Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಇದು ನಿಜವಾಗಲೂ ಅಸಹ್ಯ': ಜಂಟಲ್ ಮ್ಯಾನ್ ಕಾರ್ಯಕ್ರಮದಲ್ಲಿ ಡಿ-ಬಾಸ್ ಬೇಸರ
Recommended Video
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ 'ಜಂಟಲ್ ಮ್ಯಾನ್' ಸಿನಿಮಾ ಫೆಬ್ರವರಿ 7 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಮೊದಲಿನಿಂದಲೂ ಜೊತೆಯಾಗಿ ನಿಂತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲೂ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಮುಂಬೈನಲ್ಲೊಬ್ಬ ರಿಯಲ್ 'ಜಂಟಲ್ ಮ್ಯಾನ್': ದಿನಕ್ಕೆ 20 ಗಂಟೆ ನಿದ್ದೆ!
ಈ ವೇಳೆ ವೇದಿಕೆ ಮೇಲೆ ಮಾತನಾಡುತ್ತಿದ್ದ ಡಿ-ಬಾಸ್ ಕೆಲವು ವಿಚಾರಕ್ಕೆ ಬೇಸರ ಮಾಡಿಕೊಂಡರು. ಕನ್ನಡ ಇಂಡಸ್ಟ್ರಿಯಲ್ಲಿ ಆಗುತ್ತಿರುವ ಬೆಳವಣಿಗೆ ಕುರಿತು ಅಸಹ್ಯ ವ್ಯಕ್ತಪಡಿಸಿದರು.
ಅಷ್ಟಕ್ಕೂ, ದರ್ಶನ್ ಬೇಸರವಾಗಲು ಕಾರಣವೇನು? ಯಾವ ವಿಷಯ ವಿರುದ್ಧ ಚಾಲೆಂಜಿಂಗ್ ಸ್ಟಾರ್ ಎಚ್ಚರಿಕೆ ಕೊಟ್ಟಿದ್ದು? ಮುಂದೆ ಓದಿ....
ಸಂಚಾರಿ ವಿಜಯ್ ಬಹಳ ದೊಡ್ಡ ನಟ
ಜಂಟಲ್ ಮ್ಯಾನ್ ಸಿನಿಮಾ ಹಾಡು, ಟ್ರೈಲರ್ ಮೆಚ್ಚಿಕೊಂಡು ದರ್ಶನ್ ಇಂಡಸ್ಟ್ರಿಯಲ್ಲಿನ ಬೆಳವಣಿಗೆ ಕುರಿತು ಬೇಸರ ವ್ಯಕ್ತಡಿಸಿದ್ದಾರೆ. ''ದಯವಿಟ್ಟು ಕನ್ನಡಿಗರು ಸ್ವಲ್ಪ ಎದ್ದೇಳಿ ಎಂದು ಕೇಳಿಕೊಳ್ಳುತ್ತೇನೆ. ಸಂಚಾರಿ ವಿಜಯ್ ಅವರು ಬಹಳ ದೊಡ್ಡ ನಟರು. ನಾನು ಅವನಲ್ಲ ಅವಳು ನೋಡಿದೆ, ಅವರ ಮೇಲೆ ಫಿದಾ ಆಗ್ಬಿಟ್ಟೆ. ಒಳ್ಳೆಯ ಪ್ರಯತ್ನ ಇತ್ತು. ಅದೇ ಬೇರೆ ಭಾಷೆಯಲ್ಲಿ ಆಗಿದ್ರೆ ಚಪ್ಪಾಳೆ ಹೊಡೆದು, ದುಡ್ಡು ಕೊಟ್ಟು ಕಳುಹಿಸುತ್ತಿದ್ವಿ'' ಎಂದು ಬೇಸರದ ಮಾತನ್ನಾಡಿದರು.
ಫೆಬ್ರವರಿ 7ಕ್ಕೆ 'ಜಂಟಲ್ ಮ್ಯಾನ್' ಸಿನಿಮಾ ಅದ್ಧೂರಿ ಬಿಡುಗಡೆ
ಇದು ನಿಜವಾಗಲೂ ಅಸಹ್ಯ
''ಇದು ನಿಜವಾಗಲು ಅಸಹ್ಯ ಅನಿಸುತ್ತೆ. ನಾವು ಕನ್ನಡಿಗರು ಎಂದು ಹೇಳಲು ಹೆಮ್ಮೆ ಆಗುತ್ತೆ. ಆದರೆ, ಆ ಕಡೆ ಈ ಕಡೆ ನೋಡ್ಕೊಂಡು ನಮ್ಮವರನ್ನು ಬಿಟ್ಟು ಬಿಡ್ತೀವಿ'' ಎಂದು ಹೇಳುವ ಮೂಲಕ ನೆರೆದಿದ್ದವರು ಯೋಚಿಸುವಂತೆ ಮಾಡಿದರು.
ಅಂದು ರಸ್ತೆಯಲ್ಲಿ ನಿಂತು ದರ್ಶನ್ ಸನ್ಮಾನ ನೋಡಿದ ಬಾಲಕ ಈಗ ಸ್ಟಾರ್
ತಂತ್ರಜ್ಞ ಸಿನಿಮಾ ನಿರ್ಮಿಸುವುದು ಗ್ರೇಟ್
''ಒಬ್ಬ ತಂತ್ರಜ್ಞ ಒಂದು ಸಿನಿಮಾ ನಿರ್ಮಾಣ ಮಾಡ್ತಾರೆ ಅಂದ್ರೆ ನಿಜಕ್ಕೂ ಗ್ರೇಟ್. ಒಬ್ಬ ನಿರ್ದೇಶಕ ಆಗಿದ್ದವರು ನಿರ್ಮಾಪಕರಾಗಿ ಬೇರೆ ತಂತ್ರಜ್ಞರ ಜೊತೆ ಸಿನಿಮಾ ಮಾಡುವುದು ಉತ್ತಮ ಬೆಳವಣಿಗೆ. ಯಾಕಂದ್ರೆ ನಾನು ಒಬ್ಬ ತಂತ್ರಜ್ಞ. ಕನ್ನಡಿಗರು ಇಂತಹ ಸಿನಿಮಾಗಳನ್ನ ಬೆಂಬಲಿಸಿ'' ಎಂದು ಮನವಿ ಮಾಡಿದರು.
ಅಂಡ ಬಗ್ಗಿಸಿಕೊಂಡು ಚಿತ್ರ ನೋಡಿ
''ಬೇರೆ ಭಾಷೆ ಚಿತ್ರ ನೋಡಿರ್ತಾರೆ...ನಮ್ಮ ಸಿನಿಮಾಗಳನ್ನು ನೋಡಲ್ಲ, ಸಿಕ್ಕಾಗ 'ಏನ್ ದರ್ಶನ್ ನಮ್ಮ ಕನ್ನಡದಲ್ಲಿ ಇಂತಹ ಸಿನಿಮಾಗಳು ಬರಲ್ಲ' ಅಂತಾರೆ...'ಸ್ವಲ್ಪ ಅಂಡ ಬಗ್ಗಿಸಿ ಕೂತ್ಕೊಂಡು ಇಂತಹ ಸಿನಿಮಾ ನೋಡ್ರಯ್ಯಾ...ಗೊತ್ತಾಗುತ್ತೆ...'' ಎಂದು ಡಿ ಬಾಸ್ ಕನ್ನಡ ಚಿತ್ರಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.