Don't Miss!
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕುರುಕ್ಷೇತ್ರ' ಟ್ರೈಲರ್ ಗೆ ಬಂದ ಕಮೆಂಟ್ಸ್ ಗೆ ಹೆದರಿತಾ ಚಿತ್ರತಂಡ?
ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆಯನ್ನು ಮೂಡಿಸಿರುವ 'ಕುರುಕ್ಷೇತ್ರ' ಸಿನಿಮಾದ ಟ್ರೈಲರ್ ಇತ್ತೀಚಿಗಷ್ಟೆ ರಿಲೀಸ್ ಆಗಿದೆ. ಸುಮಾರು ಎರಡು ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಅಭಿಮಾನಿಗಳಿಗೆ ಟ್ರೈಲರ್ ರಿಲೀಸ್ ಆಗುತ್ತಿರುವುದು ಭಾರಿ ಸಂತಸ ತಂದಿದ್ದು.
ಡಿ ಬಾಸ್ ಅಭಿಮಾನಿಗಳಿಗಂತು 'ಕುರುಕ್ಷೇತ್ರ' ಟ್ರೈಲರ್ ಮತ್ತು ಹಾಡುಗಳು ರಿಲೀಸ್ ಆಗುತ್ತಿರುವುದು ದೊಡ್ಡ ಹಬ್ಬವಾಗಿತ್ತು. ಯಾಕಂದ್ರೆ ದರ್ಶನ್ ಅವರ 50ನೇ ಸಿನಿಮಾ ಇದಾಗಿದೆ, ಜೊತೆೆಗೆ ಇದೊಂದು ಬಿಗ್ ಬಜೆಟ್ ನ ಪೌರಾಣಿಕ ಸಿನಿಮಾ ಹಾಗಾಗಿಯೆ ಸಜವಾಗಿ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿತ್ತು. ಅಭಿಮಾನಿಗಳ ಬಹು ದಿನಗಳ ಆಸೆಯಂತೆ 'ಕುರುಕ್ಷೇತ್ರ' ಟ್ರೈಲರ್ ರಿಲೀಸ್ ಆಗಿದೆ. ಆದ್ರೀಗ ಈ ಟ್ರೈಲರ್ ದರ್ಶನ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಟ್ರೈಲರ್ ರಿಲೀಸ್ ಆದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಹೊಗಳಿಕೆಗಿಂತ ತೆಗಳಿಕೆಯೆ ಹೆಚ್ಚಾಗಿ ಬರುತ್ತಿವೆ. ಅಲ್ಲದೆ ಈ ಟ್ರೈಲರ್ ಈಗ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದೆ. ಟ್ರೈಲರ್ ಅಂತ ಹೇಳಿ ಟೀಸರ್ ರಿಲೀಸ್ ಮಾಡಿದ್ದಾರೆ ಅಂತ ಹೇಳುತ್ತ ನಿರ್ಮಾಪಕ ಮುನಿರತ್ನ ಅವರಿಗೆ ಸರಿಯಾಗಿ ಮಂಗಳಾರತಿ ಮಾಡುತ್ತಿದ್ದಾರೆ.
ಇದನ್ನು ಗಮನಿಸಿದ ಚಿತ್ರತಂಡ ಈಗ ಯೂ ಟ್ಯೂಬ್ ನಲ್ಲಿ ಕಮೆಂಟ್ಸ್ ಬಾಕ್ಸ್ ಅನ್ನು ಹೈಡ್ ಮಾಡಿದೆ. ಕಮೆಂಟ್ ಬಾಕ್ಸ್ ನಲ್ಲಿ ಹೆಚ್ಚಾಗಿ ನೆಗೆಟಿವ್ ಕಮೆಟ್ಸ್ ಗಳೇ ಹರಿದು ಬರುತ್ತಿರುವ ಕಾರಣ ನೆಟ್ಟಿಗರು ಮಾಡಿರುವ ಕಮೆಂಟ್ಸ್ ಕಾಣದಂತೆ ಮಾಡಲಾಗಿದೆ. ಹಾಗಾಗಿ ಯೂ ಟ್ಯೂಬ್ ನಲ್ಲಿ ಯಾರಾದ್ರು ಕಮೆಂಟ್ಸ್ ಮಾಡಿದ್ರೆ ಅದೀಗ ಯಾರಿಗೂ ಕಾಣುತ್ತಿಲ್ಲ.