ಬೆಳ್ಳಿ ಪರ್ವ ; ವೇದಿಕೆ ಮೇಲೆ ಗುಡುಗಿದ್ದೇಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ? ದಾಸ ಮಾಡಿಕೊಂಡ ಮನವಿ ಏನು..?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ ನೇರ ದಿಟ್ಟ ನಿರಂತರ ಎಂಬಂತಹ ವ್ಯಕ್ತಿತ್ವ. ಇದ್ದಿದ್ದನ್ನ ಇದ್ದ ಹಾಗೇ ಹೇಳುವ ಅಭಿಮಾನಿಗಳ ಈ ದಾಸ ,ಬೆಳ್ಳಿ ಪರ್ವದ ಪ್ರಯುಕ್ತ ನೆರವೇರಿದ್ದ ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟರು.
ಹೌದು, ಅಸಲಿಗೆ ದರ್ಶನ್ ಬೆಳ್ಳಿ ಪರ್ವಕ್ಕೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಇನ್ನೂ ದರ್ಶನ್ ಅವರ ಅಭಿಮಾನಿಗಳ ಸಂಖ್ಯೆ ನಿಮಗೆ ಗೊತ್ತು. ಸಾಗರೋಪಾದಿಯಲ್ಲಿ ಸೇರಿದ್ದ ಅಭಿಮಾನಿಗಳು ಪುಳಕಿತಗೊಂಡಿದ್ದರು. ಕೇಕೆ ಹಾಕುತ್ತಿದ್ದರು.

ಇನ್ನೂ ಈ ಕಾರ್ಯಕ್ರಮದಲ್ಲಿ ಸುಮಲತಾ ಅಂಬರೀಷ್, ಧನಂಜಯ್, ವಿನೋದ್ ಪ್ರಭಾಕರ್, ಪ್ರಜ್ವಲ್ ದೇವರಾಜ್, ನಿನಾಸಂ ಸತೀಶ್, ಅಭಿಷೇಕ್, ಧನ್ವೀರ್, ಚಿಕ್ಕಣ್ಣ, ವಿನೋದ್ ರಾಜ್, ನೆನಪಿರಲಿ ಪ್ರೇಮ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ, ಸುತ್ತೂರು ಮಠ ಶ್ರೀ, ನಿರ್ಮಲಾನಂದ ಸ್ವಾಮೀಜಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಯಾಗಿದ್ದರು.
ಹೀಗಾಗಿಯೇ ಅಭಿಮಾಣಿಗಳ ಸಂಭ್ರಮ ಸಡಗರ ಮುಗಿಲು ಮುಟ್ಟಿತ್ತು. ಇದೇ ಸಮಯದಲ್ಲಿ ಕನ್ನಡ ಚಿತ್ರರಂಗದ ಸಾರಥಿ ದರ್ಶನ್ ಒಂದು ನಿಮಿಷ ಸುಮ್ಮನೆ ಇರಿ, ಯಾರು ಕೂಗಬಾರದು, ಕಿರುಚಬಾರದು. ದೇವರ ಸಮಾನರಾದ ಗುರುಗಳು ಮಾತಾನಾಡುತ್ತಿದ್ದಾರೆ. ದಯಮಾಡಿ ಎಲ್ಲರೂ ಸುಮ್ಮನೇ ಇದ್ದು, ಕೇಳಿಸಿಕೊಳ್ಳಬೇಕು ಎಂದು ವಾರ್ನಿಂಗ್ ಕೊಟ್ಟರು.


Click it and Unblock the Notifications











