Don't Miss!
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- News Air India: ಹಾರಾಟ ನಿಲ್ಲಿಸಿದ ಆಕಾಶದ ರಾಣಿ: ಐಶಾರಾಮಿ ವಿಮಾನದ ಬಗ್ಗೆ ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ ಅವ್ರದ್ದು ಲಕ್ಕಿ ಹ್ಯಾಂಡ್ ಎಂಬುದು ಮತ್ತೆ ನಿಜ ಆಯ್ತು
Recommended Video
"ನಮ್ಮ ಡಿ ಬಾಸ್ ದರ್ಶನ್ ವ್ರದ್ದು ಲಕ್ಕಿ ಹ್ಯಾಂಡ್' ಹೀಗೆ ಹೇಳಿದ್ದು ಸಂಗೀತ ನಿರ್ದೇಶಕ ವಿ ಶ್ರೀಧರ್ ಸಂಭ್ರಮ್. ನಿನ್ನೆ 'ಇರುವುದೆಲ್ಲವ ಬಿಟ್ಟು' ಸಿನಿಮಾದ ಟ್ರೇಲರ್ ಬಿಡುಗಡೆಯ ಕಾರ್ಯಕ್ರಮದಲ್ಲಿ ಹೇಳಿದ ಈ ಮಾತು ಇಂದು ನಿಜ ಆಗಿದೆ.
ಒಳ್ಳೆಯ ಸಿನಮಾಗಳಿಗೆ ದರ್ಶನ್ ಹೆಚ್ಚು ಪ್ರೊತ್ಸಾಹ ನೀಡುತ್ತಿದ್ದಾರೆ. ಅದೇ ರೀತಿ ನಿನ್ನೆ ಮೇಘನಾ ರಾಜ್ ನಟನೆಯ 'ಇರುವುದಿಲ್ಲವ ಬಿಟ್ಟು' ಸಿನಿಮಾದ ಟ್ರೇಲರ್ ಅನ್ನು ದರ್ಶನ್ ಲಾಂಚ್ ಮಾಡಿದರು. ಈಗಾಗಲೇ, ಈ ಸಿನಿಮಾ ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದಿದ್ದು, ಇದೀಗ ಟ್ರೇಲರ್ ಕೂಡ ಯೂ ಟ್ಯೂಬ್ ನಲ್ಲಿ ಸೂಪರ್ ಹಿಟ್ ಆಗುತ್ತಿದೆ.
ಮತ್ತೊಬ್ಬ ಯುವ ನಿರ್ದೇಶಕನಿಗೆ ಸಾಥ್ ನೀಡಿದ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೃಪೆಯಿಂದ 'ಇರುವುದಿಲ್ಲವ ಬಿಟ್ಟು' ಸಿನಿಮಾ ಇನ್ನಷ್ಟು ಜನರನ್ನು ತಲುಪುತ್ತಿದೆ. ಮುಂದೆ ಓದಿ...
ಟ್ರೇಲರ್ ರಿಲೀಸ್ ಮಾಡಿದ ದರ್ಶನ್
'ಇರುವುದಿಲ್ಲವ ಬಿಟ್ಟು' ಸಿನಿಮಾದ ಟ್ರೇಲರ್ ಅನ್ನು ಡಿ ಬಾಸ್ ದರ್ಶನ್ ರಿಲೀಸ್ ಮಾಡಿದ್ದಾರೆ. ನಟಿ ಮೇಘನಾ ರಾಜ್ ಹಾಗೂ ತಂಡಕ್ಕೆ ವಿಶ್ ಮಾಡಿದ ಅವರು ಸಿನಿಮಾದ ಟ್ರೇಲರ್ ಅನ್ನು ಮೆಚ್ಚಿಕೊಂಡಿದ್ದಾರೆ. ವಿಶೇಷ ಅಂದರೆ, ಸದ್ಯ ಮೇಘನಾ ರಾಜ್ ಈ ಚಿತ್ರದ ಜೊತೆಗೆ ದರ್ಶನ್ ಅವರ 'ಕುರುಕ್ಷೇತ್ರ' ಸಿನಿಮಾದಲ್ಲಿ ಸಹ ಕಾಣಿಸಿಕೊಂಡಿದ್ದಾರೆ.
ಟ್ರೆಂಡಿಂಗ್ ನಲ್ಲಿ ಟ್ರೇಲರ್
ವಿ ಶ್ರೀಧರ್ ಸಂಭ್ರಮ್ ಅವರು ದರ್ಶನ್ ಅವರದ್ದು ಲಕ್ಕಿ ಹ್ಯಾಂಡ್ ಎಂದಿದ್ದು ನಿಜ ಆಗಿದೆ. ದರ್ಶನ್ ತಮ್ಮ ಕೈಯಾರೆ ಬಿಡುಗಡೆ ಮಾಡಿದ್ದ ಸಿನಿಮಾದ ಟ್ರೇಲರ್ ಈಗ ಯೂಟ್ಯೂಬ್ ನಲ್ಲಿ 20ನೇ ಟ್ರೆಂಡಿಂಗ್ ವಿಡಿಯೋ ಆಗಿದೆ. ನಿಮಿಷದಿಂದ ನಿಮಿಷಕ್ಕೆ ಟ್ರೇಲರ್ ಗೆ ಬರುತ್ತಿರುವ ಹಿಟ್ಸ್ ಹೆಚ್ಚಾಗುತ್ತಿದೆ.
ಚಿತ್ರರಂಗಕ್ಕೆ ಬರ್ತಿರೋ ಶಶಿ ಕುಮಾರ್ ಮಗನಿಗೆ ಸಿಕ್ಕಿದೆ ದರ್ಶನ್ ಬೆಂಬಲ
ಟ್ರೇಲರ್ ನಲ್ಲಿ ಜೀವನದ ಅಂಶಗಳನ್ನು ಕಂಡ ದಾಸ
ಚಿತ್ರದ ಬಗ್ಗೆ ಮಾತನಾಡಿದ ದರ್ಶನ್ "ಟ್ರೇಲರ್ ನಲ್ಲಿ ಕ್ಯಾಮರಾ ವರ್ಕ್ ತುಂಬ ಚೆನ್ನಾಗಿದೆ. ಜೀವನದಲ್ಲಿ ಇರುವ ಎಲ್ಲ ಅಂಶಗಳನ್ನು ಟ್ರೇಲರ್ ನಲ್ಲಿ ಕಾಣಿಸಿತು. ಮೇಘನಾ ರಾಜ್ ಅವರ ಅನುಭವ ತೆರೆ ಮೇಲೆ ಕಾಣಿಸುತ್ತಿದೆ. ತಿಲಕ್ ಅವರ ನಟನೆಯಲ್ಲಿ ಒಂದು ಪ್ಯಾಟ್ರನ್ ಇದೆ. ಅದು ನಮಗೆ ಕೂಡ ಬರುವುದಿಲ್ಲ. ಈ ಸಿನಿಮಾದ ಎಲ್ಲರಿಗೆ ಆಲ್ ದಿ ಬೆಸ್ಟ್, ಈ ಚಿತ್ರ ಒಳ್ಳೆಯ ಗಳಿಕೆ ಮಾಡಲಿ.'' ಎಂದು ವಿಶ್ ಮಾಡಿದ್ದಾರೆ.
ಶಿಷ್ಯನಿಗೆ ಸಾಥ್ ನೀಡಿದ ಶಶಾಂಕ್
ನಿರ್ದೇಶಕ ಶಶಾಂಕ್ ಅವರ ಶಿಷ್ಯ ಕಾಂತ ಕನ್ನಲ್ಲಿ ನಿರ್ದೇಶನದ ಎರಡನೇ ಸಿನಿಮಾ ಇದಾಗಿದೆ. ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಶಶಾಂಕ್ ಸಹ ಬಂದಿದ್ದು, ಕಾಂತ ಅವರ ಕೆಲಸವನ್ನು ಮೆಚ್ಚಿಕೊಂಡರು. ಸಿನಿಮಾದ ಟ್ರೇಲರ್ ನೋಡಿ ತಮ್ಮ ಸಂತಸವನ್ನು ಹಂಚಿಕೊಂಡರು.
'ಇರುವುದೆಲ್ಲವ ಬಿಟ್ಟು' ತಂಡದ ಬಲ ಹೆಚ್ಚಿಸಿದ ಸ್ಟಾರ್ಸ್
'ಇರುವುದೆಲ್ಲವ ಬಿಟ್ಟು' ಚಿತ್ರತಂಡಕ್ಕೆ ಅನೇಕ ಸ್ಟಾರ್ ನಟರು ಸಾಥ್ ನೀಡಿದ್ದಾರೆ. ಕಾಲಿವುಡ್ ನಟ ಸಿಂಬು ಈ ಸಿನಿಮಾದ ಒಂದು ಹಾಡನ್ನು ಹಾಡುವ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಶ್ರೀ ಮುರಳಿ ಸಿನಿಮಾಗೆ ಧ್ವನಿ ನೀಡಿದ್ದಾರೆ. ಧ್ರುವ ಸರ್ಜಾ ಆಡಿಯೋ ಬಿಡುಗಡೆ ಮಾಡಿದ್ದು, ಈಗ ದರ್ಶನ್ ಕೂಡ ಟ್ರೇಲರ್ ಲಾಂಚ್ ಮಾಡಿ ಸಿನಿಮಾಗೆ ಬೆಂಬಲ ನೀಡಿದ್ದಾರೆ.