twitter
    For Quick Alerts
    ALLOW NOTIFICATIONS  
    For Daily Alerts

    'ಸ್ವಾಭಿಮಾನ' ವೇದಿಕೆಯಲ್ಲಿ ಮಂಡ್ಯ ಜನರ ಪಾದಕ್ಕೆ ನಮಸ್ಕರಿಸಿದ ದರ್ಶನ್

    |

    Recommended Video

    ಮಂಡ್ಯ ಜನರ ಪಾದಗಳಿಗೆ ನನ್ನ ನಮಸ್ಕಾರ ಎಂದ ದರ್ಶನ್ | Oneindia kannada

    ಮಂಡ್ಯದಲ್ಲಿ ನಡೆದ 'ಸ್ವಾಭಿಮಾನ ವಿಜಯೋತ್ಸವ' ಕಾರ್ಯಕ್ರಮದಲ್ಲಿ ನೂತನ ಸಂಸದೆ ಮತ್ತು ಜೋಡೆತ್ತುಗಳು ಸ್ವಾಭಿಮಾನದ ವಿಜಯ ಕಹಳೆ ಊದಿದ್ದಾರೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನ ಗೆಲ್ಲಿಸಿಕೊಟ್ಟ ಮಂಡ್ಯ ಜನತೆಗೆ ನಟ ದರ್ಶನ್, ಯಶ್, ಅಭಿಷೇಕ್ ಹೃದಯಪೂರ್ವಕವಾಗಿ ಧನ್ಯವಾದ ತಿಳಿಸಿದ್ದಾರೆ.

    ಈ ವೇಳೆ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ''ಮಂಡ್ಯದ ಪ್ರತಿಯೊಬ್ಬರಿಗೂ, ದೊಡ್ಡವರಿಗೆ, ಚಿಕ್ಕವರಿಗೆ ಎಲ್ಲರ ಪಾದಕ್ಕೂ ನಮಸ್ಕಾರ '' ಎಂದು ಕೃತಜ್ಞತೆ ಸಲ್ಲಿಸಿದರು.

    ಹೀರೋ ಯಶ್ ಹೇಳಿದ ಮಾತು ಸತ್ಯವಾಗಿದೆ : ದರ್ಶನ್ ಹೀರೋ ಯಶ್ ಹೇಳಿದ ಮಾತು ಸತ್ಯವಾಗಿದೆ : ದರ್ಶನ್

    'ಸುಮಲತಾ ಅವರನ್ನ ಗೆಲ್ಲಿಸಿ ನಮಗೆ ಪುನಃ ಜನ್ಮ ನೀಡಿದ್ದೀರಾ. ನಿಮ್ಮ ಅಭಿಮಾನಕ್ಕೆ ನಾವು ಸದಾ ಚಿರ ಋಣಿ. ಸಾಯೋವರೆಗೂ ನಿಮಗೆ ಋಣಿಯಾಗಿರುತ್ತೇವೆ' ಎಂದು ಡಿ ಬಾಸ್ ಧನ್ಯವಾದ ತಿಳಿಸಿದರು.

    Darshan speech in Swabhimana Vijayotsava

    ಅಂಬರೀಶ್ ಹುಟ್ಟುಹಬ್ಬಕ್ಕೆ ದರ್ಶನ್ ಶುಭಕೋರಿದ್ದು ಹೀಗೆ ಅಂಬರೀಶ್ ಹುಟ್ಟುಹಬ್ಬಕ್ಕೆ ದರ್ಶನ್ ಶುಭಕೋರಿದ್ದು ಹೀಗೆ

    ''ಸುಮಲತಾ ಅಮ್ಮ ಸಂಸದೆಯಾಗಿ ಆಯ್ಕೆಯಾಗಿ ಐದು ದಿನ ಆಗಿದೆ. ಇನ್ನು ಪ್ರಮಾಣವಚನ ಕೂಡ ಸ್ವೀಕರಿಸಿಲ್ಲ. ಅವರಿಗೆ ಸಮಯವಕಾಶ ಕೊಡಬೇಕು. ಮಂಡ್ಯ ಅಭಿವೃದ್ದಿಗಾಗಿ ಅವರ ಎಲ್ಲ ರೀತಿಯಲ್ಲೂ ಕೆಲಸ ಮಾಡ್ತಾರೆ'' ಎಂದು ಭರವಸೆ ನೀಡಿದರು.

    ಎಂಪಿ ಆದ ಸುಮಲತಾ ಅವರನ್ನ ದರ್ಶನ್-ಯಶ್ ಏನಂತ ಕರೀತಾರೆ? ಎಂಪಿ ಆದ ಸುಮಲತಾ ಅವರನ್ನ ದರ್ಶನ್-ಯಶ್ ಏನಂತ ಕರೀತಾರೆ?

    ಇದಕ್ಕೂ ಮುಂಚೆ ಮಾತನಾಡಿದ ಯಶ್ ಕೂಡ ಮಂಡ್ಯ ಜನರಿಗೆ ಕೃತಜ್ಞತೆ ಸಲ್ಲಿಸಿದರು. ಸುಮಲತಾ, ಅಭಿಷೇಕ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ, ನಟ ಪ್ರೇಮ್ ಸೇರಿದಂತೆ ಹಲವು ನಾಯಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    English summary
    Kannada actor, challenging star darshan speech in Swabhimana Vijayotsava.
    Wednesday, May 29, 2019, 18:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X