Don't Miss!
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- News ವಿರಾಟ್ ಕೊಹ್ಲಿ ಬಳಿ ಬಂದ ಅಭಿಮಾನಿಯನ್ನು ಕಾಲಲ್ಲಿ ತುಳಿದ ಸೆಕ್ಯೂರಿಟಿ ಸಿಬ್ಬಂದಿ-ರೂಪೇಶ್ ರಾಜಣ್ಣ ಹೇಳಿದ್ದೇನು?
- Automobiles ಜನಪ್ರಿಯ ಕಂಪನಿಗಳಿಂದ ಮುಂಬರುವ ಪುಟ್ಟ ಕಾರುಗಳಿವು.. ಇವೇ ಮಿಡಲ್ ಕ್ಲಾಸ್ ಜನರ ಫೇವರಿಟ್ ಆಗುವುದು ಪಕ್ಕಾ!
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅಮರ್' ಚಿತ್ರದಲ್ಲಿ ದರ್ಶನ್ ಮಾಡಬೇಕು ಎನ್ನುವುದು 'ಅವರ' ಆಸೆಯಂತೆ
Recommended Video
ಅಭಿಷೇಕ್ ಅಂಬರೀಶ್ ಅಭಿನಯದ ಅಮರ್ ಸಿನಿಮಾ ಮೇ 31 ರಂದು ಬಿಡುಗಡೆಯಾಗುತ್ತಿದೆ. ಅಭಿಷೇಕ್ ಚೊಚ್ಚಲ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ನೀಡಿರುವುದು ಚಿತ್ರದ ಮೆರಗು ಹೆಚ್ಚಿಸಿದೆ.
ಸಿನಿಮಾ ಆರಂಭವಾದಾಗ ದರ್ಶನ್ ಅಭಿನಯಿಸುವುದರ ಬಗ್ಗೆ ಯಾವ ಸುಳಿವು ಅಥವಾ ಸ್ಪಷ್ಟನೆ ನೀಡಿರಲಿಲ್ಲ. ಆದ್ರೆ, ಸಿನಿಮಾ ಅಂತಿಮ ಹಂತಕ್ಕೆ ಬರುತ್ತಿದ್ದಂತೆ ಒಂದರ ಹಿಂದೆ ಇನ್ನೊಂದರಂತೆ ಸರ್ಪ್ರೈಸ್ ನೀಡಲು ಶುರು ಮಾಡಿದ್ರು.
ದರ್ಶನ್ ಹೇಳಿದ ಆ ಮಾತು ನನಗೆ ದೊಡ್ಡ ಸಹಾಯ ಮಾಡಿತು: ಅಭಿಷೇಕ್
ಅಂದ್ಹಾಗೆ, ಅಮರ್ ಸಿನಿಮಾದಲ್ಲಿ ದರ್ಶನ್ ಅಭಿನಯಿಸಬೇಕು ಎನ್ನುವುದು ಸುಮಲತಾ ಅವರ ಆಸೆಯಂತೆ. ಅಂಬರೀಶ್ ಇದ್ದಾಗ ಒಂದು ವಿಶೇಷ ಪಾತ್ರದಲ್ಲಿ ಅವರಿಂದ ನಟನೆ ಮಾಡಿಸಬೇಕು ಎಂಬ ಆಸೆ ಇತ್ತು. ಆದ್ರೆ, ಅದು ಸಾಧ್ಯವಾಗಲಿಲ್ಲ. ಅನಿರೀಕ್ಷಿತವಾಗಿ ಅಂಬಿ ನಿಧನರಾದರು. ಆ ನಂತರ ದರ್ಶನ್ ಅವರನ್ನ ಬಿಟ್ಟರೇ ಬೇರೆ ಯಾರನ್ನ ಊಹಿಸಿಲ್ಲ.
'ಈ ಸಿನಿಮಾದಲ್ಲಿ ಒಂದು ಪಾತ್ರ ಮಾಡು ಅಂತ ಕೇಳಿದಾಗ, ನಾನು ಯಾವಾಗ ಬರಬೇಕು ಅಂತ ಹೇಳಿ, ನಾನು ಬಂದು ಮಾಡ್ತೀನಿ, ನೀವು ಆರ್ಡರ್ ಕೊಡಿ'' ಎಂದು ಆಗಲೂ ಹೇಳಿದ್ರು.
'ಕುರುಕ್ಷೇತ್ರ' ಸುದ್ದಿಗೋಷ್ಠಿಗೆ ದರ್ಶನ್-ನಿಖಿಲ್ ಬರಲಿಲ್ಲ: ಮುನಿರತ್ನ ಕೊಟ್ಟ ಕಾರಣವೇನು?
''ಸಿನಿಮಾ ವಿಚಾರಕ್ಕೂ ಅಷ್ಟೇ ರಾಜಕೀಯ ವಿಚಾರಕ್ಕೂ ಅಷ್ಟೇ ದರ್ಶನ್ ಸಂಪೂರ್ಣ ಬೆಂಬಲ ನೀಡಿ ಜೊತೆಯಾಗಿ ನಿಂತಿದ್ದಾರೆ. ದರ್ಶನ್ ನನಗೆ ಮಗ. ದರ್ಶನ್ ಸಪೋರ್ಟ್ ಬೇಕೆ ಬೇಕು'' ಎಂದು ಸುಮಲತಾ ಅಂಬರೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.