Don't Miss!
- News ಲೋಕಸಭೆ ಚುನಾವಣೆ 2024: ಪ್ರಿಯಾಂಕಾ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಕಣಕ್ಕೆ!?
- Lifestyle ದೇಹದಲ್ಲಿ ಈ 7 ಭಾಗದಲ್ಲಿ ಊತ ಉಂಟಾದರೆ ಅದು ಫ್ಯಾಟಿ ಲಿವರ್ನ ಲಕ್ಷಣವಾಗಿದೆ, ನಿರ್ಲಕ್ಷ್ಯ ಮಾಡಬೇಡಿ
- Finance ನೀರಿನ ಬಿಕ್ಕಟ್ಟು: ಬೆಂಗಳೂರು ತೊರೆಯಲು ಮುಂದಾದ ಅನೇಕ ನಿವಾಸಿಗಳು!
- Technology ಇಂದು ಒನ್ಪ್ಲಸ್ನ ಈ ಸ್ಪೆಷಲ್ ಮೊಬೈಲ್ನ ಫಸ್ಟ್ ಸೇಲ್!..ಬೆಲೆ ಎಷ್ಟು ಅಂತೀರಾ?
- Automobiles ಭಾರತದ ರಸ್ತೆಯಲ್ಲಿ ಘರ್ಜಿಸಲು ಬಂದ ಪವರ್ಫುಲ್ ಎಪ್ರಿಲಿಯಾ ಬೈಕ್ ವಿತರಣೆ ಮಾಹಿತಿ ಬಹಿರಂಗ
- Sports ಆರ್ಸಿಬಿ ಸ್ಟಾರ್ ಶ್ರೇಯಾಂಕಾ ಪಾಟೀಲ್ ಬಗ್ಗೆ ನಿಮಗೆಷ್ಟು ಗೊತ್ತು?; ಶಿಕ್ಷಣ, ವಯಸ್ಸು, ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರದುರ್ಗದ ದರ್ಶನ್ ಅಭಿಮಾನಿಯ ಕೆಲಸಕ್ಕೆ 'ಡಿ' ಭಕ್ತರು ಖುಷಿಯೋ ಖುಷಿ
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾಲಿಗೆ ಚಿತ್ರದುರ್ಗ ತುಂಬಾ ವಿಶೇಷವಾಗಿದೆ. ಚಿತ್ರದುರ್ಗದ ಪಾಳೇಗಾರ 'ಮದಕರಿ ನಾಯಕ'ನ ಕುರಿತು ಸಿನಿಮಾ ಮಾಡುವ ವಿಷ್ಯ ಗೊತ್ತಾಗುತ್ತಿದ್ದಂತೆ ಡಿ ಬಾಸ್ ಭಕ್ತರು ಹಬ್ಬ ಆಚರಿಸುತ್ತಿದ್ದಾರೆ. ಅದರಲ್ಲೂ ದುರ್ಗದ ಅಭಿಮಾನಿಗಳಂತೂ ಡಿ ಉತ್ಸವ ಮಾಡುತ್ತಿದ್ದಾರೆ.
ಇತ್ತೀಚಿಗಷ್ಟೆ ಚಿತ್ರದುರ್ಗದ ಮುರುಘಾಮಠಕ್ಕೆ ದರ್ಶನ್ ಭೇಟಿ ನೀಡಿದ್ದರು. ಈ ವೇಳೆ ನೀಡಿದ್ದ ದಾಸನನ್ನ ನೋಡಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಇದು ನಡೆದ ಎರಡ್ಮೂರು ದಿನದಲ್ಲೇ ಈಗ ಚಿತ್ರದುರ್ಗದಲ್ಲಿ ಅಭಿಮಾನಿಯೊಬ್ಬರು ಗಮನ ಸೆಳೆದಿದ್ದಾರೆ.
ಮುರುಘಾಮಠಕ್ಕೆ ದರ್ಶನ್-ರಾಕ್ ಲೈನ್ ಭೇಟಿ ಹಿಂದೆ ಬಲವಾದ ಕಾರಣ.!
ತಮ್ಮ ನೆಚ್ಚಿನ ನಟನ ಮೇಲಿನ ಅಭಿಮಾನವನ್ನ ತೋರಿಸಲು ಮೈಮೇಲೆ ಅಚ್ಚೆ, ವಾಹನಗಳ ಮೇಲೆ ಪೋಸ್ಟರ್, ಕತ್ತಲ್ಲಿ ಡಾಲರ್ ಹೀಗೆ ತಾವು ಬಳಸುವ ವಸ್ತುಗಳ ಮೇಲೆ ದರ್ಶನ್ ಅವರನ್ನ ನೋಡುವ ಅಭಿಮಾನಿಗಳಿದ್ದಾರೆ. ಆದ್ರೆ, ಇಲ್ಲೊಬ್ಬ ಅಭಿಮಾನಿ ತಾವು ಕಟ್ಟಿರುವ ಹೊಸ ಮನೆಯಲ್ಲೇ 'ಐರಾವತ'ನನ್ನ ನೆನಪಿಸಿಕೊಂಡಿದ್ದಾರೆ. ಮುಂದೆ ಓದಿ.....
ದರ್ಶನ್ ಹೆಸರಲ್ಲಿ ಮನೆ ಕಟ್ಟಿದ ಅಭಿಮಾನಿ
ಅಭಿಮಾನ ಎನ್ನುವುದು ಹೇಗೆಲ್ಲಾ ಇರುತ್ತೆ ಎನ್ನುವುದಕ್ಕೆ ಇಲ್ಲೊಂದು ವಿಶೇಷ ನಿದರ್ಶನ ಸಿಕ್ಕಿದೆ. ಸ್ವಂತ ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಕನಸು. ಆ ಮನೆ ಕಟ್ಟಿದ ನಂತರ ಆ ಮನೆಗೆ ತಂದೆ-ತಾಯಿ ಅಥವಾ ದೇವರ ಹೆಸರು ಇಡುವುದು ಸಾಮಾನ್ಯ. ಆದ್ರೆ, ಇಲ್ಲೊಬ್ಬ ಅಭಿಮಾನಿ ತಾನು ಕಟ್ಟಿರುವ ಹೊಸ ಮನೆಗೆ ದರ್ಶನ್ ಹೆಸರಿಟ್ಟಿದ್ದಾರೆ.
ಜನವರಿ ತಿಂಗಳಲ್ಲಿ ದರ್ಶನ್ ಅಭಿನಯದ ಎರಡು ಸಿನಿಮಾ ಆರಂಭ.!
'ಚಾಲೆಂಜಿಂಗ್ ಸ್ಟಾರ್' ನಿವಾಸ
ಚಿತ್ರದುರ್ಗದ ಯೋಗಿ ಎಂಬುವರು ತಮ್ಮ ಮನೆಗೆ 'ಚಾಲೆಂಜಿಂಗ್ ಸ್ಟಾರ್' ಎಂದು ನಾಮಕರಣ ಮಾಡಿದ್ದರು. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ದರ್ಶನ್ ಅಭಿಮಾನಿಯ ಈ ಅಭಿಮಾನಕ್ಕೆ ಭಕ್ತಗಣ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.
ದರ್ಶನ್ 'ಮದಕರಿ ನಾಯಕ' ಚಿತ್ರಕ್ಕೆ ನಾಯಕಿ ಇವರಾಗ್ಬೇಕಂತೆ
'ಬಾಸ್' ಮನೆಗೆ ಗೃಹ ಪ್ರವೇಶ
ಇತ್ತೀಚಿಗಷ್ಟೆ ಈ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ನಡೆದಿದೆ. ಈ ಮನೆ ಗ್ರೌಂಡ್ ಫ್ಲೋರ್ ಮತ್ತು ಫಸ್ಟ್ ಫ್ಲೋರ್ ಹೊಂದಿದೆ. ಯೋಗಿ ಎಂಬುವರು ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ದರ್ಶನ್ ನೆನಪಿಗಾಗಿ ಇಂತಹ ಕೆಲಸ ಮಾಡಿದ್ದಾರೆ.
'ಮದಕರಿ ನಾಯಕ' ಯಾರಾಗಬೇಕು, ಜನಾಭಿಮತ ಏನು ಹೇಳುತ್ತಿದೆ.?
ಅಭಿಮಾನಿಗೆ ಅಭಿಮಾನಿಗಳಾದ್ರು
ಇನ್ನು ಯೋಗಿ ಅವರ ಈ ಅಭಿಮಾನಕ್ಕೆ ಡಿ ಬಾಸ್ ಭಕ್ತು ಶುಭಾಶಯ ತಿಳಿಸಿ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಅಭಿಮಾನದ ಬಗ್ಗೆ ನೀವು ಕೂಡ ನಿಮ್ಮ ಅಭಿಪ್ರಾಯವನ್ನ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಬಹುದು.
'ಧ್ರುವ ಸರ್ಜಾ ಮುಂದಿನ ದರ್ಶನ್' ಅಂದಿದ್ದಕ್ಕೆ ಆಕ್ಷನ್ ಪ್ರಿನ್ಸ್ ಹೇಳಿದ್ದೇನು.?