Don't Miss!
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೋಮಲ್ ರನ್ನು ಕಾಪಾಡುತ್ತಾರಾ ದರ್ಶನ್ ಅಭಿಮಾನಿಗಳು
Recommended Video
ಅಂತೂ ಮೂರು ವರ್ಷದ ನಂತರ ನನ್ನ ಸಿನಿಮಾ ಬಿಡುಗಡೆ ಆಗುತ್ತಿದೆ ಎಂಬ ಖುಷಿಯಲ್ಲಿ ಇದ್ದ ನಟ ಕೋಮಲ್, ಈಗ ಬೇಸರ ಮಾಡಿಕೊಂಡಿದ್ದಾರೆ. ತಮ್ಮ 'ಕೆಂಪೇಗೌಡ 2' ಸಿನಿಮಾ ರಿಲೀಸ್ ಆಗುವ ದಿನವೇ 'ಕುರುಕ್ಷೇತ್ರ' ಚಿತ್ರವೂ ತೆರೆಗೆ ಬರುತ್ತಿವೆ. ಇದು ಕೋಮಲ್ ಗೆ ಚಿಂತೆಗೆ ದೂಡಿದೆ.
'ಕುರುಕ್ಷೇತ್ರ' ಎಂಬ ಮಹಾ ಸಿನಿಮಾ ಮುಂದೆ 'ಕೆಂಪೇಗೌಡ 2' ಸಿನಿಮಾ ಕಳೆದು ಹೋಗಿ ಬಿಡುತ್ತದೆಯೇ ಎನ್ನುವ ಭಯ ಇದೆ. ಈ ವಿಷಯಗಳ ಬಗ್ಗೆ ನಿನ್ನೆ ಮಾತನಾಡಿರುವ ಕೋಮಲ್ ತಮ್ಮ ಚಿತ್ರಕ್ಕೆ ಆಗುವ ತೊಂದರೆಯನ್ನು ತಿಳಿಸಿದ್ದಾರೆ. ''ಜನರಿಗೆ ಯಾವುದು ಇಷ್ಟವಾಗುತ್ತೋ ಆ ಸಿನಿಮಾ ನೋಡುತ್ತಾರೆ. ಅವರ ಸಿನಿಮಾನೇ ಮೊದಲು ನೋಡಿ ನಂತರ ನನ್ನ ಸಿನಿಮಾ ನೋಡಲಿ.'' ಎಂದು ಹೇಳಿದ್ದಾರೆ.
'ಫುಟ್ ಪಾತ್ ಮೇಲೆ ಹೋಗುತ್ತಿದ್ದವನಿಗೆ ಬಂದು ಗುದ್ದಿದ್ದಾರೆ':'ಕುರುಕ್ಷೇತ್ರ' ವಿರುದ್ಧ 'ಕೆಂಪೇಗೌಡ'ನ ಬೇಸರ
ಕೋಮಲ್ ಅವರ ಸಮಸ್ಯೆಗೆ ದರ್ಶನ್ ಅವರ ಕೆಲವು ಅಭಿಮಾನಿಗಳು ಸ್ಪಂದಿಸಿದ್ದಾರೆ. 'ಕುರುಕ್ಷೇತ್ರ'ದ ಜೊತೆಗೆ 'ಕೆಂಪೇಗೌಡ 2' ಸಿನಿಮಾವನ್ನು ಸಹ ನೋಡುವ ನಿರ್ಧಾರ ಮಾಡುತ್ತಿದ್ದಾರೆ.
ಟ್ವಿಟ್ಟರ್ ನಲ್ಲಿ ದರ್ಶನ್ ಅವರ ಸಾಕಷ್ಟು ಫ್ಯಾನ್ಸ್ ''ತೂಗುದೀಪ ಅಭಿಮಾನಿಗಳಲ್ಲಿ ಮನವಿ 9/8/2019 ಕೋಮಲ್ ಸರ್ ಅವರ 'ಕೆಂಪೇಗೌಡ 2' ಚಿತ್ರ ಬರುತ್ತಿದೆ ದಯವಿಟ್ಟು ಎಲ್ಲಾ ಡಿ ಬಾಸ್ ಅಭಿಮಾನಿಗಳು ಡಿ ಬಾಸ್ 'ಕುರುಕ್ಷೇತ್ರ' ಜಾತ್ರೆ ಆದ ಮೇಲೆ ಕೋಮಲ್ ಸರ್ ಅವರ ಚಿತ್ರವನ್ನು ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಹೋಗಿ ನೋಡಬೇಕು ಎಂದು ಡಿ ಬಾಸ್ ಅಭಿಮಾನಿಗಳಲ್ಲಿ ಮನವಿ ಮಾಡುತ್ತೇನೆ.'' ಎಂದು ಬರೆದುಕೊಂಡಿದ್ದಾರೆ.
'ಕುರುಕ್ಷೇತ್ರ' V/S 'ಕೆಂಪೇಗೌಡ 2' : ತಮ್ಮನ ಚಿತ್ರದ ಬಗ್ಗೆ ಜಗ್ಗೇಶ್ ಪ್ರತಿಕ್ರಿಯೆ
ನಟ ಜಗ್ಗೇಶ್ ಸಹ ದರ್ಶನ್ ಅಭಿಮಾನಿಗಳು ಈ ನಡೆಗೆ ಧನ್ಯವಾದ ತಿಳಿಸಿದ್ದಾರೆ. ಇದನ್ನು ಎಲ್ಲ ಅಭಿಮಾನಿಗಳು ಅನುಸರಿಸಿದರೆ, ಕೋಮಲ್ ತಲೆ ಮೇಲಿನ ಭಾರ ಕಡಿಮೆ ಆಗಬಹುದು.