twitter
    For Quick Alerts
    ALLOW NOTIFICATIONS  
    For Daily Alerts

    'ಬಾಹುಬಲಿ' ಸಿನಿಮಾವನ್ನು ಸೈಡಿಗಿಡಿ ಎಂದ ಡಿ ಬಾಸ್!

    |

    Recommended Video

    Kurukshetra Movie: ಬಾಹುಬಲಿ' ಸಿನಿಮಾವನ್ನು ಸೈಡಿಗಿಡಿ ಎಂದ ಡಿ ಬಾಸ್! | FILMIBEAT KANNADA

    ''ಆ ಸಿನಿಮಾವನ್ನು ಸೈಡಿಗಿಡಿ'' ಎಂದು ನಟ ದರ್ಶನ್ ಹೇಳಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಆ ರೀತಿ ಹೇಳಿರುವುದು ತೆಲುಗಿನ ಸೂಪರ್ ಹಿಟ್ ಸಿನಿಮಾ 'ಬಾಹುಬಲಿ' ಬಗ್ಗೆ.

    ದರ್ಶನ್ ಮೊದಲ ಬಾರಿಗೆ ಪೌರಾಣಿಕ ಸಿನಿಮಾದಲ್ಲಿ ನಟಿಸಿದ್ದಾರೆ. ಅದುವೇ 'ಕುರುಕ್ಷೇತ್ರ'. ಈ ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈ ವಿಶೇಷವಾಗಿ ಇತ್ತೀಚಿಗೆ 'ಕುರುಕ್ಷೇತ್ರ' ಸಿನಿಮಾದ ಸುದ್ದಿಗೋಷ್ಟಿ ಕಾರ್ಯಕ್ರಮ ನಡೆಯಿತು.

    ಪ್ರತಿಭೆಗೆ ತಕ್ಕ ಪ್ರಶಸ್ತಿಗಳು ಕೊಡ್ತಿಲ್ಲ ಎಂದು ದರ್ಶನ್ ಹೇಳಿದ್ದೇಕೆ? ಪ್ರತಿಭೆಗೆ ತಕ್ಕ ಪ್ರಶಸ್ತಿಗಳು ಕೊಡ್ತಿಲ್ಲ ಎಂದು ದರ್ಶನ್ ಹೇಳಿದ್ದೇಕೆ?

    ಇಲ್ಲಿ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರದ ಪ್ರಸ್ತಾಪ ಬಂತು. ಆಗ ದರ್ಶನ್ ಆ ಸಿನಿಮಾವನ್ನು ದೂರು ಇಡಿ ಎಂದು ಹೇಳಿದರು.

    ಪ್ರಶ್ನೆ ಏನು..?, ಉತ್ತರ ಏನು..?

    ಪ್ರಶ್ನೆ ಏನು..?, ಉತ್ತರ ಏನು..?

    ''ಈ ರೀತಿಯ ಪ್ರಯತ್ನಗಳನ್ನು ಬೇರೆ ಭಾಷೆಗಳಲ್ಲಿ ನೋಡುತ್ತಿದ್ವಿ. ಈಗ ಕನ್ನಡದಲ್ಲಿಯೂ ಈ ರೀತಿಯ ಸಿನಿಮಾ ಬಂದಿದೆ....'' ಎಂಬ ಪ್ರಶ್ನೆಯನ್ನು ಅರ್ಧಕ್ಕೆ ನಿಲ್ಲಿಸಿದ ದರ್ಶನ್ ಬೇರೆ ಭಾಷೆಯಲ್ಲಿ ಯಾವ ಸಿನಿಮಾ ಬಂದಿದೆ ಎಂದು ತಾವೇ ಮರು ಪ್ರಶ್ನೆ ಹಾಕಿದರು. ಆಗ 'ಬಾಹುಬಲಿ' ಚಿತ್ರ ಪ್ರಸ್ತಾಪ ಮಾಡಿದಾಗ ದರ್ಶನ್ ಅದನ್ನು ದೂರ ಇಡಿ ಎಂದು ಹೇಳಿದ್ದಾರೆ.

    ಕಾಲ್ಪನಿಕ ಕಥೆಯೇ ಬೇರೆ.. 'ಕುರುಕ್ಷೇತ್ರ'ವೇ ಬೇರೆ..

    ಕಾಲ್ಪನಿಕ ಕಥೆಯೇ ಬೇರೆ.. 'ಕುರುಕ್ಷೇತ್ರ'ವೇ ಬೇರೆ..

    'ಬಾಹುಬಲಿ' ಸಿನಿಮಾಗಿಂತ ತಮ್ಮ 'ಕುರುಕ್ಷೇತ್ರ' ಸಿನಿಮಾ ಹೇಗೆ ವಿಶೇಷ ಎಂಬುದನ್ನು ಒಂದೇ ಸಾಲಿನಲ್ಲಿ ದರ್ಶನ್ ಸಾಬೀತು ಮಾಡಿದ್ದಾರೆ. ಕಾಲ್ಪನಿಕ ಕಥೆ ಹೇಳುವುದೇ ಬೇರೆ, ಪೌರಾಣಿಕ ಸಿನಿಮಾವೇ ಬೇರೆ ಎಂದು ಹೇಳಿದ್ದಾರೆ. ಕಾಲ್ಪನಿಕ ಸಿನಿಮಾಗಳಲ್ಲಿ ಏನು ಬೇಕಾದರೂ ಬದಲಾವಣೆ ಮಾಡಿ ತೋರಿಸಬಹುದು. ಆದರೆ, ಇಂತಹ ಸಿನಿಮಾವನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು ಎನ್ನುವುದು ದರ್ಶನ್ ಅಭಿಪ್ರಾಯ.

    ರಾಕ್ ಲೈನ್ ವೆಂಕಟೇಶ್ ಅವರಿಗೆ ದರ್ಶನ್ ಫ್ಯಾನ್ಸ್ ಹಿಂಸೆ ನೀಡುತ್ತಿದ್ದಾರಂತೆ ರಾಕ್ ಲೈನ್ ವೆಂಕಟೇಶ್ ಅವರಿಗೆ ದರ್ಶನ್ ಫ್ಯಾನ್ಸ್ ಹಿಂಸೆ ನೀಡುತ್ತಿದ್ದಾರಂತೆ

    ವಿಶ್ವದ ಮೊದಲ ತ್ರೀಡಿ ಪೌರಾಣಿಕ ಸಿನಿಮಾ

    ವಿಶ್ವದ ಮೊದಲ ತ್ರೀಡಿ ಪೌರಾಣಿಕ ಸಿನಿಮಾ

    'ಕುರುಕ್ಷೇತ್ರ' ಸಿನಿಮಾ ವಿಶ್ವದ ಮೊದಲ ತ್ರೀಡಿ ಪೌರಾಣಿಕ ಸಿನಿಮಾ ಆಗಿದೆ. ಈವರೆಗೆ ಎಷ್ಟೋ ಪೌರಾಣಿಕ ಚಿತ್ರಗಳು ಬಂದಿವೆ, ಎಷ್ಟೋ ತ್ರೀಡಿ ಸಿನಿಮಾಗಳು ಬಂದಿವೆ. ಆದರೆ, ಇದೇ ಮೊದಲ ಬಾರಿಗೆ ಪೌರಾಣಿಕ ತ್ರೀಡಿ ಸಿನಿಮಾ ಕನ್ನಡದಲ್ಲಿ ನಿರ್ಮಾಣ ಆಗಿದೆ. ಇದು ದರ್ಶನ್ ರಿಗೂ ಹೆಮ್ಮೆ ಪಡುವ ವಿಷಯವಾಗಿದೆ.

    'ಬಾಹುಬಲಿ' ಚಿತ್ರದ ಸಂಗೀತ ನಿರ್ದೇಶಕರಿಂದ ಹಾಡು

    'ಬಾಹುಬಲಿ' ಚಿತ್ರದ ಸಂಗೀತ ನಿರ್ದೇಶಕರಿಂದ ಹಾಡು

    'ಕುರುಕ್ಷೇತ್ರ' ಸಿನಿಮಾದಲ್ಲಿ 'ಬಾಹುಬಲಿ' ಚಿತ್ರದ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಹಾಡು ಹಾಡಿದ್ದಾರೆ. ತೆಲುಗು ಭಾಷೆಯ ಅವತರಣಿಕೆಯ 'ಸಾಹೋರೇ ಸಾಹೋ..' ಹಾಡಿಗೆ ಕೀರವಾಣಿ ಧ್ವನಿ ನೀಡಿದ್ದಾರೆ. ಆಗಸ್ಟ್ 9 ರಂದು ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಒಂದೇ ದಿನ ಸಿನಿಮಾ ಬಿಡುಗಡೆ ಆಗುತ್ತಿದೆ.

    English summary
    Kannada actor Darshan says don't compare kurukshetra with 'Bahubali' movie.
    Monday, August 5, 2019, 17:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X