twitter
    For Quick Alerts
    ALLOW NOTIFICATIONS  
    For Daily Alerts

    'ಡಿ' ಪರಿವಾರದಿಂದ ದರ್ಶನ್ ಆಪ್ತನಿಗೆ ಕೊಕ್: ಕಾರಣ ಬಿಚ್ಚಿಟ್ಟ ಸೀನಣ್ಣ

    |

    Recommended Video

    Darshan The Challenging Star Changing Manager Srinivas | FILMIBEAT KANNADA

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಳಿ ಕೆಲಸ ಮಾಡುತ್ತಿದ್ದ ಮ್ಯಾನೇಜರ್ ಮಲ್ಲಿಕಾರ್ಜುನ ಅವರು, ಕಳೆದ ಕೆಲವು ತಿಂಗಳ ಹಿಂದೆ ಸಂಪರ್ಕಕ್ಕೆ ಸಿಗದೆ ದೂರವಾಗಿದ್ದರು. ದರ್ಶನ್ ಅವರ ಹೆಸರು ಬಳಸಿಕೊಂಡು ಇಂಡಸ್ಟ್ರಿಯಲ್ಲಿ ಕೆಲವರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪವೂ ಇವರ ಮೇಲೆ ಬಂದಿತ್ತು.

    ಮಲ್ಲಿಕಾರ್ಜುನ್ ಅವರು ಕಾಣೆಯಾದ ಬಳಿಕ ಆಪ್ತ ಶ್ರೀನಿವಾಸ್ ಅವರ ಆ ಜಾಗಕ್ಕೆ ಬಂದರು. ಡಿ ಬಾಸ್ ಗೆ ಆಪ್ತರಾಗಿದ್ದ ಸೀನ ಅವರನ್ನ ಈಗ ದರ್ಶನ್ ತೂಗುದೀಪ ಅವರಿಗೆ ಸಂಬಂಧಪಟ್ಟ ಎಲ್ಲ ವ್ಯಾವಹಾರಿಕ ಚಟುವಟಿಕೆಗಳಿಂದ ದೂರ ಸರಿಸಲಾಗಿದೆ ಎಂಬ ವಿಷಯ ಬಹಿರಂಗವಾಗಿತ್ತು.

    ದರ್ಶನ್ ಅಭಿಮಾನಿಗಳಿಗೆ ಕ್ಷಮೆ ಕೇಳಿದ 'ಒಡೆಯ' ನಿರ್ಮಾಪಕ ಸಂದೇಶ್ದರ್ಶನ್ ಅಭಿಮಾನಿಗಳಿಗೆ ಕ್ಷಮೆ ಕೇಳಿದ 'ಒಡೆಯ' ನಿರ್ಮಾಪಕ ಸಂದೇಶ್

    ಆದರೆ, ಇದಕ್ಕೆ ನಿಖರವಾದ ಕಾರಣ ಗೊತ್ತಿರಲಿಲ್ಲ. ದರ್ಶನ್ ಅವರ ಅಧಿಕೃತ ಅಭಿಮಾನಿ ಸಂಘ ಡಿ ಕಂಪನಿ ತಮ್ಮ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಈ ಬಗ್ಗೆ ಪ್ರಕಟಣೆ ನೀಡಿತ್ತು. ಮುಂದೆ ಓದಿ...

    ಡಿ ಕಂಪನಿ ಕೊಟ್ಟಿದ್ದ ಪ್ರಕಟಣೆ

    ಡಿ ಕಂಪನಿ ಕೊಟ್ಟಿದ್ದ ಪ್ರಕಟಣೆ

    ''ನಮ್ಮ ಡಿ ಬಾಸ್ ಬಳಿ ಕೆಲಸ ನಿರ್ವಹಿಸುತ್ತಿದ್ದ ಶ್ರೀನಿವಾಸ್ (ಸೀನ) ರವರನ್ನು ತೂಗುದೀಪ ಪರಿವಾರ ಹಾಗೂ ಅಭಿಮಾನಿ ಸಂಘದ ವ್ಯಾವಹಾರಿಕ ಚಟುವಟಿಕೆಗಳಿಂದ ದೂರ ಸರಿಸಲಾಗಿದೆ. ಅವರ ಜೊತೆ ಡಿ ಬಾಸ್ ರವರ ಹೆಸರಲ್ಲಿ ಯಾವುದೇ ವ್ಯವಹಾರ ಮಾಡದಿರಿ. ಇಂತಿ ನಿಮ್ಮ ಡಿ ಕಂಪನಿ'' ಎಂದು ಪೋಸ್ಟ್ ಹಾಕಿದ್ದರು.

    'ಜೋಡೆತ್ತು'ಗಳು ಎಲ್ಲಿವೆ? ದರ್ಶನ್-ಯಶ್ ವಿರುದ್ಧ ಗುಡುಗಿದ ಮಾಜಿ ಸಂಸದ'ಜೋಡೆತ್ತು'ಗಳು ಎಲ್ಲಿವೆ? ದರ್ಶನ್-ಯಶ್ ವಿರುದ್ಧ ಗುಡುಗಿದ ಮಾಜಿ ಸಂಸದ

    ಅನುಮಾನದ ಹುತ್ತ ಬೆಳೆದಿತ್ತು

    ಅನುಮಾನದ ಹುತ್ತ ಬೆಳೆದಿತ್ತು

    ದಿಢೀರ್ ಅಂತ ಶ್ರೀನಿವಾಸ್ ಅವರ ಕುರಿತು ಇಂತಹದೊಂದು ಸುದ್ದಿ ಹೊರಬಿದ್ದ ಬೆನ್ನಲ್ಲೆ, ಅರೇ ದರ್ಶನ್ ಅವರಿಗೆ ಇವರು ಏನು ಮಾಡಿದ್ರಪ್ಪಾ ಎಂಬ ಚರ್ಚೆ ಆರಂಭವಾಯಿತು. ಆದ್ರೆ, ಸ್ಪಷ್ಟ ಕಾರಣ ಗೊತ್ತಿರಲಿಲ್ಲ. ಇದೀಗ, ಸ್ವತಃ ಶ್ರೀನಿವಾಸ್ ಅವರೇ ಈ ಬಗ್ಗೆ ಫೇಸ್ ಬುಕ್ ನಲ್ಲಿ ಮಾತನಾಡಿದ್ದಾರೆ.

    ಶ್ರೀನಿವಾಸ್ ಏನು ಹೇಳಿದ್ದಾರೆ?

    ಶ್ರೀನಿವಾಸ್ ಏನು ಹೇಳಿದ್ದಾರೆ?

    ''ದರ್ಶನ್ ತೂಗುದೀಪ ಅಭಿಮಾನಿಗಳು ಮತ್ತು ಎಲ್ಲಾ ಮೀಡಿಯಾ ಸಂಸ್ಥೆಗಳಿಗೂ ನನ್ನ ನಮಸ್ಕಾರಗಳು. ನನಗೂ ಮತ್ತು ದರ್ಶನ್ ತೂಗುದೀಪರವರಿಗೂ ಕೆಲಸದ ವಿಷಯವಾಗಿ ಮನಸ್ತಾಪ ಬಂದಿರುವುದು ನಿಜ. ಆದ ಕಾರಣ ನಾನು ದಿನಾಂಕ 18-09-2019 ರಿಂದ ಅವರ ಬಳಿ ಕೆಲಸ ಬಿಟ್ಟಿರುತ್ತೇನೆ. ನನ್ನ ಮೇಲೆ ಯಾರೂ ಸಹ ಇಲ್ಲಸಲ್ಲದ ಆರೋಪ ಹೊರಿಸಬೇಡಿ. ನನಗೂ ಕುಟುಂಬ ಇದೆ. ನಾನು ಬೆಂಗಳೂರು ಬಿಟ್ಟು ಎಲ್ಲಿಗೂ ಹೋಗಿಲ್ಲ. ಇಲ್ಲಿಯೇ ಕೆಲಸ ಮಾಡಿಕೊಂಡು ಇದ್ದೇನೆ'' ಎಂದು ಅಂತೆ ಕಂತೆಗಳಿಗೆ ತೆರೆ ಎಳೆದಿದ್ದಾರೆ.

    ದರ್ಶನ್ ತೂಗುದೀಪ ನಿವಾಸದ ಮುಂದೆ ಆಯುಧ ಪೂಜೆಯ ಸಂಭ್ರಮದರ್ಶನ್ ತೂಗುದೀಪ ನಿವಾಸದ ಮುಂದೆ ಆಯುಧ ಪೂಜೆಯ ಸಂಭ್ರಮ

    ಹಲವು ವರ್ಷಗಳಿಂದ ಜೊತೆಯಲ್ಲಿದ್ದ ಸೀನ

    ಹಲವು ವರ್ಷಗಳಿಂದ ಜೊತೆಯಲ್ಲಿದ್ದ ಸೀನ

    ಅಂದ್ಹಾಗೆ, ಸೀನ ಅವರು ಡಿ ಬಾಸ್ ಜೊತೆ ಹಲವು ವರ್ಷಗಳಿಂದ ಜೊತೆಯಲ್ಲಿದ್ದರು. ಸೀನ ಅವರು ಮ್ಯಾನೇಜರ್ ಆಗಿರಲಿಲ್ಲ. ದರ್ಶನ್ ಅವರ ಸಹಾಯಕರಾಗಿದ್ದರು. ದರ್ಶನ್ ಅವರ ಕುಟುಂಬದ ಸದಸ್ಯನಂತೆ ಇದ್ದರು. ಡಿ ಬಾಸ್ ಹೋಗುತ್ತಿದ್ದ ಕಡೆಯಲ್ಲೆಲ್ಲ ಜೊತೆಯಲ್ಲೆ ಇರ್ತಿದ್ದರು. ಆದ್ರೀಗ, ಅಂತರ ಪಡೆದುಕೊಂಡಿದ್ದಾರೆ.

    Read more about: darshan ದರ್ಶನ್
    English summary
    Challenging star Darshan close person srinivas has clarifies about rumors.
    Thursday, October 17, 2019, 15:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X