ಆನೆ-ಹುಲಿ ದತ್ತು ನವೀಕರಿಸಿದ ಮೃಗಾಲಯದ ಮಹಾ'ಪೋಷಕ' ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಪ್ರಾಣಿ ಪಕ್ಷಿಗಳೆಂದರೆ ಎಲ್ಲಿಲ್ಲದ ಮಮತೆ, ಪ್ರೀತಿ, ಅಕ್ಕರೆ. ತಮ್ಮ ತೋಟದ ಮನೆಯಲ್ಲಿ ಕುದುರೆಗಳು, ಹಸು, ದನ, ಕರುಗಳು, ನಾಯಿ ಮರಿಗಳು ಸೇರಿದಂತೆ ವಿವಿಧ ಪ್ರಭೇದದ ಪಕ್ಷಿಗಳನ್ನೂ ಸಾಕಿರುವ ದರ್ಶನ್ ತಮ್ಮ ಹುಟ್ಟೂರು ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲೂ ಆನೆ ಹಾಗೂ ಹುಲಿಯನ್ನ ದತ್ತು ಪಡೆದಿದ್ದರು.
ಕಳೆದ ನಾಲ್ಕು ವರ್ಷಗಳಿಂದ ಹುಲಿ ಹಾಗೂ ಎರಡು ಆನೆಗಳನ್ನು ದತ್ತು ಪಡೆದಿರುವ ದರ್ಶನ್, ಇದೀಗ 2.75 ಲಕ್ಷ ರೂಪಾಯಿ ಪಾವತಿ ಮಾಡುವ ಮೂಲಕ ಮುಂದಿನ ಒಂದು ವರ್ಷದ ಅವಧಿಗೆ ತಮ್ಮ ದತ್ತು ಸ್ವೀಕಾರವನ್ನ ನವೀಕರಿಸಿದ್ದಾರೆ.

ಹುಲಿ ಹಾಗೂ ಆನೆಗಳ ಲಾಲನೆ-ಪಾಲನೆಗೆ ಹಣ ನೀಡಿ, ವನ್ಯಜೀವಿಗಳ ಮೇಲಿನ ತಮ್ಮ ಕಾಳಜಿಯನ್ನ ಸಾಬೀತು ಪಡಿಸಿದ್ದಾರೆ ದರ್ಶನ್.
ವನ್ಯಜೀವಿಗಳ ಬಗ್ಗೆ ವಿಶೇಷ ಒಲವು ಹೊಂದಿರುವ ದರ್ಶನ್, ಮೈಸೂರು ಮೃಗಾಲಯದ ಮಹಾ ಪೋಷಕರಾಗಿದ್ದರೆ ಎಂದು ಮೃಗಾಲಯ ಸಿಬ್ಬಂದಿ ಕೊಂಡಾಡುತ್ತಾರೆ.
More from Filmibeat
English summary
Challenging Star Darshan has extended his adoption period of Tiger and an Elephant for another one year by paying Rs.2.75 Lakh to Mysore Zoo Authorities.


Click it and Unblock the Notifications











