Don't Miss!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- News ಡಿಕೆ ಸುರೇಶ್ ನಿದ್ದೆಗೆಡಿಸಿದ ಡಾಕ್ಟರ್; ಕಾಂಗ್ರೆಸ್ ಅಭ್ಯರ್ಥಿ ನೂರಕ್ಕೆ ನೂರು ಈ ಬಾರಿಯೂ ಗೆಲ್ತಾರೆ: ಭವಿಷ್ಯ ನುಡಿದ ಸಿದ್ದರಾಮ
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ ಮಾತ್ರವಲ್ಲ ಇನ್ನು ಹಲವು ನಟರು ರಾಜಕೀಯಕ್ಕೆ ಬರ್ತಾರಂತೆ.!
ಕನ್ನಡ ಸಿನಿಮಾ ತಾರೆಯರು ರಾಜಕೀಯ ರಂಗದಲ್ಲಿ ತೊಡಗಿಕೊಳ್ಳುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ರೆಬೆಲ್ ಸ್ಟಾರ್ ಅಂಬರೀಶ್, ನವರಸ ನಾಯಕ ಜಗ್ಗೇಶ್, ನಟಿ ಉಮಾಶ್ರೀ, ಜಯಮಾಲ, ತಾರಾ, ರಮ್ಯಾ, ಸೇರಿದಂತೆ ಹಲವು ನಟ-ನಟಿಯರು ರಾಜಕೀಯದಲ್ಲಿ ಇದ್ದಾರೆ.
ಇತ್ತೀಚೆಗಷ್ಟೇ, ರಿಯಲ್ ಸ್ಟಾರ್ ಉಪೇಂದ್ರ 'ಪ್ರಜಾಕೀಯ' ಎಂಬ ಸ್ವತಂತ್ರ ಪಕ್ಷವನ್ನ ಸ್ಥಾಪಿಸಿ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದರು. ಅದರ ಬೆನ್ನಲ್ಲೆ ಈಗ ಮತ್ತಷ್ಟು ಸ್ಟಾರ್ ನಟರು ರಾಜಕೀಯಕ್ಕೆ ಬರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎನ್ನಲಾಗುತ್ತಿದೆ. ಹಾಗಿದ್ರೆ, ದರ್ಶನ್ ಹಾಗೂ ಮತ್ಯಾವ ನಟರು ಹೆಸರುಗಳು ರಾಜಕೀಯದಲ್ಲಿ ಕೇಳಿ ಬರುತ್ತಿದೆ ಎಂದು ತಿಳಿದುಕೊಳ್ಳಲು ಮುಂದೆ ಓದಿ....
'ಕೈ' ಹಿಡಿಯುತ್ತಾರಾ ದರ್ಶನ್?
ಅವರು, ಇವರು ಹೇಳುತ್ತಿರುವ ಪ್ರಕಾರ ನಟ ದರ್ಶನ್ ಕಾಂಗ್ರೆಸ್ ಪಕ್ಷವನ್ನ ಸೇರಲಿದ್ದಾರೆ ಎನ್ನಲಾಗುತ್ತಿದೆ. ಆದ್ರೆ, ಇದರ ಬಗ್ಗೆ ದರ್ಶನ್ ಆಗಲಿ, ಅವರ ಕುಟುಂಬಸ್ಥರಾಗಲಿ ಯಾವುದೇ ಮಾಹಿತಿ ನೀಡಿಲ್ಲ.
ರಾಜಕೀಯಕ್ಕೆ ದರ್ಶನ್ 'ಸೈ' ಅಂತಾರ?
ದರ್ಶನ್ ಅವರ ತಾಯಿ ಮೀನಾ ತೂಗುದೀಪ ಅವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ. ಇದಕ್ಕು ಮುಂಚೆ ಅಂಬರೀಶ್, ಆನಂದ್ ಅಪ್ಪುಗೋಳ್ ಅವರ ಪರವಾಗಿ ದರ್ಶನ್ ಕ್ಯಾಂಪೈನ್ ಮಾಡಿದ್ದರು. ಹೀಗಾಗಿ, ದರ್ಶನ್ ರಾಜಕೀಯಕ್ಕೆ ಬರೋದು ಖಚಿತ ಎನ್ನಲಾಗುತ್ತಿದೆ. ಆದ್ರೆ, ಅಧಿಕೃತವಾಗಿ ಘೋಷಣೆ ಆಗುವವರೆಗೂ ಇದು ನಂಬಲು ಸಾಧ್ಯವಿಲ್ಲ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಇಂಥ ಗಾಸಿಪ್ ಗಳೂ ಕೇಳಿ ಬರ್ತಿವೆ.!
'ಕಮಲ'ಕ್ಕೆ ದೇವರಾಜ್.!
ಕಳೆದ ಕೆಲ ದಿನಗಳಿಂದ ಡೈನಾಮಿಕ್ ಹೀರೋ ದೇವರಾಜ್ ಅವರು ಬಿಜೆಪಿ ಪಕ್ಷಕ್ಕೆ ಸೇರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ನಟಿ ಹಾಗೂ ಪರಿಷತ್ ಸದಸ್ಯೆ ತಾರಾ ಅವರು ದೇವರಾಜ್ ಅವರನ್ನ ಪಕ್ಷಕ್ಕೆ ಕರೆತರುವ ಹಾಡಿಯಲ್ಲಿದ್ದಾರೆ ಎನ್ನಲಾಗಿದೆ. ಇದು ಕೂಡ ಅಧಿಕೃತವಾಗಬೇಕಿದೆ.
ಯಶ್ ಮೇಲು ಇದೆ ಕಣ್ಣು
ಇನ್ನು ನಟನೆ ಜೊತೆ ಸ್ವತಂತ್ರವಾಗಿ ಜನಪರ ಕೆಲಸ ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರ ಮೇಲೆ ಕೂಡ ರಾಜಕಾರಣಿಗಳ ಕಣ್ಣು ಬಿದ್ದಿದೆ. ಯಶ್ ಅವರನ್ನ ಕೂಡ ರಾಜಕೀಯಕ್ಕೆ ಕರೆ ತರುವ ಯೋಚನೆ ಮಾಡುತ್ತಿದ್ದಾರೆ.
ರಾಜಕೀಯಕ್ಕೆ ಬರ್ತಾರಾ ದರ್ಶನ್: ತಾಯಿ ಮೀನಾ ತೂಗುದೀಪ ಹೇಳಿದ್ದೇನು.?
'ಪ್ರಜಾಕೀಯ' ಕಟ್ಟಿದ ಉಪೇಂದ್ರ
ಸಿನಿಮಾಗಳಲ್ಲಿ ಸದಾ ಡಿಫ್ರೆಂಟ್ ಎನಿಸಿಕೊಂಡಿದ್ದ ಉಪೇಂದ್ರ ಅವರು ಪ್ರಜಾನೀತಿ, ಪ್ರಜಾಕೀಯ, ಪ್ರಜಾಕಾರಣ ಎಂದು ಹೊಸ ಪಕ್ಷವನ್ನ ಕಟ್ಟಿದ್ದಾರೆ. ಈ ಪಕ್ಷಕ್ಕೆ ಹಲವು ಸಿನಿಮಾ ತಾರೆಯರು ಸೇರಿದಂತೆ ರಾಜಕೀಯ ಗಣ್ಯರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.
'ರಾಜಕೀಯ'ದಲ್ಲಿ ಶಿವಣ್ಣ, ಚೇತನ್ ಹೆಸರು ಇದೆ
ಇನ್ನುಳಿದಂತೆ ಶಿವರಾಜ್ ಕುಮಾರ್, ಆ ದಿನಗಳು ಖ್ಯಾತಿಯ ಚೇತನ್, ಗೋಲ್ಡನ್ ಸ್ಟಾರ್ ಗಣೇಶ್ ಅವರ ಹೆಸರುಗಳು ಕೂಡ ರಾಜಕೀಯ ರಂಗದಲ್ಲಿ ಚರ್ಚೆ ಆಗುತ್ತಿದೆ. ಆದ್ರೆ, ಯಾವ ಯಾವ ನಟರು ಸಿನಿಮಾ ಕ್ಷೇತ್ರದಿಂದ ಬಣ್ಣದ ಲೋಕಕ್ಕೆ ಜಿಗಿಯುತ್ತಾರೆ ಎಂಬುದನ್ನ ಕಾದುನೋಡಬೇಕಿದೆ.