Just In
Don't Miss!
- Education
ಬೆಂಗಳೂರು ನಗರ ಜಿಲ್ಲೆ 179 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ
- News
ಕಾಗವಾಡದಲ್ಲಿ ಹಾಕುವುದ್ಯಾರು ಗೆಲುವಿನ ಕೇಕೆ?
- Finance
ಜಿಎಸ್ಟಿ ದರ ಹೆಚ್ಚಳಕ್ಕೆ ಕೇಂದ್ರದ ಚಿಂತನೆ: 250ಕ್ಕೂ ಹೆಚ್ಚು ವಸ್ತುಗಳ ದರ ಏರಿಕೆ?
- Technology
ರಿಯಲ್ ಮಿ x2 ಪ್ರೊ ವಿಮರ್ಶೆ : ಕೊಟ್ಟ ಕಾಸಿಗೆ ಮೋಸವಿಲ್ಲ!
- Lifestyle
ಸೋಮವಾರದ ದಿನ ಭವಿಷ್ಯ 9-12-2019
- Sports
ಭಾರತ vs ವಿಂಡಿಸ್ ಟಿ20; ಚಾಂಪಿಯನ್ನರಿಗೆ ತಲೆಬಾಗಿದ ಟೀಮ್ ಇಂಡಿಯಾ
- Automobiles
ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
'ರಾಧಿಕಾ ಕುಮಾರಸ್ವಾಮಿ ನನಗಿಂತ ಸೀನಿಯರ್' - ದರ್ಶನ್
''ರಾಧಿಕಾ ಕುಮಾರಸ್ವಾಮಿ ಅವರ ನನಗಿಂತ ಸೀನಿಯರ್. ದಮಯಂತಿ ಅಂತಹ ಸಿನಿಮಾ ಮಾಡುವುದಕ್ಕೆ ಡೆಡಿಕೇಶನ್ ಇದ್ದರೆ ಮಾತ್ರ ಸಾಧ್ಯ. ಅದಕ್ಕೆ ಗಟ್ಸ್ ಬೇಕು. ಟ್ರೈಲರ್ ನೋಡಿದಾಗ ರೋಮಾಂಚನ ಆಯ್ತು'' ಎಂದು ನಟ ದರ್ಶನ್ ಹೇಳಿದ್ದಾರೆ.
ರಾಧಿಕಾ ಕುಮಾರಸ್ವಾಮಿ ನಟನೆಯ 'ದಮಯಂತಿ' ಸಿನಿಮಾದ ಟ್ರೈಲರ್ ಲಾಂಚ್ ಮಾಡಿದ ಡಿ ಬಾಸ್, ಸಿನಿಮಾ ಹಾಗೂ ರಾಧಿಕಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಟಿ ರಾಧಿಕಾ ಮಗಳು ಸ್ಯಾಂಡಲ್ ವುಡ್ ನ 'ಈ ಸ್ಟಾರ್' ನಟನ ದೊಡ್ಡ ಅಭಿಮಾನಿಯಂತೆ
'ನಾನು ಮೆಜಿಸ್ಟಿಕ್ ಸಿನಿಮಾ ಮಾಡುವುದಕ್ಕೂ ಮೊದಲೇ, ರಾಧಿಕಾ 'ನೀಲಾ ಮೇಘ ಶ್ಯಾಮ' ಸಿನಿಮಾ ಮಾಡಿದ್ದರು. ಅವರು ನನಗಿಂತ ಒಂದು ಸಿನಿಮಾ ಸೀನಿಯರ್. ಅವರ ಕಾಲದಲ್ಲಿದ್ದ ನಟಿಯರು ಯಾರೂ ಸಿನಿಮಾ ಮಾಡ್ತಿಲ್ಲ. ಈಗಲು ರಾಧಿಕಾ ಸಿನಿಮಾ ಮಾಡ್ತಿದ್ದಾರೆ. ನಿಜಕ್ಕೂ ಖುಷಿ ಆಗ್ತಿದೆ'' ಎಂದು ದರ್ಶನ್ ಸಂತಸ ವ್ಯಕ್ತಪಡಿಸಿದರು.
ಆ ಸಂದರ್ಭದಲ್ಲಿ 'ಮತ್ತೆ ನಟಿಸುವುದೇ ಬೇಡ' ಎಂದುಕೊಂಡಿದ್ದರಂತೆ ರಾಧಿಕಾ! ಕಾರಣ ಏನಾಗಿತ್ತು?
ಇದಕ್ಕೂ ಮೊದಲು ಮಾತನಾಡಿದ ರಾಧಿಕಾ ಕುಮಾರಸ್ವಾಮಿ ''ಈ ವರ್ಷ ನನ್ನ ಹುಟ್ಟುಹಬ್ಬದ ಸಂಭ್ರಮ ಹೆಚ್ಚಾಗಿದೆ. ಬಹಳ ಬ್ಯುಸಿ ಇದ್ದರೂ ನನ್ನ ಸಿನಿಮಾ ಕಾರ್ಯಕ್ರಮಕ್ಕೆ ದರ್ಶನ್ ಅವರು ಬಂದಿದ್ದಾರೆ. ಅವರು ಟ್ರೈಲರ್ ಲಾಂಚ್ ಮಾಡಿದ್ದು, ನನ್ನ ಬರ್ತಡೇಗೆ ಸಿಕ್ಕ ಬಹುದೊಡ್ಡ ಗಿಫ್ಟ್'' ಎಂದರು.
ಅಂದ್ಹಾಗೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಮಂಡ್ಯ' ಮತ್ತು 'ಅನಾಥರು' ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸಿದ್ದಾರೆ.