Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಂಡ್ಯ ಎಫೆಕ್ಟ್: ಒಂದೇ ಚಿತ್ರದಲ್ಲಿ ದರ್ಶನ್-ಯಶ್ ನಟನೆ.!
Recommended Video
ಅದೊಂದು ಕಾಲವಿತ್ತು. ದರ್ಶನ್ ಮತ್ತು ಯಶ್ ಒಬ್ಬರನ್ನ ಕಂಡ್ರೆ ಮತ್ತೊಬ್ಬರಿಗೆ ಆಗಲ್ಲ. ಇವರಿಬ್ಬರು ಇಂಡಸ್ಟ್ರಿಯಲ್ಲಿ ಹಾವು-ಮುಂಗುಸಿ ಇದ್ದಂತೆ. ಪರಸ್ಪರ ಇಬ್ಬರು ಕೌಂಟರ್ ಡೈಲಾಗ್ ಗಳ ಮೂಲಕ ಕಿತ್ತಾಡುತ್ತಿದ್ದರು ಎಂಬ ವಿಷ್ಯಗಳನ್ನಿಟ್ಟು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಜಗಳವಾಡ್ತಿದ್ದರು.
ಆದ್ರೀಗ, ಕಾಲ ಬದಲಾಗಿದೆ. ಯಶ್ ಮತ್ತು ದರ್ಶನ್ ಅಭಿಮಾನಿಗಳು ನಾವು ಇನ್ಮುಂದೆ 'ಅಣ್ತಮ್ಮಾಸ್' ಎಂದು ಬೀಗುತ್ತಿದ್ದಾರೆ. ಇದಕ್ಕೆ ಕಾರಣ ಮಂಡ್ಯ ಚುನಾವಣೆಯಲ್ಲಿ ಅಂಬರೀಶ್ ಪತ್ನಿ ಪರ ಮನೆ ಮಕ್ಕಳಂತೆ ಇಬ್ಬರು ನಟರು ನಿಂತಿರುವುದು.
ಚುನಾವಣೆಗಳಲ್ಲಿ ದರ್ಶನ್ ಪ್ರಚಾರ ಮಾಡೋದು ಈ ಒಂದೇ ಕಾರಣಕ್ಕೆ
ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರದ ಘೋಷಿಸಿದ ದಿನ, ಅದ್ಯಾವ ಸಮಯದಲ್ಲಿ ದರ್ಶನ್ 'ನಮ್ಮದು ಜೋಡಿ ಎತ್ತಿನ ಗಾಡಿ' ಅಂದ್ರೂ ಅಲ್ಲಿಂದ ಜೋಡೆತ್ತು ಎಂಬ ಪದ ಸಖತ್ ಸದ್ದು ಮಾಡ್ತಿದೆ. ಅದು ಎಷ್ಟರ ಮಟ್ಟಿಗೆ ಅಂದ್ರೆ, ಈಗ ಯಶ್ ಮತ್ತು ದರ್ಶನ್ ಒಟ್ಟಿಗೆ ಸಿನಿಮಾ ಮಾಡೋ ಮಟ್ಟಕ್ಕೆ ಕಾರಣವಾಗಿದೆ. ಹೌದಾ, ದರ್ಶನ್ ಮತ್ತು ಯಶ್ ಇಬ್ಬರು ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರಾ? ಮುಂದೆ ಓದಿ.....
'ಜೋಡೆತ್ತು' ಚಿತ್ರವಾದ್ರೆ ನಟಿಸುತ್ತೀರಾ?
ಜೋಡೆತ್ತು ಎಂಬ ಪದ ಮಂಡ್ಯ ರಾಜಕಾರಣದಲ್ಲಿ ಅತಿ ಹೆಚ್ಚು ಸದ್ದು ಮಾಡ್ತಿದ್ದು, ಒಂದು ವೇಳೆ ಇದೇ ಟೈಟಲ್ ನಲ್ಲಿ ಸಿನಿಮಾ ಮಾಡಿದ್ರೆ, ಯಶ್ ಮತ್ತು ನೀವು ನಟಿಸುತ್ತೀರಾ ಎಂದು ದರ್ಶನ್ ಅವರನ್ನ ಸುದ್ದಿ ಮಾಧ್ಯಮವೊಂದು ಪ್ರಶ್ನಿಸಿದಾಗ, ದರ್ಶನ್ ಕೂಡ ಹುಂ ಮಾಡುವುದಾಗಿ ಹೇಳಿದ್ದಾರೆ.
ಮತ್ತೆ 'ಜೋಡೆತ್ತುಗಳ' ಕಾಲೆಳೆದ ಸಿಎಂ ಕುಮಾರಸ್ವಾಮಿ
ಡೈರೆಕ್ಟರ್ ಮನಸ್ಸು ಮಾಡಬೇಕು
'ಒಳ್ಳೆಯ ಡೈರೆಕ್ಟರ್ ಸಿಕ್ಕರೇ ಖಂಡಿತಾ ಮಾಡುತ್ತೇನೆ' ಎಂದು ನಟ ದರ್ಶನ್ ಹೇಳುವ ಮೂಲಕ ನಿರ್ದೇಶಕರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸೋ, ದರ್ಶನ್ ಈ ಬಗ್ಗೆ ಒಲವು ತೋರಿರುವ ಇಂತಹ ಸಮಯದಲ್ಲಿ ಯಾರಾದರೂ ನಿರ್ದೇಶಕರು ಈ ಪ್ರಾಜೆಕ್ಟ್ ಬಗ್ಗೆ ಯೋಚನೆ ಮಾಡಬಹುದು.
'ಡಿ ಬಾಸ್' ಒಬ್ಬರೇ ಯಾಕೆ ಸಿಎಂಗೆ ಟಾರ್ಗೆಟ್, ಅದರ ಹಿಂದಿರುವ ಕಾರಣಗಳೇ ಬೇರೆ.!
ದೊಡ್ಡ ಸಿನಿಮಾ ಆಗಬಹುದು
ಒಂದು ವೇಳೆ ದರ್ಶನ್ ಮತ್ತು ಯಶ್ ಒಟ್ಟಿಗೆ ಸಿನಿಮಾ ಮಾಡುವುದು ಪಕ್ಕಾ ಆದ್ರೆ, ಇದು ಕನ್ನಡ ಚಿತ್ರರಂಗದಲ್ಲಿ ಅತಿ ದೊಡ್ಡ ಸಿನಿಮಾ ಆಗಬಹುದು. ಬಜೆಟ್ ವಿಷ್ಯದಲ್ಲೂ, ಕ್ರೇಜ್ ವಿಚಾರದಲ್ಲೂ ಈ ಚಿತ್ರ ದಾಖಲೆ ಸೃಷ್ಟಿಸಬಹುದು. ಇಂತಹ ಮೆಗಾ ಪ್ರಾಜೆಕ್ಟ್ ಗೆ ಯಾವ ನಿರ್ದೇಶಕ ಅಥವಾ ನಿರ್ಮಾಪಕರ ಧೈರ್ಯ ಮಾಡ್ತಾರೋ ಗೊತ್ತಿಲ್ಲ.
ದರ್ಶನ್ ಪ್ರಚಾರ ಮಾಡುತ್ತಿರುವುದರ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿಖಿಲ್ ಹೇಳಿದ್ದು ಹೀಗೆ
ಟೈಟಲ್ ಗಾಗಿ ಪೈಪೋಟಿ
ಅಂದ್ಹಾಗೆ, ಜೋಡೆತ್ತು ಎಂಬ ಟೈಟಲ್ ಗಾಗಿ ಕೆಲವು ನಿರ್ದೇಶಕ ಹಾಗೂ ನಿರ್ಮಾಪಕರು ಮುಗಿಬಿದ್ದಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮನವಿ ಸಲ್ಲಿಸಿದ್ದಾರಂತೆ. ಈ ಟೈಟಲ್ ನಮಗೆ ಬೇಕು, ನಮಗೆ ಬೇಕು ಎಂದು ಪೈಪೋಟಿ ಬಿದ್ದಿದ್ದಾರಂತೆ. ಬರಿ ಜೋಡೆತ್ತು ಮಾತ್ರವಲ್ಲ, ಕಳ್ಳೆತ್ತು, ಮಂಡ್ಯದ ಹೆಣ್ಣು, ನಿಖಿಲ್ ಎಲ್ಲಿದ್ದೀಯಪ್ಪ ಟೈಟಲ್ ಗೂ ಭಾರಿ ಡಿಮ್ಯಾಂಡ್ ಇದೆಯಂತೆ.