ದರ್ಶನ್ 'ಸಂಗೊಳ್ಳಿ ರಾಯಣ್ಣ' ಕಾದಿದ್ದವರಿಗೆ ನಿರಾಸೆ
ಆಗಸ್ಟ್ 15ಕ್ಕೇ ಈ ಚಿತ್ರವನ್ನು ಬಿಡುಗಡೆ ಮಾಡಬೇಕೆಂಬುದು ನಿರ್ಮಾಪಕ ಆನಂದ್ ಅಪ್ಪುಗೋಳ್ ಅವರ ಅಭಿಲಾಷೆಯೂ ಆಗಿತ್ತು. ಹೇಳಿಕೇಳಿ ಆಗಸ್ಟ್ 15, ಸಂಗೊಳ್ಳಿ ರಾಯಣ್ಣ ನವರ ಜನ್ಮದಿನ. ಅದೇ ದಿನ ಆ ಚಿತ್ರವನ್ನು ಬಿಡುಗಡೆ ಮಾಡಿದರೆ ಅದಕ್ಕೊಂದು ವಿಶೇಷ ಅರ್ಥವೂ ಸಿಗಲಿದೆ ಎಂಬುದು ಇಡೀ ಚಿತ್ರತಂಡದ ಆಸೆಯಾಗಿತ್ತು. ಕೊನೇಪಕ್ಷ ಆಡಿಯೋ ಬಿಡುಗಡೆಯನ್ನಾದರೂ ಮಾಡೋಣ ಎಂದುಕೊಂಡರೆ ಅದೂ ಸಾಧ್ಯವಾಗಲಿಲ್ಲ.
'ಸಂಗೊಳ್ಳಿ ರಾಯಣ್ಣ' ಆಡಿಯೋ ಹಕ್ಕುಗಳನ್ನು ಅಶ್ವಿನಿ ಆಡಿಯೋ ಪಡೆದಿದೆ. ಪ್ರಸಾದ್ ವೆಂಚರ್ಸ್ ನ ಪ್ರಸಾದ್ ಈ ಅಶ್ವಿನಿ ಆಡಿಯೋ ಕಂಪನಿಯನ್ನು ಖರೀದಿಸಿದ್ದು ಗೊತ್ತೇ ಇದೆ. ಆಡಿಯೋ ಬಿಡುಗಡೆಗೆ ಪ್ರಸಾದ್ ಕಡೆಯಿಂದ ಗ್ರೀನ್ ಸಿಗ್ನಲ್ ಬರಲಿಲ್ಲವಾಗಿ, ಅದೂ ಸಾಧ್ಯವಾಗದೇ ಚಿತ್ರತಂಡ ಹಾಗೂ ದರ್ಶನ್ ಅಭಿಮಾನಿಗಳು ನಿರಾಸೆ ಅನುಭವಿಸಿದ್ದಾರೆ.
'ಚಿಂಗಾರಿ' ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಾವ ಚಿತ್ರವೂ ಬಿಡುಗಡೆಯಾಗಿಲ್ಲವಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ದರ್ಶನ್ ನಟನೆಯ 'ಸಂಗೊಳ್ಳಿ ರಾಯಣ್ಣ' ಚಿತ್ರವೇನೋ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ದಿನಾಂಕವಿನ್ನೂ ಪಕ್ಕಾ ಆಗಿಲ್ಲ. 'ಚಿಂಗಾರಿ' ಹಾಕಿದ ದುಡ್ಡು ಬಾಚಿಕೊಂಡರೂ 'ಸಾರಥಿ' ಚಿತ್ರಕ್ಕೆ ಸರಿಸಮಾನ ಹಿಟ್ ದಾಖಲಿಸಿಲ್ಲ. ಹೀಗಾಗಿ ದರ್ಶನ್ ಅಭಿಮಾನಿಗಳು 'ಸಂಗೊಳ್ಳಿ ರಾಯಣ್ಣ' ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಹೊಂದಿದ್ದಾರೆ.
ಸಮಾಧಾನದ ಸಂಗತಿಯೆಂದರೆ ಮೊನ್ನೆ ದರ್ಶನ್ ಹಾಗೂ ಜಗ್ಗೇಶ್ ಸಂಗಮದ ಹೊಸ ಚಿತ್ರ 'ಅಗ್ರಜ'ಕ್ಕೆ ಮುಹೂರ್ತ ನೆರವೇರಿದೆ. ಈ ಚಿತ್ರದಲ್ಲಿ ದರ್ಶನ್ ಮತ್ತು ಜಗ್ಗೇಶ್ ತಾವು ಈ ಮೊದಲು ಮಾಡಿರುವ ಪಾತ್ರಗಳಿಗೆ ತದ್ವಿರುದ್ಧವಾದ ಪಾತ್ರಗಳನ್ನು ಪೋಷಿಸಲಿದ್ದಾರೆ. "ಚಿತ್ರದಲ್ಲಿ ಆಕ್ಷನ್ ಹಾಗೂ ಕಾಮಿಡಿ ಮಿಶ್ರಣವಿದ್ದು ಪ್ರೇಕ್ಷಕರಿಗೆ ಎಲ್ಲೂ ಬೋರ್ ಆಗದಂತೆ ಚಿತ್ರಕಥೆ ಹಾಗೂ ನಿರೂಪಣೆ ಮಾಡಲಾಗುವುದು" ಎಂದಿದ್ದಾರೆ ನಿರ್ದೇಶಕ ಶ್ರೀನಂದನ್. ಮುಂದಿನ ಪುಟ ನೋಡಿ...


Click it and Unblock the Notifications












