ಕೋಮಲ್ ರನ್ನು ಕಾಪಾಡುತ್ತಾರಾ ದರ್ಶನ್ ಅಭಿಮಾನಿಗಳು
Recommended Video
ಅಂತೂ ಮೂರು ವರ್ಷದ ನಂತರ ನನ್ನ ಸಿನಿಮಾ ಬಿಡುಗಡೆ ಆಗುತ್ತಿದೆ ಎಂಬ ಖುಷಿಯಲ್ಲಿ ಇದ್ದ ನಟ ಕೋಮಲ್, ಈಗ ಬೇಸರ ಮಾಡಿಕೊಂಡಿದ್ದಾರೆ. ತಮ್ಮ 'ಕೆಂಪೇಗೌಡ 2' ಸಿನಿಮಾ ರಿಲೀಸ್ ಆಗುವ ದಿನವೇ 'ಕುರುಕ್ಷೇತ್ರ' ಚಿತ್ರವೂ ತೆರೆಗೆ ಬರುತ್ತಿವೆ. ಇದು ಕೋಮಲ್ ಗೆ ಚಿಂತೆಗೆ ದೂಡಿದೆ.
'ಕುರುಕ್ಷೇತ್ರ' ಎಂಬ ಮಹಾ ಸಿನಿಮಾ ಮುಂದೆ 'ಕೆಂಪೇಗೌಡ 2' ಸಿನಿಮಾ ಕಳೆದು ಹೋಗಿ ಬಿಡುತ್ತದೆಯೇ ಎನ್ನುವ ಭಯ ಇದೆ. ಈ ವಿಷಯಗಳ ಬಗ್ಗೆ ನಿನ್ನೆ ಮಾತನಾಡಿರುವ ಕೋಮಲ್ ತಮ್ಮ ಚಿತ್ರಕ್ಕೆ ಆಗುವ ತೊಂದರೆಯನ್ನು ತಿಳಿಸಿದ್ದಾರೆ. ''ಜನರಿಗೆ ಯಾವುದು ಇಷ್ಟವಾಗುತ್ತೋ ಆ ಸಿನಿಮಾ ನೋಡುತ್ತಾರೆ. ಅವರ ಸಿನಿಮಾನೇ ಮೊದಲು ನೋಡಿ ನಂತರ ನನ್ನ ಸಿನಿಮಾ ನೋಡಲಿ.'' ಎಂದು ಹೇಳಿದ್ದಾರೆ.
ಕೋಮಲ್ ಅವರ ಸಮಸ್ಯೆಗೆ ದರ್ಶನ್ ಅವರ ಕೆಲವು ಅಭಿಮಾನಿಗಳು ಸ್ಪಂದಿಸಿದ್ದಾರೆ. 'ಕುರುಕ್ಷೇತ್ರ'ದ ಜೊತೆಗೆ 'ಕೆಂಪೇಗೌಡ 2' ಸಿನಿಮಾವನ್ನು ಸಹ ನೋಡುವ ನಿರ್ಧಾರ ಮಾಡುತ್ತಿದ್ದಾರೆ.

ಟ್ವಿಟ್ಟರ್ ನಲ್ಲಿ ದರ್ಶನ್ ಅವರ ಸಾಕಷ್ಟು ಫ್ಯಾನ್ಸ್ ''ತೂಗುದೀಪ ಅಭಿಮಾನಿಗಳಲ್ಲಿ ಮನವಿ 9/8/2019 ಕೋಮಲ್ ಸರ್ ಅವರ 'ಕೆಂಪೇಗೌಡ 2' ಚಿತ್ರ ಬರುತ್ತಿದೆ ದಯವಿಟ್ಟು ಎಲ್ಲಾ ಡಿ ಬಾಸ್ ಅಭಿಮಾನಿಗಳು ಡಿ ಬಾಸ್ 'ಕುರುಕ್ಷೇತ್ರ' ಜಾತ್ರೆ ಆದ ಮೇಲೆ ಕೋಮಲ್ ಸರ್ ಅವರ ಚಿತ್ರವನ್ನು ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಹೋಗಿ ನೋಡಬೇಕು ಎಂದು ಡಿ ಬಾಸ್ ಅಭಿಮಾನಿಗಳಲ್ಲಿ ಮನವಿ ಮಾಡುತ್ತೇನೆ.'' ಎಂದು ಬರೆದುಕೊಂಡಿದ್ದಾರೆ.

ನಟ ಜಗ್ಗೇಶ್ ಸಹ ದರ್ಶನ್ ಅಭಿಮಾನಿಗಳು ಈ ನಡೆಗೆ ಧನ್ಯವಾದ ತಿಳಿಸಿದ್ದಾರೆ. ಇದನ್ನು ಎಲ್ಲ ಅಭಿಮಾನಿಗಳು ಅನುಸರಿಸಿದರೆ, ಕೋಮಲ್ ತಲೆ ಮೇಲಿನ ಭಾರ ಕಡಿಮೆ ಆಗಬಹುದು.


Click it and Unblock the Notifications











