Don't Miss!
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- News ಚೊಂಬನ್ನು ಅರಗಿಸಿಕೊಳ್ಳಲಾಗದೇ ಬಿಜೆಪಿ ಪಿಕ್ಪಾಕೆಟ್ ಜಾಹೀರಾತು- ಡಿಕೆಶಿ ವಾಗ್ದಾಳಿ
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಶ್ ನಂತರ ಗಡ್ಡಧಾರಿ ಆದ ದರ್ಶನ್: ಇದರ ಹಿಂದಿದ್ದಾರೆ ಆ ಡೈರೆಕ್ಟರ್.!
Recommended Video
ತುಂಬಾ ಜನ ನಟರು ಗಡ್ಡ ಬಿಟ್ಟು ಸಿನಿಮಾ ಮಾಡಿದ್ದಾರೆ. ಆದ್ರೆ, ಕೆಜಿಎಫ್ ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಬಿಟ್ಟಿದ್ದ ಗಡ್ಡ ದೊಡ್ಡ ಸದ್ದು ಮಾಡಿತ್ತು. ಇದಾದ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಇದು ಟ್ರೆಂಡ್ ಆಗಿದೆ. ಯಶ್ ಅಭಿಮಾನಿಗಳು ಗಡ್ಡ ಬಿಟ್ಟು ಕೆಜಿಎಫ್ ಟ್ರೆಂಡ್ ಮುಂದುವರಿಸುತ್ತಿದ್ದಾರೆ.
ಈ ನಡುವೆ ಗೋಲ್ಡನ್ ಸ್ಟಾರ್ ಗಣೇಶ್ 99 ಸಿನಿಮಾ ಮಾಡಿದರು. ಈ ಚಿತ್ರದಲ್ಲಿ ಗಣೇಶ್ ಗಡ್ಡಧಾರಿ ಪಾತ್ರದಲ್ಲಿ ಕಾಣಿಸಿಕೊಂಡರು. ಆದ್ರೆ, ಗೋಲ್ಡನ್ ಸ್ಟಾರ್ ನಿಜವಾದ ಗಡ್ಡ ಬಿಟ್ಟಿಲ್ಲ ಎಂಬುದು ಕೆಲವು ಅಭಿಮಾನಿಗಳಿ ನಿರಾಸೆ ಉಂಟು ಮಾಡಿತ್ತು.
ದರ್ಶನ್-ಸುದೀಪ್ ಮುಖಾಮುಖಿ: ಬಾಕ್ಸ್ ಆಫೀಸ್ ನಲ್ಲಿ ಮೆಗಾ ವಾರ್.!
ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಗಡ್ಡ ವಿಷ್ಯದಲ್ಲಿ ಸುದ್ದಿಯಾಗುತ್ತಿದ್ದಾರೆ. ಕುರುಕ್ಷೇತ್ರ, ಯಜಮಾನ ಚಿತ್ರಗಳ ನಂತರ ದರ್ಶನ್ ಅವರ ಲುಕ್ ಸ್ವಲ್ಪ ಬದಲಾಗುತ್ತಿದೆ. ಇಷ್ಟು ದಿನ ಇಲ್ಲದ ಈ ಗಡ್ಡ ಈಗ್ಯಾಕೆ ಎಂಬ ಕುತೂಹಲ ಕಾಡುತ್ತಿದೆ. ಅದಕ್ಕೆ ಕಾರಣ ಆ ಡೈರೆಕ್ಟರ್ ಮತ್ತು ಆ ಸಿನಿಮಾ. ಮುಂದೆ ಓದಿ.....
ರಾಬರ್ಟ್ ಗಾಗಿ ದರ್ಶನ್ ಗಡ್ಡ.!
ಯಜಮಾನ ಮುಗಿದ ನಂತರ ದರ್ಶನ್ ಗಡ್ಡ ಬಿಟ್ಟಿದ್ದಾರೆ. ಇಷ್ಟು ದಿನ ಅದು ಒಡೆಯ ಸಿನಿಮಾಗೆ ಇರಬಹುದು ಎಂದುಕೊಂಡಿದ್ದರು. ಅದರ ಜೊತೆಗೆ ರಾಬರ್ಟ್ ಚಿತ್ರಕ್ಕೂ ತಯಾರಿ ನಡೆದಿದೆ ಎಂಬುದು ಈಗ ಬಹಿರಂಗವಾಗಿದೆ. ಹೌದು, ದರ್ಶನ್ ಗಡ್ಡ ಬಿಡುತ್ತಿರುವುದು ರಾಬರ್ಟ್ ಚಿತ್ರಕ್ಕಾಗಿ.
ಡಿ-ಬಾಸ್ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ.!
ಫೋಟೋಶೂಟ್ ಆಗಬೇಕಿದೆ
ಅಕ್ಷಯ ತೃತೀಯ ದಿನದಂದು ರಾಬರ್ಟ್ ಚಿತ್ರದ ಮುಹೂರ್ತ ನಡೆಯಲಿದೆ. ಅದಾದ ಬಳಿಕ ಭರ್ಜರಿ ಫೋಟೋಶೂಟ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಫೋಟೋಶೂಟ್ ಮುಗಿಯುತ್ತಿದ್ದಂತೆ ಸಿನಿಮಾ ಶೂಟಿಂಗ್ ಗೂ ಆರಂಭಿಸಿ ಆದಷ್ಟೂ ಬೇಗ ಮುಗಿಸಲು ಪ್ಲಾನ್ ಮಾಡಲಾಗಿದೆ.
ದರ್ಶನ್ ಈ ಲುಕ್ ಗೆ ಕಾರಣ ಡೈರೆಕ್ಟರ್
ರಾಬರ್ಟ್ ಚಿತ್ರದ ಕಥೆ ಏನು ಎಂಬುದರ ಬಗ್ಗೆ ಸುಳಿವು ಕೂಡ ಸಿಕ್ಕಿಲ್ಲ. ಆದ್ರೆ, ದರ್ಶನ್ ಅವರ ಗೆಟಪ್ ನಲ್ಲಿ ಹೊಸತನ ನೋಡಬಹುದು ಎಂಬುದಕ್ಕೆ ಅವರ ಹೊಸ ಸ್ಟೈಲ್ ಕಾರಣವಾಗಿದೆ. ಡಿ ಬಾಸ್ ಗೆ ಇಂತಹದೊಂದು ಚಿತ್ರಕತೆ ರೆಡಿ ಮಾಡಿ, ವಿಭಿನ್ನ ಲುಕ್ ನಲ್ಲಿ ತೋರಿಸಬೇಕೆಂಬ ನಿರ್ಧಾರ ನಿರ್ದೇಶಕ ತರುಣ್ ಸುಧೀರ್ ಅವರದ್ದು.
ದರ್ಶನ್ ಅಭಿನಯದ 'ರಾಬರ್ಟ್' ಚಿತ್ರಕ್ಕೆ ಮುಹೂರ್ತ ಫಿಕ್ಸ್
ನಾಯಕಿ ಇಲ್ಲದೇ ಚಿತ್ರೀಕರಣಕ್ಕೆ ಹೊರಟ ರಾಬರ್ಟ್
ಸದ್ಯ ರಾಬರ್ಟ್ ಚಿತ್ರದ ಎಲ್ಲ ಪೂರ್ವ ತಯಾರಿ ಆಗಿದೆ. ಮುಹೂರ್ತ ಮುಗಿದ ಬಳಿಕ ನೇರವಾಗಿ ಚಿತ್ರೀರಣಕ್ಕೆ ಹೋಗುತ್ತಿದ್ದಾರೆ. ಆದ್ರೆ, ರಾಬರ್ಟ್ ಗೆ ನಾಯಕಿ ಯಾರು ಎಂಬುದು ಸದ್ಯದವರೆಗೂ ಆಯ್ಕೆಯಾಗಿಲ್ಲ. ಒಟ್ನಲ್ಲಿ, ಭಾರಿ ನಿರೀಕ್ಷೆಗಳೊಂದಿಗೆ ರಾಬರ್ಟ್ ಆರಂಭವಾಗುತ್ತಿದ್ದು, 2020ಕ್ಕೆ ಈ ಸಿನಿಮಾ ಬರೋದು ಪಕ್ಕಾ.