ ಆಗಿ ಸರ್ಪ್ರೈಸ್ ಕೊಟ್ಟೆ ಬಿಟ್ರು ದರ್ಶನ್-ಉಮಾಪತಿ
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಸಿನಿಮಾ 'ಕುರುಕ್ಷೇತ್ರ' ಶೂಟಿಂಗ್ ಮುಗಿದಿದೆ. 51 ಸಿನಿಮಾ 'ಯಜಮಾನ' ಕೂಡ ಬಹುತೇಕ ಚಿತ್ರೀಕರಣ ಆಗಿದೆ. ಈ ಮಧ್ಯೆ ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ತಯಾರಾಗಲಿರುವ 52ನೇ ಚಿತ್ರ 'ಒಡೆಯ' ಮುಹೂರ್ತ ಆಗಸ್ಟ್ 16 ರಂದು ಜರುಗಿತ್ತು.
ಹೀಗೆ, ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್ ಗಳನ್ನ ಶುರು ಮಾಡಿರುವ ದರ್ಶನ್ ಈಗ ಬಹುದೊಡ್ಡ ಸರ್ಪ್ರೈಸ್ ಕೊಟ್ಟಿದ್ದಾರೆ. 'ಹೆಬ್ಬುಲಿ' ಖ್ಯಾತಿಯ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಿರ್ಮಾಣದಲ್ಲಿ ದರ್ಶನ್ ಒಂದು ಸಿನಿಮಾ ಮಾಡಲಿದ್ದಾರೆ, ಆ ಚಿತ್ರಕ್ಕೆ 'ಚೌಕ' ಖ್ಯಾತಿಯ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿತ್ತು.
ಈ ಸುದ್ದಿಯನ್ನ ನಿಜಾ ಮಾಡಿರುವ ದರ್ಶನ್ ಮತ್ತು ಉಮಾಪತಿ ಸೈಲೆಂಟ್ ಸಿನಿಮಾಗೆ ಚಾಲನೆ ನೀಡಿದ್ದಾರೆ. ಡಿ ಬಾಸ್ ಅವರ 53ನೇ ಸಿನಿಮಾ ಸ್ಕ್ರಿಪ್ಟ್ ಪೂಜೆಯ ಮೂಲಕ ಆರಂಭವಾಗಿದೆ. ಚಿತ್ರಗಳ ಸಮೇತ ಮುಂದೆ ಓದಿ.....
ದರ್ಶನ್ 'D53' ಸ್ಟಾರ್ಟ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಹೆಬ್ಬುಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಕಾಂಬಿನೇಷನ್ ನಲ್ಲಿ ಮೂಡಿ ಬರಲಿರುವ ಸಿನಿಮಾಗೆ ಚಾಲನೆ ಸಿಕ್ಕಿದೆ. ಇದು ದರ್ಶನ್ ಅವರ 53ನೇ ಚಿತ್ರವಾಗಿದ್ದು, ಈ ಚಿತ್ರವನ್ನ ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದಾರೆ.
'ಹೆಬ್ಬುಲಿ' ನಿರ್ಮಾಪಕನ ಚಿತ್ರಕ್ಕೆ ಕಂಡಿಷನ್ ಹಾಕಿದ ದರ್ಶನ್
ಸ್ಕ್ರಿಪ್ಟ್ ಪೂಜೆ ಮಾಡಿದ ಡಿ ಬಾಸ್
ಚಿತ್ರದ ಕಥೆ ಏನು, ಟೈಟಲ್ ಏನು, ಸ್ಟೋರಿ ಲೈನ್ ಏನು ಎಂದು ಯಾವ ಸುಳಿವು ನೀಡಿದ ಚಿತ್ರತಂಡ ಇತ್ತೀಚಿಗಷ್ಟೆ ಸ್ಕ್ರಿಪ್ಟ್ ಪೂಜೆ ಮಾಡಿದೆ. ನಟ ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್, ನಿರ್ದೇಶಕ ತರುಣ್ ಸುಧೀರ್ ಭಾಗಿಯಾಗಿದ್ದರು.
ದರ್ಶನ್ ಸಿನಿಮಾ ಟೈಟಲ್ ಗೊಂದಲ ನಿವಾರಿಸಿದ ತರುಣ್ ಸುಧೀರ್
ಸುದ್ದಿಯಾಗಿದ್ದ 'ಕಾಟೇರ'
ಅಂದ್ಹಾಗೆ, ಕಾಟೇರ ಅಂದ್ರೆ ಒಬ್ಬ ಕುಸ್ತಿ ಪೈಲ್ವಾನ್ ಹೆಸರಂತೆ. ದಾವಣೆಗೆರೆ ಬಳಿ ಆ ವ್ಯಕ್ತಿ ಇದ್ದಾನೆ. ಒಂದು ಸಮಯದ ಊಟಕ್ಕೆ ಅಂತ ಕೂತ್ರೆ, ಮೂವತ್ತರಿಂದ ಮೂವತೈದು ಚಪಾತಿ, ಇಪತ್ತು ರೊಟ್ಟಿ, ಎರಡ್ಮೂರು ಕೋಳಿ ಹಾಗೂ ಹದಿನೈದು ವಾಟರ್ ಮೆಲನ್ ಜ್ಯೂಸ್ ಕುಡಿತಾನೆ, ಹಾಗಾಗಿ, ಅವರ ರೀತಿ ಒಂದು ಮಾತ್ರ ಮಾಡಬೇಕು ಎಂದು ಹೇಳಿದ್ದರು. ಹಾಗಾಗಿ, ಅದೊಂದು ಕಾನ್ಸೆಪ್ಟ ಇದೆಯಂತೆ. ಒಂದು ವೇಳೆ ಈ ಕಥೆ ಓಕೆ ಆದ್ರೆ, ದರ್ಶನ್ ಕುಸ್ತಿ ಪೈಲ್ವಾನ್ ಆಗಬಹುದು ಎನ್ನಲಾಗಿದೆ.
ಅಕ್ಟೋಬರ್ ನಲ್ಲಿ ಶೂಟಿಂಗ್ ಆರಂಭ
ದರ್ಶನ್-ಉಮಾಪತಿ-ತರುಣ್ ಸುಧೀರ್ ಜೋಡಿಯಲ್ಲಿ ಸಿನಿಮಾ ಮಾಡೋದು ಪಕ್ಕಾ. ಆದ್ರೆ, ಕಥೆಯೇನು, ಟೈಟಲ್ ಏನು, ನಾಯಕಿ ಯಾರು ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಸದ್ಯ ಸಿನಿಮಾದ ಪೂಜೆ ಮಾಡಿರುವ D53, ನವೆಂಬರ್ ವೊತ್ತಿಗೆ ಚಿತ್ರೀಕರಣ ಮಾಡುವ ಯೋಜನೆ ಹಾಕಿಕೊಂಡಿದೆಯಂತೆ.