Don't Miss!
- Sports CSK vs LSG IPL 2024: ಚೆನ್ನೈನ ಚೆಪಾಕ್ ಕೋಟೆಯನ್ನು ಭೇದಿಸುವುದೇ ಲಕ್ನೋ?; ಸಂಭಾವ್ಯ ಆಡುವ 11ರ ಬಳಗ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- News Ballari Lok Sabha Election: ಶ್ರೀರಾಮುಲು ಪತ್ನಿ ನಾಮಪತ್ರ ವಾಪಸ್, ಅಂತಿಮ ಕಣದಲ್ಲಿ 10 ಅಭ್ಯರ್ಥಿಗಳು
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಗರಹೊಳೆ ಅಭಯಾರಣ್ಯದಲ್ಲಿ ಡಿ ಬಾಸ್ ಕ್ಲಿಕ್ಕಿಸಿದ ಫೋಟೋಗಳು ಇವು !
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರಣ್ಯ ಇಲಾಖೆಯ ರಾಯಭಾರಿ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆ ಹಿನ್ನಲೆಯಲ್ಲಿ ಇತ್ತೀಚಿಗಷ್ಟೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಬಿನಿ ಹಿನ್ನಿರಿನ ಅರಣ್ಯದಲ್ಲಿ ತಮ್ಮ ಸ್ನೇಹಿತರೊಂದಿಗೆ ಭೇಟಿ ಕೊಟ್ಟಿದ್ದರು.
ಪ್ರಾಣಿ ಪ್ರೇಮಿ ಆಗಿರುವ ಡಿ ಬಾಸ್ ಎರಡು ಮೂರು ದಿನ ಅರಣ್ಯ ಸಂಚಾರ ಮಾಡಿ ಅಲ್ಲಿರುವ ಕೆಲಸಗಾರರನ್ನು, ಮಾವುತರನ್ನು ಭೇಟಿ ಮಾಡಿದ್ದರು ಎನ್ನುವ ವಿಚಾರ ಕೇಳಿ ಬಂದಿತ್ತು. ಆದರೆ ದರ್ಶನ್ ಕ್ಯಾಮೆರಾ ಹಿಡಿದು ಕಾಡಿನಲ್ಲಿರುವ ಪ್ರಾಣಿ ಪಕ್ಷಿಗಳ ಫೋಟೋ ಸೆರೆ ಹಿಡಿದಿದ್ದಾರೆ ಎನ್ನುವ ವಿಷ್ಯ ಮಾತ್ರ ಹೊಸತು.
ಹೌದು ಚಾಲೆಂಜಿಂಗ್ ಸ್ಟಾರ್ ಕ್ಯಾಮೆರಾ ಹಿಡಿದು ಪ್ರಾಣಿ, ಪಕ್ಷಿಗಳ ಫೋಟೋ ಸೆರೆ ಹಿಡಿಯುತ್ತಾರೆ ಎನ್ನುವ ವಿಚಾರ ಬಹುತೇಕ ಜನರಿಗೆ ಗೊತ್ತೆ ಇಲ್ಲ. ಆದರೆ ಡಿ ಕಂಪನಿ ಕಡೆಯಿಂದ ಚಾಲೆಂಜಿಂಗ್ ಸ್ಟಾರ್ ಕಾಡಿನಲ್ಲಿ ಏನೆಲ್ಲಾ ಮಾಡಿದ್ರು? ಹೇಗಿತ್ತು ಕಾಡಿನಲ್ಲಿದ್ದ ಮೂರು ದಿನಗಳು ಎನ್ನುವುದರ ಸಂಪೂರ್ಣ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಅದರ ಜೊತೆಯಲ್ಲಿ ದರ್ಶನ್ ಸೆರೆ ಹಿಡಿದಿರುವ ಫೋಟೋಗಳು ಇಲ್ಲಿವೆ. ಮುಂದೆ ಓದಿ
|
ದರ್ಶನ್ ಕ್ಯಾಮೆರಾ ಕೈಚಳಕ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚಿಗಷ್ಟೆ ಕಬಿನಿ ಹಿನ್ನಿರಿನ ಅರಣ್ಯಕ್ಕೆ ಸ್ನೇಹಿತರ ಜೊತೆ ಭೇಟಿ ನೀಡಿದ್ದರು. ಆ ವೇಳೆಯಲ್ಲಿ ದರ್ಶನ್ ಸಾಕಷ್ಟು ಪ್ರಾಣಿ-ಪಕ್ಷಿಗಳ ಫೋಟೋಗಳನ್ನು ತೆಗೆದಿದ್ದಾರೆ.
ದರ್ಶನ್ ಕ್ಯಾಮೆರಾದಲ್ಲಿ ಪ್ರಾಣಿಗಳ ಚಿತ್ತಾರ
ನಾಗರಹೊಳೆ ಕಾಡಿನಲ್ಲಿರುವ ನವಿಲು, ಗರುಡ, ಆನೆ, ಜಿಂಕೆ, ಹುಲಿ, ಚಿರತೆ ಹೀಗೆ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ದರ್ಶನ್ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಆ ಫೋಟೋಗಳು ಮತ್ತು ಡಿ ಕಂಪನಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿದೆ.
ಆನೆ ಕಂಡ ಸಂತಸಗೊಂಡ ಡಿ ಬಾಸ್
ಕಾಡಿನಲ್ಲಿ ಆನೆಗಳನ್ನು ಪಳಗಿಸುವ ಮಾವುತರನ್ನ ದರ್ಶನ್ ಭೇಟಿ ಮಾಡಿದ್ದಾರೆ. ಆನೆಯನ್ನು ಕಂಡು ಬೆಲ್ಲ ತಿನ್ನಿಸಿ ಖುಷಿ ಪಟ್ಟಿದ್ದಾರೆ. ಜೊತೆಗೆ ಸಾಕಷ್ಟು ಸಮಯ ಅದರ ಜೊತೆಯಲ್ಲಿ ಕಾಲ ಕಳೆದಿದ್ದಾರೆ.
ಹಳ್ಳಿ ಅಭಿಮಾನಿಗಳನ್ನ ಭೆಟಿ ಮಾಡಿದ ದಾಸ
ದರ್ಶನ್ ನಾಗರಹೊಳೆ ಸುತ್ತಾ ಮುತ್ತಲಿರುವ ಹಳ್ಳಿಯ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಕೇವಲ ತೆರೆ ಮೇಲೆ ದರ್ಶನ್ ರನ್ನು ನೋಡಿ ಖುಷಿ ಆಗಿದ್ದ ಫ್ಯಾನ್ಸ್ ನೆಚ್ಚಿನ ನಟನನ್ನು ಭೇಟಿ ಮಾಡಿ ಫೋಟೋಗಳನ್ನ ತೆಗೆಸಿಕೊಂಡಿದ್ದಾರೆ.