Don't Miss!
- Sports IPL 2024: ಚಿನ್ನಸ್ವಾಮಿ ಸಾಮ್ರಾಜ್ಯದಲ್ಲಿ ರಾಜ್ಯಭಾರ ಮಾಡಿದ ವಿರಾಟ್; KKRಗೆ ಸವಾಲಿನ ಗುರಿ ನೀಡಿದ RCB
- Lifestyle 10 ವರ್ಷದಿಂದ ನಿರಂತರ ರಕ್ತ ಕುಡಿಯುತ್ತಿರುವ ಯುವತಿ..! ರಕ್ತವೇ ಟೀ, ಅದರಲ್ಲೇ ಊಟ..!
- News Rain Alert: ಕೊಡಗಿನ ವಿವಿಧಡೆ ಮಳೆ ಅಬ್ಬರ: ಮೋಡ ಕವಿದ ವಾತಾವರಣ
- Automobiles Brezza: ಮಾರುತಿ ಸುಜುಕಿ ಬ್ರೆಝಾ ಖರೀದಿಸಬೇಕೇ.. ಆನ್ ರೋಡ್ ಬೆಲೆ ಎಷ್ಟು? EMI ಏನು?
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ವಿಕ್ಟರಿ'ಗೆ ಬಂತು ಆನೆಬಲ: ದರ್ಶನ್ ಭೇಟಿ ಹಿಂದೆ ಹೀಗೊಂದು ಕುತೂಹಲ.!
Recommended Video
'Rambo-2' ಚಿತ್ರದ ಯಶಸ್ಸಿನ ಬಳಿಕ ನಟ ಶರಣ್ 'ವಿಕ್ಟರಿ-2' ಸಿನಿಮಾ ಮಾಡ್ತಿದ್ದಾರೆ. ಚಿತ್ರದ ಚಿತ್ರೀಕರಣ ಬಹುತೇಕ ಅಂತಿಮ ಹಂತದಲ್ಲಿದ್ದು, ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಗಳು ಬಿಡುಗಡೆಯಾಗಿ ಸಖತ್ ಸದ್ದು ಮಾಡಿದೆ. ಅದರಲ್ಲೂ ಹುಡುಗಿಯರ ಗೆಟಪ್ ನಲ್ಲಿ ಶರಣ್, ಸಾಧು ಕೋಕಿಲಾ, ರವಿಶಂಕರ್ ಪ್ರತ್ಯಕ್ಷವಾಗಿದ್ದು ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚು ಮಾಡಿದೆ.
ಅಷ್ಟರಲ್ಲೇ 'ವಿಕ್ಟರಿ' ಚಿತ್ರತಂಡಕ್ಕೆ ಆನೆಬಲ ಬಂದಿದೆ. ಹೌದು, ಇತ್ತೀಚಿಗಷ್ಟೆ 'ವಿಕ್ಟರಿ' ಸೆಟ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ನೀಡಿದ್ದರು. ಇದು ಸಹಜವಾಗಿ ಚಿತ್ರತಂಡಕ್ಕೆ ಮತ್ತಷ್ಟು ಹುಮ್ಮಸ್ಸು ತಂದಿದೆ.
ಬಂತು ಶರಣ್ ನಟನೆ 'ವಿಕ್ಟರಿ 2' ಚಿತ್ರದ ಫಸ್ಟ್ ಲುಕ್
ಈ ವೇಳೆ ದರ್ಶನ್ ಜೊತೆ ನಟ ಶರಣ್, ರವಿಶಂಕರ್, ತಬಲನಾಣಿ, ನಿರ್ದೇಶಕ ತರುಣ್ ಸುಧೀರ್, ನಿರ್ದೇಶಕ ಹರಿ ಸಂತೋಷ್ ಕಾಣಿಸಿಕೊಂಡಿದ್ದಾರೆ. 'ವಿಕ್ಟರಿ' ಸೆಟ್ ಗೆ ಬಂದಿದ್ದ ದರ್ಶನ್ ಎಲ್ಲರನ್ನ ಮಾತಾಡಿಸಿ, ಯೋಗಕ್ಷೇಮ ವಿಚಾರಿಸಿದ್ದರು. ಅಲ್ಲಿಗೆ ಈ ವಿಷ್ಯ ಮುಗಿಯಿತು. ಆದ್ರೆ, ಇಲ್ಲಿಂದ ಅಭಿಮಾನಿಗಳಲ್ಲಿ ಮತ್ತೊಂದು ಕುತೂಹಲ ಆರಂಭವಾಗಿದೆ. ಏನದು.? ಮುಂದೆ ಓದಿ....
'ವಿಕ್ಟರಿ' ಚಿತ್ರದಲ್ಲಿ ದರ್ಶನ್.?
'ವಿಕ್ಟರಿ' ಚಿತ್ರದಲ್ಲಿ ದರ್ಶನ್ ಅಭಿನಯಿಸ್ತಾರಾ.?......ಹೀಗೊಂದು ಪ್ರಶ್ನೆ ಸಹಜವಾಗಿ ಉದ್ಭವವಾಗಿದೆ. ಸಾಮಾನ್ಯವಾಗಿ ಬೇರೆ ಸೆಟ್ ಗಳಿಗೆ ದರ್ಶನ್ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಯಾವುದಾದರೂ ಕೆಲಸವಿದ್ದರೇ ಮಾತ್ರ ಬೇರೆ ಸಿನಿಮಾಗಳ ಸೆಟ್ ಗೆ ವಿಸಿಟ್ ಕೊಡ್ತಾರೆ. ಬಹುಶಃ ವಿಕ್ಟರಿ ಸೆಟ್ ಗೂ ಶೂಟಿಂಗ್ ಉದ್ದೇಶದಿಂದಲೇ ಬಂದಿರಬಹುದಾ.?
ಸರ್ಪ್ರೈಸ್ ಇದ್ರೂ ಅಚ್ಚರಿಯಿಲ್ಲ.!
ಅಂದ್ಹಾಗೆ, ವಿಕ್ಟರಿ ಚಿತ್ರಕ್ಕೆ ನಿರ್ದೇಶಕ ತರುಣ್ ಸುಧೀರ್ ಕ್ರಿಯೆಟೀವ್ ಹೆಡ್ ಆಗಿ ಕೆಲಸ ಮಾಡ್ತಿದ್ದಾರೆ. ತರುಣ್, ಶರಣ್ ಮತ್ತು ದರ್ಶನ್ ನಡುವೆ ಉತ್ತಮ ಬಾಂಧವ್ಯವಿದೆ. ಈ ಹಿಂದೆ ತರುಣ್ ನಿರ್ದೇಶನದ ಚೌಕ ಚಿತ್ರದಲ್ಲಿ ದರ್ಶನ್ ಸ್ಪೆಷಲ್ ಎಂಟ್ರಿ ಕೊಟ್ಟಿದ್ದರು. ಇಲ್ಲಿಯೂ ಹಾಗೆ ಇರಬಹುದು ಎಂಬ ನಿರೀಕ್ಷೆ. ಹೀಗಾಗಿ, ಏನಾದರೂ ಸರ್ಪ್ರೈಸ್ ಇರಬಹುದಾ ಎಂಬ ಲೆಕ್ಕಾಚಾರ. ಆದ್ರೆ, ಅದನ್ನ ಚಿತ್ರತಂಡವೇ ಹೇಳಬೇಕಿದೆ.
ಆಪ್ತಮಿತ್ರರಿಗೆ 'ಆಪತ್ಬಾಂಧವ' ಈ 'ದಾಸ' ದರ್ಶನ್
ತರುಣ್ ಜೊತೆ ದರ್ಶನ್ ಸಿನಿಮಾ
'ಕುರುಕ್ಷೇತ್ರ' ಮುಗಿಸಿ, 'ಯಜಮಾ'ನ ಶೂಟಿಂಗ್ ಮಾಡ್ತಿರುವ ದರ್ಶನ್ ಮುಂದೆ ಎಂ.ಡಿ ಶ್ರೀಧರ್ ನಿರ್ದೇಶನದ 'ಒಡೆಯ' ಸಿನಿಮಾ ಮಾಡಲಿದ್ದಾರೆ. ಅದಾದ ಬಳಿಕ ತರುಣ್ ಹಾಗೂ 'ಹೆಬ್ಬುಲಿ' ಉಮಾಪತಿ ಜೋಡಿಯ ಚಿತ್ರದಲ್ಲಿ ನಟಿಸಲಿದ್ದಾರೆ.
ಸೈಲೆಂಟ್ ಆಗಿ ಸರ್ಪ್ರೈಸ್ ಕೊಟ್ಟೆ ಬಿಟ್ರು ದರ್ಶನ್-ಉಮಾಪತಿ
'ವಿಕ್ಟರಿ' ಬಾರಿಸಲು ಶರಣ್ ಸಜ್ಜು
ಅಂದ್ಹಾಗೆ, ವಿಕ್ಟರಿ 2 ಚಿತ್ರವನ್ನ 'ಅಲೆಮಾರಿ' ಖ್ಯಾತಿಯ ನಿರ್ದೇಶಕ ಹರಿ ಸಂತೋಷ್ ನಿರ್ದೇಶನ ಮಾಡುತ್ತಿದ್ದಾರೆ. 'ಕಾಲೇಜ್ ಕುಮಾರ' ನಂತರ ಸಂತು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಶರಣ್ ಗೆ ಜೋಡಿಯಾಗಿ ನಟಿ ಅಪೂರ್ವ ಕಾಣಿಸಿಕೊಳ್ಳುತ್ತಿದ್ದಾರೆ. 'ಅಪೂರ್ವ' ಚಿತ್ರದ ನಂತರ ನಟಿ ಅಪೂರ್ವ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಮತ್ತೊಬ್ಬ ನಾಯಕಿಯಾಗಿ 'ವಿಕ್ಟರಿ' ಚಿತ್ರದಲ್ಲಿ ನಟಿಸಿದ್ದ ಅಸ್ಮಿತಾ ಸೂದ್ ಅವರೇ ಇರಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹೊಣೆ ಹೊತ್ತಿದ್ದಾರೆ.