Don't Miss!
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- News ಪೂಜೆ ಮಾಡಿದ ಈ ಲಿಂಬೆಹಣ್ಣು ಲಕ್ಷಕ್ಕೆ ಹರಾಜ್! ಶಾಕ್ ಆಡ್ಬೇಡಿ ಇದು ನಿಜ...
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನಾನೊಬ್ಬ ಕಾಡು ಮನುಷ್ಯ' ಜಾತಿ ಚರ್ಚೆಗೆ ಡಿ-ಬಾಸ್ ಖಡಕ್ ಉತ್ತರ
ಮಂಡ್ಯ ಸಂಸದ ಶಿವರಾಮೇಗೌಡ ಅವರು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಜಾತಿ ಬಗ್ಗೆ ಪ್ರಶ್ನೆ ಮಾಡಿದ್ದರು. ಸುಮಲತಾ ಅವರು ನಾಯ್ಡು ಕುಟುಂಬದವರು, ಮಂಡ್ಯ ಗೌಡ್ತಿ ಹೇಗಾಗ್ತಾರೆ ಎಂದು ಟೀಕಿಸಿದ್ದರು.
ಅದೇ ರೀತಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ನಟ ದರ್ಶನ್ ಕೂಡ ನಾಯ್ಡು. ಮಂಡ್ಯವನ್ನ ನಾಯ್ಡು ಮಯ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದರು. ಶಿವರಾಮೇಗೌಡರ ಈ ಜಾತಿ ಹೇಳಿಕೆಗೆ ನಟ ದರ್ಶನ್ ತಿರುಗೇಟು ನೀಡಿದ್ದಾರೆ.
ಪ್ರಚಾರದ ವೇಳೆ ದರ್ಶನ್ ಗೆ ಮಹಿಳಾ ಅಭಿಮಾನಿಯಿಂದ ಸರ್ಪ್ರೈಸ್
'ನಾನು ಕ್ರಿಶ್ಚಿಯನ್, ಮುಸ್ಲಿಂ, ಹಿಂದೂ...ಅದಕ್ಕೂ ಮಿಗಿಲಾಗಿ ನಾನು ಕಾಡು ಮನುಷ್ಯ. ನಾನು ನಾಯ್ಡು ಹೌದು, ಅದ್ರಲ್ಲಿ ತಪ್ಪೇನಿದೆ? ಎಂದು ಮರುಪ್ರಶ್ನಿಸುವ ಮೂಲಕ ಶಿವರಾಮೇಗೌಡ ಅವರಿಗೆ ಖಡಕ್ ಆಗಿ ಉತ್ತರಿಸಿದ್ದಾರೆ.
ದರ್ಶನ್ ಬಂದ್ರು ಅಂತ ವೋಟ್ ಬರಲ್ಲ: 'ದಾಸ'ನಿಗೆ ಜಿಟಿ ದೇವೇಗೌಡ ಟಾಂಗ್
ಇನ್ನು ದರ್ಶನ್ ಅವರು ಪ್ರಚಾರ ಮಾಡಿದ ಕಡೆ ವೋಟ್ ಬರಲ್ಲ ಎಂದು ಜಿಟಿ ದೇವೇಗೌಡ ಅವರು ಹೇಳಿದ್ದರು. ಅದಕ್ಕೆ ಪ್ರತಿಯಾಗಿ ಮಾತನಾಡಿದ ದರ್ಶನ್, ''ಪರವಾಗಿಲ್ಲ, 100 ವೋಟ್ ಇಲ್ಲ ಅಂದ್ರೂ 50 ವೋಟ್ ಬರಲಿ ಖುಷಿನೇ'' ಎಂದು ಕೂಲ್ ರಿಯಾಕ್ಟ್ ಮಾಡಿದ್ರು.
ಒಟ್ನಲ್ಲಿ, ಚುನಾವಣ ಪ್ರಚಾರಕ್ಕೆ ಬಂದ ಆರಂಭದ ದಿನದಿಂದಲೂ ದರ್ಶನ್ ಅವರು ಹೇಳುತ್ತಿರುವುದು ಒಂದೇ ಮಾತು. 'ಯಾರೇ ಏನೂ ಹೇಳಿದ್ರು ನಾನು ಬೇಜಾರು ಮಾಡಿಕೊಳ್ಳಲ್ಲ, ನೊಂದುಕೊಳ್ಳಲ್ಲ, ಕೋಪ ಮಾಡಿಕೊಳ್ಳಲ್ಲ' ಅಂತ. ಹಾಗಾಗಿಯೇ ಸುಮಲತಾ ಅವರ ಪರ ವೋಟ್ ಹಾಕಿ ಎಂದು ಮನವಿ ಮಾಡುತ್ತಿದ್ದಾರೇ ಹೊರತು ಬೇರೆ ವಿಷ್ಯಗಳ ಬಗ್ಗೆ ಪ್ರಸ್ತಾಪ ಮಾಡ್ತಿಲ್ಲ.