Don't Miss!
- News ಅಧಿಕಾರಕ್ಕೆ ಬಂದ 2-3 ತಿಂಗಳಲ್ಲಿ ಕಾಡುಗೊಲ್ಲರಿಗೆ ನ್ಯಾಯ ದೊರಕಿಸಿ ಕೊಡುತ್ತೇವೆ-ಕುಮಾರಸ್ವಾಮಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ದರ್ಶನ್ ಹೊಸ ಸಿನಿಮಾ: ಮದಕರಿ ನಾಯಕನ ಕತೆ ಏನಾಯಿತು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ರಾಬರ್ಟ್ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷೆಯ ರಾಬರ್ಟ್ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದ್ದು, ಇದೇ ಮಾರ್ಚ್ 11ರಂದು ರಾಬರ್ಟ್ ಕನ್ನಡ ಮತ್ತು ತೆಲುಗಿನಲ್ಲಿ ತೆರೆಗೆ ಬರುತ್ತಿದೆ.
ರಾಬರ್ಟ್ ಸಿನಿಮಾ ಬಳಿಕ ದರ್ಶನ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ರಾಬರ್ಟ್ ಚಿತ್ರೀಕರಣ ಮುಗಿಯುತ್ತಿದ್ದಂತೆ ಡಿ ಬಾಸ್ ರಾಜವೀರ ಮದಕರಿ ನಾಯಕ ಚಿತ್ರೀಕರಣ ಪ್ರಾರಂಭ ಮಾಡಿದ್ದರು. ಒಂದೆರಡು ದಿನಗಳು ಚಿತ್ರೀಕರಣ ಮಾಡುತ್ತಿದ್ದಂತೆ ಕೊರೊನಾ ಲಾಕ್ ಡೌನ್ ನಿಂದ ಚಿತ್ರೀಕರಣ ಸ್ಥಗಿತ ಮಾಡಬೇಕಾಯಿತು.
ಜೆಎಸ್ಎಸ್ ಕಾಲೇಜಿಗೆ ಡಿ ಬಾಸ್ ಎಂಟ್ರಿ: ವಿದ್ಯಾರ್ಥಿಗಳ ಜೊತೆ ಸಂಭ್ರಮ
ಕೊರೊನಾ ಲಾಕ್ ಡೌನ್ ಸಡಿಲಿಕೆ ಆಗಿ ಸಹಜ ಸ್ಥಿತಿಗೆ ಬಂದರೂ ಸಹ ರಾಜವೀರ ಮದಕರಿ ನಾಯಕ ಟೇಕಾಫ್ ಆಗಿಲ್ಲ. ಬಳಿಕ ಈ ಸಿನಿಮಾ ನಿಂತು ಹೋಯಿತು ಎನ್ನುವ ಮಾತುಗಳು ಸಹ ಗಾಂಧಿನಗರದಲ್ಲಿ ಕೇಳಿಬರಲು ಪ್ರಾರಂಭವಾಯಿತು. ಅಷ್ಟರಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮತ್ತು ತಂಡ ಚಿತ್ರೀಕರಣಕ್ಕೆ ಲೊಕೇಷನ್ ಹುಡುವುದಾಗಿ ಹೊರಡುವ ಮೂಲಕ ಸಿನಿಮಾ ನಿಂತಿಲ್ಲ ಎನ್ನುವುದನ್ನು ಸಾಬೀತು ಮಾಡಿದರು.
ಸದ್ಯ ರಾಜವೀರ ಮದಕರಿ ನಾಯಕ ಸಿನಿಮಾ ಮುಂದಕ್ಕೆ ಹೋಗಿದೆ. ಈ ಬಗ್ಗೆ ಸ್ವತಹ ದರ್ಶನ್ ಅವರೇ ಹೇಳಿದ್ದಾರೆ. ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶದಲ್ಲಿ ಮಾತನಾಡಿದ ದರ್ಶನ್, ರಾಜವೀರ ಮದಕರಿ ನಾಯಕ ಮುಂದಕ್ಕೆ ಹೋಗಿದೆ ಹೋಗಿದೆ. ನನ್ನ ಅಭಿಮಾನಿಗಳು ಆಟೋ ಮತ್ತು ಕ್ಯಾಬ್ ಡ್ರೈವರ್ ಗಳು ಜಾಸ್ತಿ. ಆದರೀಗ ಕೊರೊನಾ ವೈರಸ್ ನಿಂದ ತುಂಬಾ ಸಂಕಷ್ಟದಲ್ಲಿದ್ದಾರೆ. ಅವರ ಜೀವನ ಸಹಜ ಸ್ಥಿತಿಗೆ ಬರಬೇಕು. ಹಾಗಾಗಿ ರಾಕ್ ಲೈನ್ ವೆಂಕಟೇಶ್ ಅವರಲ್ಲಿ ಈ ಸಿನಿಮಾ ತಡವಾಗಿ ಶುರುಮಾಡುವುದಾಗಿ ಕೇಳಿಕೊಂಡಿದ್ದೀನಿ' ಎಂದು ಹೇಳಿದ್ದಾರೆ.
ಜೊತೆಗೆ ಇದೆ ವರ್ಷ ಮತ್ತೊಂದು ಸಿನಿಮಾ ರಿಲೀಸ್ ಆಗುತ್ತೆ, ದಸರಾ ಅಥವಾ ದೀಪಾಳಿಗೆ ರಿಲೀಸ್ ಆಗುತ್ತಿದೆ ಎಂದಿದ್ದಾರೆ. ಅಂದ್ಮೇಲೆ ದರ್ಶನ್ ಮುಂದಿನ ಸಿನಿಮಾ ಯಾವುದು, ಯಾರು ನಿರ್ಮಾಣ ಮಾಡಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
Recommended Video
ಮೂಲಗಳ ಪ್ರಕಾರ ದರ್ಶನ್ ಮುಂದಿನ ಸಿನಿಮಾಗೆ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹೂಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ದರ್ಶನ್ ಬಳಿ ಸದ್ಯ ಮಿಲನಾ ನಾಗರಾಜ್, ಶೈಲಜಾ ನಾಗ್, ತೆಲುಗು ನಿರ್ಮಾಪಕರ ಸಿನಿಮಾಗಳು ಸಾಲಿನಲ್ಲಿದೆ. ಸದ್ಯ ರಾಬರ್ಟ್ ಮುಗಿದ ಬಳಿಕ ದರ್ಶನ್ ಸಿನಿಮಾ ಯಾವುದು ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ.