Don't Miss!
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಡಿಯೋ ವೈರಲ್: ಹುಟ್ಟುಹಬ್ಬದ ಸಂಭ್ರಮದಲ್ಲಿ ಬೌನ್ಸರ್ ತಲೆಗೆ ಹೊಡೆದ ದರ್ಶನ್
Recommended Video
43ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ದರ್ಶನ್ ಗೆ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿದೆ. ರಾಜ್ಯದ ಮೂಲೆ ಮೂಲೆಯಿಂದ ಬಂದ ಅಭಿಮಾನಿಗಳು ದರ್ಶನ್ ಭೇಟಿಯಾಗಿ ಶುಭಾಶಯ ಕೋರುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಬಂದ ಅಭಿಮಾನಿಗಳು ದರ್ಶನ್ ನಿವಾಸದ ಮುಂದೆ ಕ್ಯೂ ನಿಂತು ಡಿ ಬಾಸ್ ಗೆ ಶೇಕ್ ಹ್ಯಾಂಡ್ ಮಾಡಿ ವಿಶ್ ಮಾಡಿದ್ದಾರೆ.
ಅಭಿಮಾನಿಗಳು ಸರದಿ ಸಾಲಲ್ಲಿ ನಿಂತು ದಚ್ಚುಗೆ ಶುಭಾಶಯ ಕೋರುತ್ತಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದಾರೆ. ಅಭಿಮಾನಿಗಳು ಒಬ್ಬೊಬ್ಬರಾಗಿ ಬಂದು ದರ್ಶನ್ ಗೆ ಶೇಕ್ ಹ್ಯಾಂಡ್ ನೀಡಿ ವಿಶ್ ಮಾಡಿ ಮುಂದಕ್ಕೆ ಹೋಗುತ್ತಿದ್ದಾರೆ. ಸಾಗರೋಪಾದಿಯಲ್ಲಿ ನೆರೆದಿದ್ದ ಅಭಿಮಾನಿಗಳನ್ನು ದರ್ಶನ್ ಸಾಮಾಧಾನದಿಂದ ಮಾತನಾಡಿಸಿ ಕಳುಹಿಸುತ್ತಿದ್ದಾರೆ. ಈ ಸಮಯದಲ್ಲಿ ಕೋಪಗೊಂಡ ದರ್ಶನ್ ಬೌನ್ಸರ್ ತೆಲೆಗೆ ಬಾರಿಸಿದ್ದಾರೆ.ಮುಂದೆ ಓದಿ...
ದರ್ಶನ್ ಬರ್ತಡೇಗೆ ಶುಭಕೋರಿದ ಅಪ್ಪುಗೆ ಡಿಬಾಸ್ ಅಭಿಮಾನಿ ಹೀಗಾ ಬರೆಯೋದು?
ಬೌನ್ಸರ್ ತಲೆಗೆ ದರ್ಶನ್ ಬಾರಿಸಿದ್ದೇಕೆ?
ಅಭಿಮಾನಿಗಳು ಸರದಿ ಸಾಲಲ್ಲಿ ನಿಂತು ದರ್ಶನ್ ಗೆ ವಿಶ್ ಮಾಡಿ ಹೋಗುವಾಗ, ಪಕ್ಕದಲ್ಲೆ ನಿಂತಿದ್ದ ಬೌನ್ಸರ್ ಅಭಿಮಾನಿಯೊಬ್ಬರನ್ನು ಎಳೆದು ಜೋರಾಗಿ ತಳ್ಳುತ್ತಾರೆ. ಇದನ್ನು ನೋಡಿದ ದರ್ಶನ್ ಕೋಪಗೊಂಡು ಬೌನ್ಸರ್ ತಲೆಗೆ ಬಾರಿಸಿದ್ದಾರೆ.
ಬೌನ್ಸರ್ ಗೆ ಎಚ್ಚರಿಕೆ ನೀಡಿದ ಡಿ ಬಾಸ್
ದರ್ಶನ್ ಹೊಡೆಯುತ್ತಿದಂತೆ ಬೌನ್ಸರ್ ಒಮ್ಮ ಗಾಬರಿಯಾಗಿದ್ದಾರೆ. ಯಾಕೆ ಅಂತ ಯೋಚಿಸುವುದರೊಳಗೆ ದರ್ಶನ್ ಎಚ್ಚರಿಕೆ ನೀಡುತ್ತಾರೆ. "ದೂರದ ಊರಿಂದ ಬರುವ ಅಭಿಮಾನಿಗಳ ಜೊತೆ ಹೀಗೆ ನಡೆದುಕೊಳ್ಳಬಾರದು" ಎಂದು ವಾರ್ನ್ ಹೇಳಿದ್ದಾರೆ.
ವಿಡಿಯೋ ವೈರಲ್
ಅಭಿಮಾನಿಯನ್ನು ತಳ್ಳಿದ ಬೌನ್ಸರ್ ಗೆ ದರ್ಶನ್ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಕಷ್ಟು ಕಮೆಂಟ್ ಗಳು ಹರಿದು ಬರುತ್ತಿವೆ. ಈ ವಿಡಿಯೋ ಅಭಿಮಾನಿ ಬಳಗದಲ್ಲಿ ಸಿಕ್ಕಾಪಟ್ಟೆ ಶೇರ್ ಆಗಿದೆ.
ದವಸ-ಧಾನ್ಯಗಳನ್ನು ತಂದಿರುವ ಅಭಿಮಾನಿಗಳು
ದೂರದ ಊರುಗಳಿಂದ ಬಂದ ಅಭಿಮಾನಿಗಳು ನೆಚ್ಚಿನ ನಟನ ಮನವಿಯಂತೆ ದವಸ-ಧಾನ್ಯಗಳನ್ನು ಹೊತ್ತು ತಂದಿದ್ದಾರೆ. ಈಗಾಗಲೆ ಸಾಕಷ್ಟು ದವಸ-ಧಾನ್ಯಗಳ ಮೂಟೆ ದರ್ಶನ್ ಮನೆ ಸೇರಿದೆ. ಅಭಿಮಾನಿಗಳು ಪ್ರೀತಿಯಿಂದ ಹೊತ್ತುತಂದ ದವಸ-ಧಾನ್ಯಗಳನ್ನು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ತಲುಪಿಸುವ ಕೆಲಸ ದರ್ಶನ್ ಮಾಡುತ್ತಿದ್ದಾರೆ.