Don't Miss!
- News ಕೇಂದ್ರದ ಬಿಜೆಪಿ ಸರ್ಕಾರದಿಂದ ಅನ್ನದಾತರಿಗೆ ಮೋಸ ; ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದ ಸಂಯುಕ್ತಾ ಪಾಟೀಲ್
- Finance ಬೆಂಗಳೂರು, ನೋಯ್ಡಾ, ಪುಣೆಯಲ್ಲಿ ಶೀಘ್ರದಲ್ಲೇ ಹೊಸ ಆಪಲ್ ಸ್ಟೋರ್ ಪ್ರಾರಂಭ
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Automobiles ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
- Lifestyle ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು.! ಹೇಗೆ ಗೊತ್ತಾ?
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಾರಕ್ ನಂತರ 'ದಿಟ್ಟ ನಿರ್ಧಾರ' ಕೈಗೊಂಡ ದರ್ಶನ್
ಅದೊಂದು ಕಾಲವಿತ್ತು. ಒಂದು ಸಿನಿಮಾ ಮಾಡಬೇಕಾದರೇ ನಿಗದಿತ ದಿನಗಳಲ್ಲಿ ಚಿತ್ರೀಕರಣ ಮುಗಿಸುತ್ತಿದ್ದರು. ಆದ್ರೆ, ಇತ್ತೀಚಿನ ದಿನಗಳಲ್ಲಿ ಒಂದು ಸಿನಿಮಾದ ಶೂಟಿಂಗ್ 100 ದಿನಗಳಾದರೂ ಮುಗಿಯುವುದಿಲ್ಲ.
ಇದರಿಂದ ಸ್ಟಾರ್ ನಟರ ಸಿನಿಮಾಗಳು ವರ್ಷಕ್ಕೆ ಒಂದು ಅಥವಾ ಎರಡು ಮಾತ್ರ ಬಿಡುಗಡೆಯಾಗುತ್ತಿವೆ. ಆದ್ರೆ, ಈ ವಿಷ್ಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ನಿರ್ಧಾರವನ್ನ ಕೈಗೊಂಡಿದ್ದಾರೆ.
ಇನ್ಮುಂದೆ ದರ್ಶನ್ ಅವರ ಕಾಲ್ ಶೀಟ್ ಬೇಕಂದ್ರೆ, ನಿರ್ಮಾಪಕರು ಹಾಗೂ ನಿರ್ದೇಶಕರು ಮೊದಲೇ ಪ್ಲಾನ್ ಮಾಡ್ಕೊಂಡು ಸಿನಿಮಾ ಮಾಡ್ಬೇಕು. ಇಲ್ಲವಂದ್ರೆ, 'ದಾಸ' ಕಾಲ್ ಶೀಟ್ ಕೊಡಲ್ಲ. ಅಷ್ಟಕ್ಕೂ, ದರ್ಶನ್ ಕೈಗೊಂಡಿರುವ ಹೊಸ ತೀರ್ಮಾನವೇನು? ಮುಂದೆ ಓದಿ.....
65 ದಿನ ಮಾತ್ರ ಕಾಲ್ ಶೀಟ್
ಇನ್ಮುಂದೆ ಒಂದು ಚಿತ್ರಕ್ಕೆ ದರ್ಶನ್ ಅವರು ಕಾಲ್ ಶೀಟ್ ನೀಡುವುದು ಕೇವಲ 65 ದಿನ ಮಾತ್ರ. ಅಷ್ಟು ದಿನದೊಳಗೆ ಚಿತ್ರದ ಕಂಪ್ಲೀಟ್ ಶೂಟಿಂಗ್ ಮುಗಿಸಬೇಕು.
'ತಾರಕ್' ರಿಯಲ್ ಹೀರೋಗಳ ಬಗ್ಗೆ ಖುಷಿಯಾದ ದರ್ಶನ್ ಹೇಳಿದ್ದೇನು?
5 ದಿನ ಬೋನಸ್
ಒಂದು ವೇಳೆ 65 ದಿನದಲ್ಲಿ ಚಿತ್ರೀಕರಣ ಮುಗಿಯದಿದ್ದರೇ, ಇನ್ನು 5 ದಿನಗಳು ಹೆಚ್ಚವರಿಯಾಗಿ ಬೋನಸ್ ನೀಡಲಿದ್ದಾರೆ. ತದ ನಂತರ ಮುಗಿಸಲ್ಲ ಅಂದ್ರೆ, ಕಷ್ಟವಾಗಬಹುದು. ಅಲ್ಲಿಗೆ 70 ದಿನಗಳಿಗಿಂತ ಹೆಚ್ಚಾಗಿ ಡೇಟ್ಸ್ ಕೊಡಬಾರದು ಎಂಬ ತೀರ್ಮಾನಕ್ಕೆ ದರ್ಶನ್ ಬಂದಿದ್ದಾರೆ.
'ತಾರಕ್' ಚಿತ್ರದ ಹಾಡುಗಳು ಒಂದಕ್ಕಿಂತ ಒಂದು ಸೂಪರ್
ಆ ನಂತರವೂ ಡೇಟ್ ಬೇಕಂದ್ರೆ ಫೈನ್ ಕಟ್ಟಬೇಕು
70 ದಿನಗಳ ನಂತರವೂ ಡೇಟ್ಸ್ ಬೇಕೆಂದರೆ ಹೆಚ್ಚುವರಿ ಫೈನ್ ಕಟ್ಟಬೇಕೆಂದು ಬದಲಿ ಐಡಿಯಾ ಕೊಟ್ಟಿದ್ದಾರೆ. ಅಂದ್ಹಾಗೆ, ದರ್ಶನ್ ಅವರ ಈ ನಿರ್ಧಾರ 'ತಾರಕ್' ಚಿತ್ರದಿಂದಲೇ ಜಾರಿಗೆ ಬಂದಿದೆಯಂತೆ.
'ತಾರಕ್' ಚಿತ್ರದ ಎಣ್ಣೆ ಹಾಡಿಗೆ ದರ್ಶನ್ ತಕಧಿಮಿತಾ.!
64 ದಿನದಲ್ಲಿ ತಾರಕ್ ಕಂಪ್ಲೀಟ್
ಮಿಲನ ಪ್ರಕಾಶ್ ನಿರ್ದೇಶನದ 'ತಾರಕ್' ಸಿನಿಮಾ ಕೇವಲ 64 ದಿನದಲ್ಲಿ ಕಂಪ್ಲೀಟ್ ಆಗಿದೆಯಂತೆ. ನಿರ್ದೇಶಕ ಪ್ರಕಾಶ್ ಅವರು ಅಂದುಕೊಂಡಿದ್ದ ದಿನದಲ್ಲಿ ಚಿತ್ರೀಕರಣ ಮುಗಿಸಿದ ಮೇಲೆ ಇಂತಹದೊಂದು ನಿರ್ಧಾರಕ್ಕೆ ಬಂದಿದ್ದಾರೆ. ಪ್ರಕಾಶ್ ಅವರು ಮಾಡಿಕೊಂಡಿದ್ದ ಸಿದ್ಧತೆಗಳು ಹಾಗೂ ಅದರಂತೆ ಚಿತ್ರೀಕರಣ ಮುಗಿಸಿರುವ ಬಗ್ಗೆ ದರ್ಶನ್ ಸಂತಸ ವ್ಯಕ್ತಪಡಿಸಿದ್ದಾರೆ.