Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಥಿಯೇಟರ್ ಮುಂದೆ ನಿಂತ ಜೂನಿಯರ್ 'ಯಜಮಾನ'.! ಎಲ್ಲಿದು?
Recommended Video
ದರ್ಶನ್ ಯಜಮಾನ ಚಿತ್ರ ನಾಳೆ ವರ್ಲ್ಡ್ ವೈಡ್ ತೆರೆಕಾಣುತ್ತಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣಲಿರುವ ಯಜಮಾನ ಹೊರರಾಜ್ಯ, ಹೊರದೇಶಗಳಲ್ಲೂ ಅಬ್ಬರಿಸಲಿದೆ.
ಯಜಮಾನ ಚಿತ್ರವನ್ನ ಸ್ವಾಗತಿಸಲು ಡಿ-ಬಾಸ್ ಅಭಿಮಾನಿಗಳು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದು, ಥಿಯೇಟರ್ ಮುಂದೆ ಕಟೌಟ್ ಗಳು ರಾರಜಿಸುತ್ತಿದೆ. ರಾಜ್ಯದ ಬಹುತೇಕ ಚಿತ್ರಮಂದಿರಗಳ ಮುಂದೆ ದರ್ಶನ್ ಕಟೌಟ್ ನಿಲ್ಲಿಸಲಾಗಿದೆ. ಇಡೀ ಚಿತ್ರಮಂದಿರವೇ ಕಾಣದಂತೆ ಪೋಸ್ಟರ್ ಹಾಕಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶಿವಮೊಗ್ಗದ ಮೂರು ಚಿತ್ರಮಂದಿರಗಳಲ್ಲಿ 'ಯಜಮಾನ' ರಿಲೀಸ್
ಆದ್ರೆ, ಇಲ್ಲೊಂದು ಚಿತ್ರಮಂದಿರದಲ್ಲಿ ಜೂನಿಯರ್ ದರ್ಶನ್ ಅಂದ್ರೆ, ದರ್ಶನ್ ಅವರ ಮಗ ವಿನೀಶ್ ಅವರ ಕಟೌಟ್ ನಿಲ್ಲಿಸಲಾಗಿದೆ. ಹೌದು, ಈ ಕಟೌಟ್ ನಿಲ್ಲಿಸಿರುವುದು ಮೆಜಿಸ್ಟಿಕ್ ರಸ್ತೆಯಲ್ಲಿರುವ ನರ್ತಕಿ ಥಿಯೇಟರ್ ಬಳಿ. ನರ್ತಕಿ ಎದುರು ದರ್ಶನ್ ಅವರ 80 ಅಡಿ ಕಟೌಟ್ ನಿಲ್ಲಿಸಿದ್ರೆ, ದರ್ಶನ್ ಕಟೌಟ್ ಹಿಂದೆ ಮಗನ ಪೋಸ್ಟರ್ ನಿಲ್ಲಿಸಲಾಗಿದೆ.
ಯಜಮಾನ ನೋಡೋದಕ್ಕೆ ಮುಂಚೆ ಈ 10 ವಿಷ್ಯಗಳನ್ನ ತಿಳಿಯಿರಿ
ವಿಶೇಷ ಅಂದ್ರೆ ಯಜಮಾನ ಚಿತ್ರದಲ್ಲಿ ದರ್ಶನ್ ಮಗ ವಿನೀಶ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದ್ರೆ, ಸಿನಿಮಾದಲ್ಲಿ ಅಭಿನಯಿಸಿರುವುದು ಪಕ್ಕಾ. ಆ ಚಿತ್ರದ ದೃಶ್ಯವೇ ಈ ಕಟೌಟ್ ಎನ್ನಲಾಗಿದೆ.
ಈ ಹಿಂದೆ ಮಿಸ್ಟರ್ ಐರಾವತ ಚಿತ್ರದಲ್ಲಿ ದರ್ಶನ್ ಮಗ ವಿನೀಶ್ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಈಗ ಯಜಮಾನದಲ್ಲಿ ಬಣ್ಣ ಹಚ್ಚಿದ್ದಾರೆ.