Don't Miss!
- News ಅಧಿಕಾರಕ್ಕೆ ಬಂದ 2-3 ತಿಂಗಳಲ್ಲಿ ಕಾಡುಗೊಲ್ಲರಿಗೆ ನ್ಯಾಯ ದೊರಕಿಸಿ ಕೊಡುತ್ತೇವೆ-ಕುಮಾರಸ್ವಾಮಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕ್ಯಾನ್ಸರ್ ಪೀಡಿತ ರೋಗಿಯ ಕೊನೆ ಆಸೆ ಪೂರೈಸಿದ ಡಿ ಬಾಸ್
Recommended Video
ಚಾಲೆಂಜಿಂಗ್ ಸ್ಟಾರ್ ಅವರ ಅಪ್ಪಟ ಅಭಿಮಾನಿ ರೇವಂತ್ ತನ್ನ ಜೀವನದ ಕೊನೆ ದಿನಗಳನ್ನ ಎಣಿಸುತ್ತಿದ್ದಾರೆ. ಸುಮಾರು ದಿನಗಳಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ರೇವಂತ್ ಸಾಯುವ ಮುನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ಭೇಟಿ ಮಾಡಬೇಕು ಎನ್ನುವ ಆಸೆಯನ್ನ ವ್ಯಕ್ತ ಪಡಿಸಿದ್ದರು.
ಶಿವಮೊಗ್ಗ ಮೂಲದವರಾಗಿರುವ ರೇವಂತ್ ವಿಚಾರ ಅಭಿಮಾನಿಗಳಿಂದ ಚಾಲೆಂಜಿಂಗ್ ಸ್ಟಾರ್ ಗೆ ತಿಳಿದಿತ್ತು. ಅಭಿಮಾನಿಯ ಈ ಸ್ಥಿತಿಯನ್ನ ಕಂಡು ಮರುಗಿದ ದರ್ಶನ್ ರೇವಂತ್ ಅವರ ಕೊನೆಯ ಆಸೆಯನ್ನ ಪೂರ್ತಿ ಮಾಡಲು ಮುಂದಾದರು.
ದರ್ಶನ್ ಹುಟ್ಟುಹಬ್ಬಕ್ಕೆ ಈ ಬಾರಿ ಎಲ್ಲವೂ
ರೇವಂತ್ ಆಸೆಯನ್ನ ದರ್ಶನ್ ಪೂರ್ತಿ ಮಾಡಿದ ರೀತಿ ಹೇಗೆ? ಜೀವನದ ಕೊನೆಯ ದಿನಗಳನ್ನು ಆಸ್ಪತ್ರೆಯ ಹಾಸಿಗೆ ಮೇಲೆ ಕಳೆಯುತ್ತಿರುವ ಅಭಿಮಾನಿಗೆ ದಾಸ ಹೇಳಿದ ಮಾತುಗಳೇನು? ಈ ಎಲ್ಲಾ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
ಅಭಿಮಾನಿಯ ಕೊನೆ ಆಸೆ ಪೂರೈಸಿದ ಡಿ ಬಾಸ್
ಶಿವಮೊಗ್ಗ ಮೂಲದ ಚಾಲೆಂಜಿಂಗ್ ಸ್ಟಾರ್ ಅಭಿಮಾನಿ ರೇವಂತ್ ಅವರ ಆಸೆಯನ್ನ ದರ್ಶನ್ ಪೂರೈಸಿದ್ದಾರೆ. ಸಾಯುವ ಮುನ್ನ ದಾಸನನ್ನು ಭೇಟಿ ಮಾಡಬೇಕು ಎನ್ನುವುದು ರೇವಂತ್ ಆಸೆ ಆಗಿತ್ತು. ಕೆಲಸದ ಬ್ಯುಸಿ ಆಗಿರುವ ಕಾರಣ ದರ್ಶನ್ ವಿಡಿಯೋ ಕಾಲ್ ಮಾಡಿ ರೇವಂತ್ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.
ಚಿಕಿತ್ಸೆ ತೆಗೆದುಕೊಳ್ಳುವಂತೆ ಹೇಳಿದ ಡಿ ಬಾಸ್
ರೇವಂತ್ ಅವರ ಬಳಿ ವಿಡಿಯೋ ಕಾಲ್ನಲ್ಲಿ ಮಾತನಾಡಿದ ದರ್ಶನ್ ಸರಿಯಾದ ಚಿಕಿತ್ಸೆ ಪಡೆಯುವಂತೆ ತಿಳಿಸಿದ್ದಾರೆ. ವೈದ್ಯರು ಹೇಳಿದಂತೆ ಔಷಧಿಗಳನ್ನು ತಪ್ಪದೆ ತೆಗೆದುಕೊಳ್ಳಬೇಕು ಎಂದಿದ್ದಾರೆ.
ತಂದೆ-ತಾಯಿ ಬಳಿಯೂ ಮಾತನಾಡಿದ ದರ್ಶನ್
ರೇವಂತ್ ಹಾಗೂ ಅವರ ಪೋಷಕರ ಬಳಿ ಮಾತನಾಡಿದ ದರ್ಶನ್ ಮಗನ ವಿಚಾರ ಪ್ರಸ್ತಾಪ ಮಾಡಿ ಧೈರ್ಯ ತುಂಬಿದ್ದಾರೆ. ಅಭಿಮಾನಿಯ ಮೇಲಿನ ಕಾಳಜಿ ಕಂಡು ರೇವಂತ್ ತಂದು ತಾಯಿಗೆ ಮಾತೇ ಬರದಂತಾಗಿದೆ.
ಭೇಟಿ ಮಾಡುವುದಾಗಿ ತಿಳಿಸಿದ ದರ್ಶನ್
ವಿಡಿಯೋ ಕಾಲ್ ನಲ್ಲಿ ಮಾತನಾಡಿರುವ ದರ್ಶನ್ ಬಿಡುವು ಮಾಡಿಕೊಂಡು ನೇರವಾಗಿ ಬಂದು ಭೇಟಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಕೊನೆಯ ಆಸೆಯಂತೆ ದರ್ಶನ್ ಅವರ ಮುಖ ನೋಡಿ ಮಾತನಾಡಿರುವ ಖುಷಿಯಲ್ಲಿದ್ದಾರೆ ರೇವಂತ್.