twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಮತ್ತು ಸುದೀಪ್ ಅಭಿಮಾನಿಗಳಿಗೆ ಆಘಾತ ತಂದ ದಿನವಿದು

    |

    ಮಾರ್ಚ್ 5. ಸ್ಯಾಂಡಲ್ ವುಡ್ ಇತಿಹಾಸದಲ್ಲಿ ಮರೆಯಲಾಗದ ದಿನವಾಗಿದೆ. ಅದರಲ್ಲೂ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳು ಈ ದಿನವನ್ನು ಎಂದು ಮರೆಯಲು ಸಾಧ್ಯವಿಲ್ಲ. ಬಹುಶಃ ಇದು ಚಾಲೆಂಜಿಂಗ್ ಸ್ಟಾರ್ ಮತ್ತು ಕಿಚ್ಚ ಸುದೀಪ್ ಪಾಲಿಗೆ ಇದು ಕರಾಳ ದಿನ ಎಂದರು ತಪ್ಪಾಗಲ್ಲ.

    ಯಾಕಂದ್ರೆ, ಇದೇ ದಿನ ಸ್ಯಾಂಡಲ್ ವುಡ್ ಯುವ ದಿಗ್ಗಜರ ಸ್ನೇಹ ಮುರಿದುಬಿದ್ದಿತ್ತು. ಮಾರ್ಚ್ 5 ರಂದು ದರ್ಶನ್ ಮಾಡಿದ ಒಂದೇ ಒಂದು ಟ್ವೀಟ್ ಇಡೀ ಕನ್ನಡ ಚಿತ್ರರಂಗವನ್ನೇ ಒಂದು ಕ್ಷಣ ದಿಗ್ಬ್ರಮೆಗೊಳಿಸಿತ್ತು.

    ಕರ್ನಾಟಕದಲ್ಲಿ ಕೆಜಿಎಫ್ ದಾಖಲೆ ಮುರಿದ ರಾಬರ್ಟ್: ಅತಿ ದೊಡ್ಡ ಬೆಲೆಗೆ ವಿತರಣೆ ಹಕ್ಕು ಸೇಲ್ಕರ್ನಾಟಕದಲ್ಲಿ ಕೆಜಿಎಫ್ ದಾಖಲೆ ಮುರಿದ ರಾಬರ್ಟ್: ಅತಿ ದೊಡ್ಡ ಬೆಲೆಗೆ ವಿತರಣೆ ಹಕ್ಕು ಸೇಲ್

    ದರ್ಶನ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕುವವರೆಗೂ ಇಬ್ಬರ ಸ್ನೇಹ ಚೆನ್ನಾಗಿದೆ, ಇಬ್ಬರು ಕುಚಿಕುಗಳಾಗಿದ್ದಾರೆ ಅಂತನೇ ಅಂದುಕೊಂಡಿದ್ದರು. ಆದರೆ ಒಂದು ಟ್ವೀಟ್ ಎಲ್ಲವನ್ನು ಬದಲಾಯಿತು. ಅಷ್ಟಕ್ಕೂ, ದಾಸ ದರ್ಶನ್ ಮಾಡಿದ್ದ ಟ್ವೀಟ್ ಏನು? ಈ ಟ್ವೀಟ್ ನಿಂದ ಏನೆಲ್ಲಾ ಬೆಳವಣಿಗೆ ಆಯ್ತು.?ಮುಂದೆ ಓದಿ...

    ಮಾರ್ಚ್ 5, 2017

    ಮಾರ್ಚ್ 5, 2017

    ಕನ್ನಡ ಚಿತ್ರರಂಗದ ಕುಚಿಕು ಗೆಳೆಯರಂತಿದ್ದ ದರ್ಶನ್ ಮತ್ತು ಸುದೀಪ್ ಸ್ನೇಹ ಮಾರ್ಚ್ 5, 2017 ರ ರಾತ್ರಿ ಅಧಿಕೃತವಾಗಿ ಅಂತ್ಯವಾಗಿತ್ತು. ಸ್ವತಃ ದರ್ಶನ್ ಅವರೇ ಟ್ವೀಟ್ ಮೂಲಕ ತಮ್ಮಿಬ್ಬರ ಸ್ನೇಹಕ್ಕೆ ಕೊನೆ ಹಾಡಿದ್ದರು. ದರ್ಶನ್ ಅವರಿಂದ ಈ ಟ್ವೀಟ್ ಅನ್ನು ಯಾರೊಬ್ಬರು ನಿರೀಕ್ಷೆ ಮಾಡಿರಲಿಲ್ಲ. ಆದ್ರೆ, ಅನಿರೀಕ್ಷಿತವಾಗಿ ಡಿ ಬಾಸ್ ಕಡೆಯಿಂದ ಬಂದ ಟ್ವೀಟ್ ಅಭಿಮಾನಿಗಳಿಗೆ ಆಘಾತ ನೀಡಿತ್ತು.

    ನಾನು ಮತ್ತು ಸುದೀಪ್ ಸ್ನೇಹಿತರಲ್ಲ

    ನಾನು ಮತ್ತು ಸುದೀಪ್ ಸ್ನೇಹಿತರಲ್ಲ

    'ನಾನು ಮತ್ತು ಸುದೀಪ್ ಸ್ನೇಹಿತರಲ್ಲ. ನಾವಿಬ್ಬರೂ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಕಲಾವಿದರಷ್ಟೇ. ಇದು ಮುಗಿದು ಹೋದ ಕಥೆ' ಎಂದು ರಾತ್ರಿ 8.15 ಕ್ಕೆ ದರ್ಶನ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನೋಡಿದ ದರ್ಶನ್ ಮತ್ತು ಕಿಚ್ಚನ ಅಭಿಮಾನಿಗಳಿಗೆ ಒಂದು ಕ್ಷಣ ಏನಾಗುತ್ತಿದೆ ಎನ್ನುವುದೇ ಗೊತ್ತಾಗದಂತೆ ಆಗಿತ್ತು.

    ಕೃಷಿ ಇಲಾಖೆಯ ರಾಯಭಾರಿಯಾಗಿ ದರ್ಶನ್ ಅಧಿಕಾರ ಸ್ವೀಕಾರ ಸಮಾರಂಭ

    ಮುನಿಸಿಗೆ ಕಾರಣವಾಗಿತ್ತು ಸುದೀಪ್ ಮಾತು

    ಮುನಿಸಿಗೆ ಕಾರಣವಾಗಿತ್ತು ಸುದೀಪ್ ಮಾತು

    ನಂತರ ಸರಣಿ ಟ್ವೀಟ್ ಮಾಡಿದ್ದ ದರ್ಶನ್, ತಮ್ಮ ಚೊಚ್ಚಲ ಸಿನಿಮಾ 'ಮೆಜೆಸ್ಟಿಕ್' ಕುರಿತು ಸುದೀಪ್ ತಪ್ಪು ಹೇಳಿಕೆ ಕೊಟ್ಟಿದ್ದಾರೆ ಎನ್ನುವುದು ದರ್ಶನ್ ಅವರ ಕೋಪಕ್ಕೆ ಕಾರಣವಾಗಿತ್ತು. 'ಮೆಜೆಸ್ಟಿಕ್ ಚಿತ್ರಕ್ಕೆ ದರ್ಶನ್ ಅವರನ್ನು ನಾನೇ ಸೂಚಿಸಿದ್ದು' ಎಂದು ಸುದೀಪ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಸುದೀಪ್ ಈ ಮಾತಿನಿಂದ ಅಸಮಾಧಾನಗೊಂಡ ದರ್ಶನ್ ಈ ಟ್ವೀಟ್ ಮಾಡಿದ್ದರು.

    ಸ್ನೇಹ ಸಮರಕ್ಕೆ ಕಾರಣವಾದ 'ಮೆಜೆಸ್ಟಿಕ್'

    ಸ್ನೇಹ ಸಮರಕ್ಕೆ ಕಾರಣವಾದ 'ಮೆಜೆಸ್ಟಿಕ್'

    ದರ್ಶನ್ ಮತ್ತು ಸುದೀಪ್ ಅವರ ನಡುವಿನ ಸ್ನೇಹ ಸಮರ ಕಾರಣವಾಗಿದ್ದು, 'ಮೆಜೆಸ್ಟಿಕ್' ಚಿತ್ರಕ್ಕೆ ನಾಯಕನ ಆಯ್ಕೆ ವಿಚಾರ. ಆ ಚಿತ್ರದ ನಿರ್ಮಾಪಕ ಎಂ.ಜಿ ರಾಮಮೂರ್ತಿ, ನಿರ್ದೇಶಕ ಪಿ.ಎನ್ ಸತ್ಯ, ಭಾ ಮಾ ಹರೀಶ್ ಎಲ್ಲರೂ ವಾದ-ವಾಗ್ವಾದ ನಡೆಸಿದ್ದರು. ಅದು ಸತ್ಯ, ಇದು ಸತ್ಯ ಎಂದು ಒಬ್ಬರ ಪರ ಇನ್ನೊಬ್ಬರು ಸಮರ್ಥಿಸಿಕೊಂಡರು.

    ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ದರ್ಶನ್ ಹೊಸ ಸಿನಿಮಾ: ಮದಕರಿ ನಾಯಕನ ಕತೆ ಏನಾಯಿತು?ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ದರ್ಶನ್ ಹೊಸ ಸಿನಿಮಾ: ಮದಕರಿ ನಾಯಕನ ಕತೆ ಏನಾಯಿತು?

    Recommended Video

    ರಾಬರ್ಟ್ ಹಾಡಿನ ತೆಲುಗು ಗಾಯಕಿಗೆ ಕನ್ನಡಿಗರು ಫಿದಾ | Filmibeat Kannada
    ಇಬ್ಬರ ಸ್ನೇಹ ಮುರಿದು 4 ವರ್ಷಗಳಾಗಿದೆ

    ಇಬ್ಬರ ಸ್ನೇಹ ಮುರಿದು 4 ವರ್ಷಗಳಾಗಿದೆ

    ಈ ಬೆಳವಣಿಗೆ ಬಳಿಕ ಬಳಿಕ ದರ್ಶನ್ ಮತ್ತು ಸುದೀಪ್ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇಬ್ಬರ ಸ್ನೇಹ ಮುರಿದು 4 ವರ್ಷಗಳೇ ಕಳೆದಿವೆ. ಈ 4 ವರ್ಷಗಳಲ್ಲಿ ಒಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವುದಿರಲಿ, ಒಬ್ಬರ ಹೆಸರನ್ನು ಮತ್ತೊಬ್ಬರು ಹೇಳುವುದಿಲ್ಲ ಅಷ್ಟರ ಮಟ್ಟಿಗೆ ವೈಮನಸ್ಸು ಬೆಳೆಸಿಕೊಂಡಿದ್ದಾರೆ.

    English summary
    Actor Darshan and Sudeep's friendship broke up in March 5th.
    Friday, March 5, 2021, 12:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X