ಬಂಡಿ ಮಹಾ ಕಾಳಿಯಮ್ಮ ದೇವಾಲಯಕ್ಕೆ ದರ್ಶನ್ ಕೊಟ್ಟ ಕಾಣಿಕೆ
Recommended Video

ದರ್ಶನ್ ಮಾಡಿದ್ರು ಮತ್ತೊಂದು ಹೊಸ ಕೆಲಸ..!! | Filmibeat Kannada
ಇತ್ತೀಚಿಗಷ್ಟೆ ನಟ ದರ್ಶನ್ ಹೋಟೆಲ್ ಸೆಕ್ಯೂರಿಟಿಗೆ ಗೆ ಸೆಲ್ಯೂಟ್ ಮಾಡಿ ತಮ್ಮ ಸರಳತೆ ಮೆರೆದಿದ್ದರು. ಆದರೆ ಈಗ ಮತ್ತೆ ದರ್ಶನ್ ತಮ್ಮ ಒಳ್ಳೆಯ ಕೆಲಸದ ಮೂಲಕ ಅಭಿಮಾನಿಗಳ ಮೆಚ್ಚುಗೆ ಗಳಸಿದ್ದಾರೆ. ಬಂಡಿ ಮಹಾ ಕಾಳಿಯಮ್ಮ ದೇವಲಯಕ್ಕೆ ದರ್ಶನ್ ಒಂದು ವಿಶೇಷ ಕಾಣಿಕೆ ನೀಡಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಬಂಡಿ ಮಹಾ ಕಾಳಿಯಮ್ಮ ದೇವಲಯಕ್ಕೆ ದರ್ಶನ್ ಸೇರಿದಂತೆ ಅನೇಕ ಸಿನಿಮಾ ನಟರು ಆಗಾಗ ಹೋಗುತ್ತಿರುತ್ತಾರೆ. ಈ ಪವಿತ್ರ ದೇವಸ್ಥಾನಕ್ಕೆ ಇತ್ತೀಚಿಗಷ್ಟೆ ಭೇಟಿ ನೀಡಿ ತಾಯಿಯ ದರ್ಶನ ಪಡೆದರು. ಇದೇ ವೇಳೆ ದಾಸ ಎರಡು ನಾಯಿ ಮರಿಗಳನ್ನು ದೇವಲಯಕ್ಕೆ ನೀಡಿದ್ದಾರೆ. ಎರಡು ಚೀನಿ ಜಾತಿಯ ಶಿಚು ತಳಿಯ ನಾಯಿ ಮರಿಗಳನ್ನು ದರ್ಶನ್ ದೇಗುಲದ ಅರ್ಚಕರಿಗೆ ನೀಡಿದ್ದಾರೆ.

ಅಂದಹಾಗೆ, ದರ್ಶನ್ ಒಬ್ಬ ಪ್ರಾಣಿ ಪ್ರಿಯ. ಮೈಸೂರಿನ ತಮ್ಮ ಫಾರ್ಮ್ ಹೌಸ್ ನಲ್ಲಿ ಅದೆಷ್ಟೋ ಪ್ರಾಣಿಗಳನ್ನು ಅವರು ಸಾಕಿದ್ದಾರೆ. ಅಲ್ಲದೆ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ರಾಯಭಾರಿ ಸಹ ಆಗಿದ್ದಾರೆ.
More from Filmibeat
English summary
Kannada actor Darshan donates two pets to Bandi Mahakalamma temple Chamrajpete, Bengaluru.


Click it and Unblock the Notifications











