Don't Miss!
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- News Mukhtar Ansari: ಗ್ಯಾಂಗ್ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫೇಸ್ಬುಕ್ ಲೈವ್ನಲ್ಲಿ ಅಭಿಮಾನಿಗಳಿಗೆ ಮನವಿ ಮಾಡಿದ ದಾಸ ದರ್ಶನ್
ಅಪರೂಪಕ್ಕೆ ಇಂದು ನಟ ದರ್ಶನ್ ಫೇಸ್ಬುಕ್ ನಲ್ಲಿ ಲೈವ್ ಬಂದಿದ್ದರು. ಅವರು ಸಾಮಾಜಿಕ ಜಾಲತಾಣ ಬಳಸುವುದೇ ಕಡಿಮೆ ಅಂಥಹುದರಲ್ಲಿ ದರ್ಶನ್ ಫೇಸ್ಬುಕ್ ಲೈವ್ ಬರುತ್ತಿರುವುದು ಅಭಿಮಾನಿಗಳಿಗೆ ಆಶ್ಚರ್ಯವುಂಟು ಮಾಡಿತ್ತು.
ಅಂತೆಯೇ ದರ್ಶನ್ ಅವರ ಫೇಸ್ಬುಕ್ ಲೈವ್ ಅನ್ನು ಸಾವಿರಾರು ಮಂದಿ ಫೇಸ್ಬುಕ್ನಲ್ಲಿ ನೋಡಿದರು. ಅಪರೂಪಕ್ಕೆ ಲೈವ್ ಬಂದ ದರ್ಶನ್, ಮಹತ್ವವಾದ ಸಂದೇಶವನ್ನು ತಮ್ಮ ಅಭಿಮಾನಿಗಳಿಗೆ ನೀಡಿದರು.
ಒಟಿಟಿಯಲ್ಲಿ ದರ್ಶನ್ ಸಿನಿಮಾ ಬಿಡುಗಡೆ ಮಾಡುವುದಿಲ್ಲ: ಇಲ್ಲಿದೆ ಕಾರಣ
ಫೆಬ್ರವರಿ 16 ರಂದು ದರ್ಶನ್ ಹುಟ್ಟುಹಬ್ಬವಿದ್ದು, ಆ ದಿನ ಯಾವ ಅಭಿಮಾನಿಗಳೂ ಸಹ ಮನೆಯ ಬಳಿ ಬರಬೇಡಿರೆಂದು ನಟ ದರ್ಶನ್ ಫೇಸ್ಬುಕ್ ಲೈವ್ ನಲ್ಲಿ ಮನವಿ ಮಾಡಿದರು. ಇದೇ ವಿಷಯವನ್ನು ತಿಳಿಸಲೆಂದೇ ತಾವು ಫೇಸ್ಬುಕ್ ಲೈವ್ ಬಂದಿರುವುದಾಗಿ ಹೇಳಿದರು ನಟ ದರ್ಶನ್.
ನಿಮ್ಮ ಕುಟುಂಬವನ್ನು ಮೊದಲು ನೋಡಿಕೊಳ್ಳಿ: ದರ್ಶನ್
ಕೊರೊನಾ ಕಾರಣದಿಂದಾಗಿ ಯಾರ ಪರಿಸ್ಥಿತಿಯೂ ಚೆನ್ನಾಗಿಲ್ಲ. ಯಾರ ಜೇಬಿನಲ್ಲೂ ಹಣವಿಲ್ಲ. ಅಭಿಮಾನಿಗಳು ನೀವು ಕರ್ನಾಟಕದ ಮೂಲೆ-ಮೂಲೆಗಳಿಂದ ಹಣ, ಸಮಯ ಖರ್ಚು ಮಾಡಿಕೊಂಡು ಹುಟ್ಟುಹಬ್ಬಕ್ಕೆ ಬರುತ್ತೀರ. ಆದರೆ ಈ ವರ್ಷ ಅದು ಬೇಡ ಎಂದರು ದರ್ಶನ್.
ಎಲ್ಲಿದ್ದೀರೊ, ಅಲ್ಲಿಂದಲೇ ಹಾರೈಸಿ: ದರ್ಶನ್
ಎಲ್ಲರೂ ಸಂಕಷ್ಟದಲ್ಲಿದ್ದಾರೆ. ನಿಮ್ಮ ಕುಟುಂಬವನ್ನು ಮೊದಲು ನೋಡಿಕೊಳ್ಳಿ, ಅದರ ಮುಂದೆ ಬೇರೆ ಇನ್ನಾವ ಜವಾಬ್ದಾರಿಗಳೂ ಇಲ್ಲ. ನೀವು ಸೆಟ್ಲ್ ಆಗಿ. ಈ ಬಾರಿ ನನ್ನ ಹುಟ್ಟುಹಬ್ಬಕ್ಕೆ ಯಾರೂ ಏನೂ ಆಚರಣೆ ಮಾಡುವುದು ಬೇಡ ಎಲ್ಲಿದ್ದೀರೊ ಅಲ್ಲಿಂದಲೇ ಹಾರೈಸಿ ಸಾಕು ಎಂದು ಮನವಿ ಮಾಡಿದರು ನಟ ದರ್ಶನ್.
ರಾಬರ್ಟ್ ಸಿನಿಮಾ ಬಿಡುಗಡೆ ಯಾವಾಗ: ದರ್ಶನ್ ಹೇಳಿದ್ದು ಹೀಗೆ?
ಫೆಬ್ರವರಿ 15- 18 ಊರಿನಲ್ಲಿ ಇರುವುದಿಲ್ಲ: ದರ್ಶನ್
ನಾನು ಸಹ ಫೆಬ್ರವರಿ 15 ರಿಂದ 18 ರ ವರೆಗೆ ಊರಿನಲ್ಲಿ ಇರುವುದಿಲ್ಲ. ಅಷ್ಟೇ ಅಲ್ಲದೆ ಮನೆಯ ಬಳಿ ಹುಟ್ಟುಹಬ್ಬ ಆಚರಿಸಲು ಪೊಲೀಸರು ಅನುಮತಿ ಕೊಡುವುದಿಲ್ಲ. ಸಿಸಿಟಿವಿ ಗಳನ್ನು ಹಾಕಿಸಬೇಕಾಗುತ್ತದೆ, ಬ್ಯಾರಿಕೇಡ್ಗಳನ್ನು ಹಾಕಿಸಬೇಕಾಗುತ್ತದೆ. ಈ ಬಾರಿ ಅದೆಲ್ಲ ಯಾವುದು ಬೇಡ, ಮುಂದಿನ ವರ್ಷ ಅದ್ಧೂರಿಯಾಗಿ ಆಚರಿಸೋಣ ಎಂದರು ದರ್ಶನ್.
ನಾನೇ ಹೋಗಿ ಭೇಟಿ ಮಾಡುತ್ತೇನೆ: ದರ್ಶನ್
ಪ್ರತಿ ಊರಿಗೆ ನಾನೇ ಹೋಗಿ ಅಭಿಮಾನಿ ಸಂಘಗಳನ್ನು ಭೇಟಿ ಮಾಡುವ ಯೋಚನೆ ಇದೆ. ಆದರೆ ಅದೆಲ್ಲವೂ ಮಾರ್ಚ್ ನಂತರವೇ. ಈ ನಡುವೆ ಭಾನುವಾರಗಳಂದು ನಾನೇ ಕೆಲವು ಸಂಘಗಳಿಗೆ ತಿಳಿಸುತ್ತೇನೆ ಅವರು ಬಂದು ಭೇಟಿ ಮಾಡಬಹುದು ಎಂದು ಮಾಹಿತಿ ನೀಡಿದರು ದರ್ಶನ್.