twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರೀಕರಣದಿಂದ ದೂರ ಇರುವ ದರ್ಶನ್‌ ಗೆ ಪದೇ-ಪದೇ ನೆನಪಾಗ್ತಿದೆ ಇಡ್ಲಿ-ವಡೆ!

    |

    ನಟ-ನಟಿಯರಿಗೆ ಕ್ಯಾಮೆರಾ ದೇವರಿಗೆ ಸಮಾನ. ಎಷ್ಟೋ ಮಂದಿ ನಟ-ನಟಿಯರು ಸೆಟ್‌ಗೆ ಬಂದ ಕೂಡಲೇ ಕ್ಯಾಮೆರಾ ಗೆ ಕೈಮುಗಿದ ನಂತರವೇ ಶಾಟ್‌ಗೆ ತಯಾರಾಗುತ್ತಾರೆ. ಅದರಲ್ಲಿ ದರ್ಶನ್ ಸಹ ಒಬ್ಬರು.

    ಚಿತ್ರೀಕರಣದ ಸೆಟ್ ಅನ್ನು, ಕ್ಯಾಮೆರಾವನ್ನು ಅಷ್ಟಾಗಿ ಆರಾಧಿಸುವ, ಪ್ರೀತಿಸುವ ದರ್ಶನ್, ಚಿತ್ರೀಕರಣದ ಸೆಟ್‌ಗೆ ಬಂದು ಸರಿ ಸುಮಾರು ಎಂಟು ತಿಂಗಳಾಗುತ್ತಾ ಬಂತು.

    ಡಿ ಬಾಸ್ ಹಬ್ಬಕ್ಕೆ 100 ದಿನಗಳ ಮುಂಚೆಯೇ ಅಭಿಮಾನಿಗಳ ಸಿದ್ಧತೆ: ಟ್ವಿಟ್ಟರ್ ನಲ್ಲಿ ಟ್ರೆಂಡ್ ಡಿ ಬಾಸ್ ಹಬ್ಬಕ್ಕೆ 100 ದಿನಗಳ ಮುಂಚೆಯೇ ಅಭಿಮಾನಿಗಳ ಸಿದ್ಧತೆ: ಟ್ವಿಟ್ಟರ್ ನಲ್ಲಿ ಟ್ರೆಂಡ್

    ಕೊರೊನಾ ಲಾಕ್‌ಡೌನ್ ಕಾರಣದಿಂದ ಎಲ್ಲಾ ಚಿತ್ರೀಕರಣಗಳು ಬಂದ್ ಆದ ಕಾರಣ, ಚಿತ್ರೀಕರಣ ಸೆಟ್‌ನಿಂದಲೇ ದೂರವೇ ಇದ್ದಾರೆ ದರ್ಶನ್. ಅವರ ವೀರಮದಕರಿ ನಾಯಕ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳ ಚಿತ್ರೀಕರಣಗಳು ಸ್ಥಗಿತಗೊಂಡಿದ್ದು, ಇನ್ನಷ್ಟೆ ಆರಂಭಗೊಳ್ಳಬೇಕಿದೆ.

    ಗೆಳೆಯನ ಸಿನಿಮಾಕ್ಕೆ ಶುಭಕೋರಲು ಆಗಮಿಸಿದ್ದ ದರ್ಶನ್

    ಗೆಳೆಯನ ಸಿನಿಮಾಕ್ಕೆ ಶುಭಕೋರಲು ಆಗಮಿಸಿದ್ದ ದರ್ಶನ್

    ತಮ್ಮ ಆಪ್ತ ಧ್ರವನ್ ಅವರ ಮೊದಲ ಸಿನಿಮಾ 'ಭಗವಾನ್ ಶ್ರೀಕೃಷ್ಣ ಪರಮಾತ್ಮ' ಸಿನಿಮಾದ ಮುಹೂರ್ತ ಸಮಾರಂಭಕ್ಕೆ ದರ್ಶನ್ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ದರ್ಶನ್, ಚಿತ್ರೀಕರಣ ಸ್ಥಗಿತಗೊಂಡಿರುವುದರಿಂದ ಚಿತ್ರೀಕರಣ ಸೆಟ್‌ ನಲ್ಲಿ ಯಾವುದನ್ನು ಹೆಚ್ಚು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

    ನವೆಂಬರ್ ನಿಂದ ಚಿತ್ರೀಕರಣದಲ್ಲಿ ದರ್ಶನ್: ಯಾವ ಸಿನಿಮಾ ಮೊದಲು ಪ್ರಾರಂಭಿಸಲಿದ್ದಾರೆ?ನವೆಂಬರ್ ನಿಂದ ಚಿತ್ರೀಕರಣದಲ್ಲಿ ದರ್ಶನ್: ಯಾವ ಸಿನಿಮಾ ಮೊದಲು ಪ್ರಾರಂಭಿಸಲಿದ್ದಾರೆ?

    ಇಡ್ಲಿ-ವಡೆ-ಸಾಂಬಾರ್ ಅನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ದರ್ಶನ್

    ಇಡ್ಲಿ-ವಡೆ-ಸಾಂಬಾರ್ ಅನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ದರ್ಶನ್

    ಚಿತ್ರೀಕರಣ ಸೆಟ್‌ನಲ್ಲಿ ನೀಡಲಾಗುವ 'ಇಡ್ಲಿ-ವಡೆ'ಯನ್ನು ನಟ ದರ್ಶನ್ ಬಹಳವಾಗಿ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಸೆಟ್‌ನಲ್ಲಿ ನೀಡಲಾಗುವ ಇಡ್ಲಿ-ವಡೆ ಸಾಂಬಾರ್ ದರ್ಶನ್‌ಗೆ ಬಹಳ ಇಷ್ಟವಂತೆ. ಬಹು ತಿಂಗಳ ಬಳಿಕ ಚಿತ್ರೀಕರಣಗಳು ನಿಧಾನಕ್ಕೆ ಆರಂಭವಾಗುತ್ತಿದೆ. ಇದು ಬಹಳ ಸಂತೋಶ ನೀಡಿದೆ ಎಂದಿದ್ದಾರೆ ದರ್ಶನ್.

    ಎಲ್ಲವೂ ಸರಿಹೋದ ನಂತರ ರಾಬರ್ಟ್ ಬಿಡುಗಡೆ: ದರ್ಶನ್

    ಎಲ್ಲವೂ ಸರಿಹೋದ ನಂತರ ರಾಬರ್ಟ್ ಬಿಡುಗಡೆ: ದರ್ಶನ್

    ಇದೇ ಸಮಯದಲ್ಲಿ 'ರಾಬರ್ಟ್' ಸಿನಿಮಾ ಬಿಡುಗಡೆ ಬಗ್ಗೆಯೂ ಮಾತನಾಡಿರುವ ದರ್ಶನ್, 'ರಾಬರ್ಟ್ ಸಿನಿಮಾ ಪೂರ್ಣವಾಗಿ ತಯಾರಾಗಿದೆ, ಪರಿಸ್ಥಿತಿ ಸರಿಹೋದ ಬಳಿಕ ಸಿನಿಮಾ ಬಿಡುಗಡೆ ಆಗಲಿದೆ ಎಂದಿದ್ದಾರೆ ದರ್ಶನ್.

    'ರಾಬರ್ಟ್' ಬಿಡುಗಡೆ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಿರ್ಧಾರವೇನು?'ರಾಬರ್ಟ್' ಬಿಡುಗಡೆ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಿರ್ಧಾರವೇನು?

    Recommended Video

    ರಾಬರ್ಟ್ ರಿಲೀಸ್ ಬಗ್ಗೆ ಬಾಯ್ಬಿಟ್ಟ ಡಿ ಬಾಸ್ | Roberrt Release Updates | Filmibeat Kannada
    ವೀರಮದಕರಿ ನಾಯಕ ಚಿತ್ರೀಕರಣ ಪ್ರಾರಂಭವಾಗಬೇಕಿದೆ

    ವೀರಮದಕರಿ ನಾಯಕ ಚಿತ್ರೀಕರಣ ಪ್ರಾರಂಭವಾಗಬೇಕಿದೆ

    ರಾಬರ್ಟ್ ಸಿನಿಮಾಕ್ಕಾಗಿ ನಟ ಜಗಪತಿ ಬಾಬು ಕೆಲವು ದಿನಗಳ ಹಿಂದಷ್ಟೆ ಡಬ್ಬಿಂಗ್ ಮುಗಿಸಿದ್ದಾರೆ. ಇನ್ನು ದರ್ಶನ್ ಅಭಿನಯಿಸುತ್ತಿರುವ ವೀರಮದಕರಿ ನಾಯಕ ಸಿನಿಮಾದ ಚಿತ್ರೀಕರಣ ಎರಡು ಷೆಡ್ಯೂಲ್ ಮುಗಿದಿದ್ದು, ಲಾಕ್‌ಡೌನ್ ಕಾರಣ ಸ್ಥಗಿತಗೊಂಡಿದ್ದ ಚಿತ್ರೀಕರಣ ಇನ್ನೂ ಪ್ರಾರಂಭವಾಗಿಲ್ಲ.

    English summary
    Darshan not yet started shooting of his movies. He said i am missing shooting set, and Idli Vada which given in set.
    Friday, November 6, 2020, 15:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X