Don't Miss!
- News ಮತ್ತೆ ಸದ್ದು ಮಾಡಿದ ಕೈ ಗ್ಯಾರಂಟಿ ಕಾರ್ಡ್; ಚುನಾವಣಾ ಆಯೋಗಕ್ಕೆ ದೂರ ಕೊಟ್ಟ ಜೆಡಿಎಸ್ ನಿಯೋಗ
- Finance ಟೆಸ್ಲಾ ಫುಲ್ ಸೆಲ್ಫ್ ಡ್ರೈವಿಂಗ್ ಸಿಸ್ಟಮ್ ಕಾರುಗಳ ಬೆಲೆಯನ್ನು ಇಳಿಕೆ ಮಾಡಿದ ಎಲೋನ್ ಮಸ್ಕ್
- Lifestyle ಮನೆಯಲ್ಲಿ ಘಮ ಘಮಿಸುವ ಮಲ್ಲಿಗೆ ಗಿಡ ಬೆಳೆಸೋದು ಹೇಗೆ..? ಇಲ್ಲಿದೆ ಮಾಹಿತಿ
- Technology ಇಂದು ಮೊಟೊ G64 5G ಫೋನ್ ಫಸ್ಟ್ ಸೇಲ್!..ಈ ಫೋನಿನ ಪ್ಲಸ್ ಪಾಯಿಂಟ್ ಏನು?
- Sports RR vs MI: 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಈ ದಾಖಲೆ ನಿರ್ಮಿಸಿದ ಮೊದಲಿಗ ಯುಜ್ವೇಂದ್ರ ಚಹಾಲ್!
- Automobiles ಹ್ಯುಂಡೈ ವೆರ್ನಾ ಕಾರಿಗೆ ಭಾರೀ ಡಿಸ್ಕೌಂಟ್: ರಾಶಿ ಫೀಚರ್ನ ಕಾರಿಗೆ ಇಷ್ಟು ಆಫರ್ ಯಾಕೆಂದ ನೆಟ್ಟಿಗರು!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉತ್ತರಾಖಂಡದ ಬೀದಿಯಲ್ಲಿ ಕುರುಕಲು ತಿಂಡಿ ಸವಿದ ದರ್ಶನ್.!
Recommended Video
'ರಾಬರ್ಟ್' ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗುತ್ತಿದ್ದ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬ್ರೇಕ್ ತೆಗೆದುಕೊಂಡಿದ್ದಾರೆ. ಹೇಳಿ ಕೇಳಿ ದರ್ಶನ್ ಗೆ ಪ್ರಾಣಿ-ಪಕ್ಷಿಗಳು ಅಂದ್ರೆ ಪ್ರಾಣ. ಹೀಗಾಗಿ, ವೈವಿಧ್ಯಮಯ ಪಕ್ಷಿಗಳ ಫೋಟೋಗಳನ್ನು ಸೆರೆಹಿಡಿಯಲು ನಟ ದರ್ಶನ್ ಉತ್ತರಾಖಂಡಕ್ಕೆ ತೆರಳಿದ್ದಾರೆ.
ಬೆಟ್ಟ, ಗುಡ್ಡ, ನದಿ ಎನ್ನುವುದನ್ನು ಲೆಕ್ಕಿಸದೆ, ಕೊರೆಯುವ ಚಳಿಯಲ್ಲಿ ಉತ್ತರಾಖಂಡದ ಸಾತ್ ತಾಲ್ ಪ್ರಾಂತ್ಯದಲ್ಲಿ ದರ್ಶನ್ ಬೀಡುಬಿಟ್ಟಿದ್ದಾರೆ.
ಏಳು ಸರೋವರಗಳ ನಾಡು ಸಾತ್ ತಾಲ್ ವಲಸೆ ಹಕ್ಕಿಗಳ ಪಾಲಿಗೆ ಸ್ವರ್ಗ. ಇಲ್ಲಿ ಪಕ್ಷಿಗಳಿಗಾಗಿ ತಾಳ್ಮೆಯಿಂದ ಕಾದು ಕುಳಿತು ಅದ್ಭುತ ಚಿತ್ರಗಳನ್ನು ಕ್ಲಿಕ್ ಮಾಡಿದ್ದಾರೆ ನಟ ದರ್ಶನ್.
ಮತ್ತೆ ಕ್ಯಾಮರಾ ಹೆಗಲಿಗೇರಿಸಿಕೊಂಡು ಕಾಡಿಗೆ ತೆರಳಿದ ದರ್ಶನ್: ಡಿ ಬಾಸ್ ಈಗ ಎಲ್ಲಿದ್ದಾರೆ?
ಫೋಟೋಗ್ರಾಫಿ ಜೊತೆಗೆ ಉತ್ತರಾಖಂಡವನ್ನು ಒಂದು ರೌಂಡ್ ಹಾಕುತ್ತಿದ್ದಾರೆ ನಟ ದರ್ಶನ್. ಫೋಟೋಗ್ರಾಫರ್ ರಾಹುಲ್ ಶರ್ಮಾ, ಬರ್ಡಿಂಗ್ ಕ್ಯಾಂಪ್ ಗೈಡ್ ಶುಭಂ ಕುಮಾರ್, ಸ್ನೇಹಿತರಾದ ಕಿರಣ್ ಶ್ರೀನಿವಾಸ್, ರಾಜೇಶ್, ಮನು ಅಯ್ಯಪ್ಪ, ಸುನೀಲ್ ಜೊತೆಗೆ ಸಾಮಾನ್ಯರಂತೆ ಉತ್ತರಾಖಂಡದ ಬೀದಿಗಳಲ್ಲಿ ನಟ ದರ್ಶನ್ ಕುರುಕಲು ತಿಂಡಿ ಸವಿದಿದ್ದಾರೆ. ಜೊತೆಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ.
ಉತ್ತರಾಖಂಡದಲ್ಲಿ ದರ್ಶನ್ ಮತ್ತು ತಂಡದ ಫೋಟೋಗ್ರಫಿ ಅಡ್ವೆಂಚರ್ ಕುರಿತಾದ ವಿಡಿಯೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.