twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಪ್ರೇಕ್ಷಕರ ಬಗ್ಗೆ 'ರಾಯಣ್ಣ' ದರ್ಶನ್ ಹೇಳಿದ್ದೇನು?

    |
    <ul id="pagination-digg"><li class="previous"><a href="/news/sangolli-rayanna-grand-success-rs-15-cr-collection-069338.html">« Previous</a>

    Darshan
    ಈ 'ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ರಾಯಣ್ಣನಾಗಿ ಅಮೋಘ ಅಭಿನಯ ನೀಡಿ ಎಲ್ಲರಿಂದ ಶಹಬ್ಬಾಸ್ ಗಿಟ್ಟಿಸಿಕೊಂಡಿರುವ ನಾಯಕ ನಟ ದರ್ಶನ್ ಈ ಯಶಸ್ಸು ಹಾಗೂ ಕನ್ನಡ ಸಿನಿಪ್ರೇಕ್ಷಕರ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ. ರಾಯಣ್ಣ ಚಿತ್ರಕ್ಕೆ ನಿರೀಕ್ಷೆ ಮೀರಿ ಸಿಗುತ್ತಿರುವ ಪ್ರೋತ್ಸಾಹ, ಅಭಿನಂದನೆ ಹಾಗೂ ಐತಿಹಾಸಿಕ ಚಿತ್ರವೊಂದರ ಬಗ್ಗೆ ಜನರು ತೋರಸುತ್ತಿರುವ ಪ್ರೀತಿ-ಆದರಗಳಿಗೆ ದರ್ಶನ್ ದಂಗಾಗಿದ್ದಾರೆ. ಜನರ ಪ್ರೀತಿಗೆ ಆನಂದಭಾಷ್ಪ ಸುರಿಸಿದ್ದಾರೆ.

    ಈ ಬಗ್ಗೆ ದರ್ಶನ್ "ಬಿಡುಗಡೆಯಾದ ದಿನ (01 ನವೆಂಬರ್ 2012) ಸಿಕ್ಕಾಪಟ್ಟೆ ಮಳೆ ಸುರಿಯುತ್ತಿತ್ತು. ಜೋರಾಗಿ ಗಾಳಿಯೂ ಬೀಸುತ್ತಿತ್ತು. ಮೈಕೊರೆಯುವ ಚಳಿ ಬೇರೆ ಜೊತೆಯಾಗಿತ್ತು. ಆವತ್ತಿನ ವಾತಾವರಣ ಹೇಗಿತ್ತು ಎಂದರೆ ಸಿಕ್ಕ ರಜೆಯಲ್ಲಿ ಮೈತುಂಬಾ ಬಟ್ಟೆ ಹಾಕಿಕೊಂಡು ಮೇಲಿಂದ ಒಂದು ರಗ್ಗು ಎಳೆದುಕೊಂಡು ಬೆಚ್ಚಗೆ ಮನೆಯಲ್ಲಿ ಮಲಗಬೇಕು ಎನಿಸುವಂತಿತ್ತು. ಆದರೂ ಜನರು ಥಿಯೇಟರ್ ಕಡೆ ಹೆಜ್ಜೆ ಹಾಕಿದ್ದಾರೆ. ಒಳ್ಳೆಯ ಚಿತ್ರ ಕೊಟ್ಟರೆ ಜನರು ಖಂಡಿತ ನೋಡುತ್ತಾರೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ.

    ಜನರಿಗೆ ಈ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಯಿತ್ತು. ಜನರ ನಿರೀಕ್ಷೆಯನ್ನು 'ಸಂಗೊಳ್ಳಿ ರಾಯಣ್ಣ' ಚಿತ್ರವು ನಿರಾಸೆಗೊಳಿಸದೇ ಉಳಿಸಿದೆ. ನಿರೀಕ್ಷೆ ಮೀರಿ ಚೆನ್ನಾಗಿರುವ ಕಾರಣಕ್ಕೆ ಜನರು ಥಿಯೇಟರ್ ಗಳ ಕಡೆ ಮತ್ತೆ ಮತ್ತೆ ಹೆಜ್ಜೆಹಾಕುತ್ತಿದ್ದಾರೆ. ಆ ದಿನವಂತೂ ಬರೋಬ್ಬರಿ ಒಂದು ಥಿಯೇಟರಿಗಾಗುವಷ್ಟು ಜನರು ಟಿಕೆಟ್ ಸಿಗದೇ ವಾಪಸ್ ಹೋಗಬೇಕಾಯ್ತು. ಕನ್ನಡ ಚಿತ್ರರಂಗದಲ್ಲಿ ಇಂತಹ ಯಶಸ್ಸು ಒಳ್ಳೆಯ ಬೆಳವಣಿಗೆ" ಎಂದಿದ್ದಾರೆ.

    ಬರುವ ತಿಂಗಳು ಡಿಸೆಂಬರಿನಲ್ಲಿ ದರ್ಶನ್ ರಾಜ್ಯಾದ್ಯಂತ, ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಿಗೆ ಭೇಟಿ ನೀಡಲು ತೀರ್ಮಾನಿಸಿದ್ದಾರೆ. ಅವರ ಸಾರಥಿ ಚಿತ್ರ ಬಿಡುಗಡೆಯಾದಾಗಲೂ ದರ್ಶನ್ ಹೀಗೆ ನೇರವಾಗಿ ಪ್ರೇಕ್ಷಕರ ಬಳಿಗೇ ಹೋಗಿದ್ದರು. ಈ ರೀತಿಯಲ್ಲಿ ತಮ್ಮ ಯಶಸ್ವೀ ಚಿತ್ರ 'ಸಂಗೊಳ್ಳಿ ರಾಯಣ್ಣ'ಕ್ಕೆ ಇನ್ನೂ ಹೆಚ್ಚಿನ ಪ್ರಚಾರ ಕೈಗೊಳ್ಳಲಿದ್ದಾರೆ ದರ್ಶನ್. ಒಟ್ಟಿನಲ್ಲಿ ದರ್ಶನ್ 'ಸಂಗೊಳ್ಳಿ ರಾಯಣ್ಣ' ಚಿತ್ರದ ಯಶಸ್ಸಿನಿಂದ ಖುಷಿಯಾಗಿದ್ದಾರೆ. ಇನ್ನೂ ಹೆಚ್ಚಿನ ಯಶಸ್ಸಿಗೆ ಕೈಜೋಡಿಸಲು ನಿರ್ಧರಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)

    <ul id="pagination-digg"><li class="previous"><a href="/news/sangolli-rayanna-grand-success-rs-15-cr-collection-069338.html">« Previous</a>

    English summary
    Darshan Movie Sangolli Rayanna is screening successful in all the centers and recorded Grand Success. The number of theaters increased after the release and it collected Rs. 15 crore according to the sources. Here are the Darshan Opinion to read about the Kannada Audience...&#13; &#13;
    Monday, November 5, 2012, 10:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X