Don't Miss!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- News Mangalsutra Row: ಸಾಧನೆ ಹೇಳಿ ಮತ ಕೇಳಲು ಮುಖವಿಲ್ಲದ ಪ್ರಧಾನಿ: ಕಾಂಗ್ರೆಸ್
- Technology OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- Automobiles ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Lifestyle ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಳೆ ಗಾಯದ ನೋವಿನಲ್ಲಿ ದರ್ಶನ್ : ಯಜಮಾನ' ಚಿತ್ರೀಕರಣಕ್ಕೆ ಬ್ರೇಕ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಯಜಮಾನ ಸಿನಿಮಾದ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಶೂಟಿಂಗ್ ನಿಂದ ಬಿಡುವು ಮಾಡಿಕೊಂಡು ದರ್ಶನ್ ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾರಂತೆ. ವಿಶ್ರಾಂತಿ ಪಡೆಯುವಂತದ್ದು ಏನಾಯ್ತು ಅಂತೀರಾ ? ಯಜಮಾನ ಸಿನಿಮಾ ಚಿತ್ರೀಕರಣ ಇತ್ತೀಚಿಗಷ್ಟೇ ಚಿಕ್ಕಮಂಗಳೂರಿನಲ್ಲಿ ನಡೆಯುವ ಸಂದರ್ಭದಲ್ಲಿ ದರ್ಶನ್ ಅವರಿಗೆ ಕೈ ನೋವು ಕಾಣಿಸಿಕೊಂಡಿದೆ.
ಹಾಗಂತ ದರ್ಶನ್ ಯಜಮಾನ ಚಿತ್ರದ ಶೂಟಿಂಗ್ ನಲ್ಲಿ ಕೈ ಗಾಯ ಮಾಡಿಕೊಂಡಿಲ್ಲ. ಈ ಹಿಂದೆ ಚಿತ್ರೀಕರಣದ ಸಮಯದಲ್ಲಿ ದರ್ಶನ್ ಅವರ ಕೈಗೆ ಗಾಯವಾಗಿತ್ತಂತೆ ಅದರ ನೋವು ಈಗ ಕಾಣಿಸಿಕೊಂಡಿದೆ.
ಮೇ 10, 'ಬುಲ್ ಬುಲ್' ರಚಿತಾಗೆ ಅದೃಷ್ಟ ಕೊಟ್ಟ ದಿನ
ಅದಷ್ಟೇ ಅಷ್ಟೇ ಅಲ್ಲದೆ ಚಿಕ್ಕಮಂಗಳೂರಿನಲ್ಲಿ ಸಾಹಸ ದೃಶ್ಯಗಳನ್ನ ಚಿತ್ರೀಕರಿಸಲಾಗಿದ ಆ ವೇಳೆಯಲ್ಲಿ ಹಳೆ ಗಾಯದ ನೋವು ಕಾಣಿಸಿಕೊಂಡಿದೆ ಅದರ ಜೊತೆಯಲ್ಲಿ ಕಾಲು ಟ್ವಿಸ್ಟ್ ಆಗಿದೆ. ಆದ್ದರಿಂದ ಸಿನಿಮಾತಂಡ ಮೇ 2 ರಿಂದ ಬ್ರೇಕ್ ತೆಗೆದುಕೊಂಡಿದೆ.
ಇದೇ ಸಮಯದಲ್ಲಿ ದರ್ಶನ್ ತನ್ನ ಆಪ್ತರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿ ಆಗಿದ್ದರು. ಇಂದು ನಡೆದ ವಿನೋದ್ ಪ್ರಭಾಕರ್ ಅವರ ಹೊಸ ಸಿನಿಮಾ ಮಹೂರ್ತದಲ್ಲಿಯೂ ದರ್ಶನ್ ಅವರ ಕೈಗೆ ಪೆಟ್ಟಾಗಿರುವುದು ಗೊತ್ತಾಗುತ್ತಿತ್ತು. ಸದ್ಯ ಚೇತರಿಸಿಕೊಳ್ಳುತ್ತಿರುವ ಚಾಲೆಂಜಿಂಗ್ ಸ್ಟಾರ್ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆ ಆಗುವ ಹೊತ್ತಿಗೆ ಚಿತ್ರೀಕರಣದಲ್ಲಿ ಭಾಗಿ ಆಗುತ್ತಾರೆ.