Don't Miss!
- News Bengaluru Rain: ಸುದೀರ್ಘ ಕಾಯುವಿಕೆ ಅಂತ್ಯ: ಬೆಂಗಳೂರಿಗೆ ಎಂಟ್ರಿ ಕೊಟ್ಟ ಮಳೆ; ವಿಡಿಯೋ ನೋಡಿ
- Automobiles ಹ್ಯುಂಡೈನ ಈ ಕಾರಿಗೆ ಭಾರತದಲ್ಲಿ ಭರ್ಜರಿ ಡಿಸ್ಕೌಂಟ್: ಇದಕ್ಕಿಂತ ಉತ್ತಮ ಆಫರ್ ಸದ್ಯಕ್ಕಿಲ್ಲ!
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡೈಲಾಗ್ ಬರೆಯೋರಿಗೆ ಮೊದಲೇ ಎಚ್ಚರಿಕೆ ಕೊಟ್ಟಿರ್ತಾರಂತೆ ದಾಸ
Recommended Video
ಆ ಹೀರೋಗೆ ಈ ಹೀರೋ ಟಾಂಗ್ ಕೊಟ್ರು, ಇವರಿಗೆ ಅವರು ಕೌಂಟರ್ ಕೊಟ್ರು.....ಸದ್ಯ ಕನ್ನಡ ಇಂಡಸ್ಟ್ರಿಯಲ್ಲಿ ಈ ಸಂಸ್ಕೃತಿ ಹೆಚ್ಚಿದೆ. ಯಾವುದೇ ಮಾಸ್ ಡೈಲಾಗ್ ಬಂದ್ರು, ಅದನ್ನ ಇನ್ನೊಬ್ಬರಿಗೆ ಹೋಲಿಕೆ ಮಾಡಿ ನೋಡಿ, ಇದು ಆ ನಟನಿಗೆ ಕೌಂಟರ್ ಎಂದೇ ಬಿಂಬಿಸುವಂತಾಗಿದೆ.
ದರ್ಶನ್, ಯಶ್, ಸುದೀಪ್, ಪುನೀತ್, ಶಿವಣ್ಣ ಸಿನಿಮಾಗಳಲ್ಲಿ ಇಂತಹ ಡೈಲಾಗ್ ಗಳು ಹೆಚ್ಚಿದೆ. ಈ ಕೌಂಟರ್, ಟಾಂಗ್ ಎಲ್ಲವನ್ನ ಗಮನಿಸಿದ ಡಿ ಬಾಸ್ ದರ್ಶನ್ ತಮ್ಮ ಚಿತ್ರಗಳ ಬರಹಗಾರರಿಗೆ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ.
ದರ್ಶನ್ ಕೈ ಕಡಗದ ರಹಸ್ಯ ಬಯಲು, ಅದು ಅಂಬಿಯದ್ದಲ್ಲ, ವಿಷ್ಣುದೂ ಅಲ್ಲ.!
ಸಂಭಾಷಣೆ ಬರೆಯೋ ಮೊದಲೇ ಈ ಕೌಂಟರ್, ಟಾಂಗ್ ಕಾಲೆಳೆದ್ರು ಎಂಬ ಡೈಲಾಗ್ ಗಳನ್ನ ಬರೆಯಬಾರದೆಂದು ಪೂರ್ವ ಎಚ್ಚರಿಕೆ ಕೊಟ್ಟಿರ್ತಾರಂತೆ ದರ್ಶನ್. ಈ ಬಗ್ಗೆ ದರ್ಶನ್ ಬಹಿರಂಗವಾಗಿ ಮಾತನಾಡಿದ್ದಾರೆ. ಮುಂದೆ ಓದಿ......
ನಮಗೆ ಏನೂ ಗೊತ್ತಿರಲ್ಲ
''ಎಲ್ಲರ ಸಿನಿಮಾವನ್ನ ಎಲ್ಲರೂ ನೋಡುವುದಿಲ್ಲ. ಇದರಲ್ಲಿ ದರ್ಶನ್ ಏನೋ ಹೇಳ್ತಾರೆ, ಅದರಲ್ಲಿ ಅವರೇನೂ ಹೇಳ್ತಾರೆ. ನಮಗೆ ಗೊತ್ತಿರಲ್ಲ, ಡೈಲಾಗ್ ಏನು ಬರೆದಿರ್ತಾರೋ ಅದನ್ನ ನಾವು ಹೇಳ್ತೀವಿ. ಆಮೇಲೆ ನೋಡಿದ್ರೆ ಟಾಂಗ್, ಕೌಂಟರ್ ಅಂತ ಹೇಳ್ತಾರೆ''
ಅಬ್ಬಾ..'ಯಜಮಾನ' ಟೈಟಲ್ ನಲ್ಲಿಯೇ ಇಷ್ಟೊಂದು ವಿಷಯವಿದೆ!
ಪೂರ್ವ ಎಚ್ಚರಿಕೆ ಕೊಟ್ಟಿರುತ್ತೇನೆ
''ಕಥೆ ಬರಯೋರಿಗೆ ಮತ್ತು ಡೈಲಾಗ್ ಬರೆಯೋರಿಗೆ ನಾನು ಮೊದಲೇ ಎಚ್ಚರಿಕೆ ಕೊಟ್ಟಿರುತ್ತೇನೆ. ಅಪ್ಪಿ ತಪ್ಪಿ ಇದು ಕೌಂಟರ್, ಟಾಂಗ್ ಅಂತ ಬಂದ್ರೆ ನಾನು ನಿನ್ನನ್ನು ಕೇಳ್ತೀನಿ''
ದರ್ಶನ್ ಪಾಲಿನ ರಿಯಲ್ 'ಯಜಮಾನ' ಇವರೊಬ್ಬರೇ
ಹೇ ಕ್ಯಾಡ್ಬರೀಸ್ ಮೊದಲೇ ಬಳಸಿದ್ದೆ
''ಯಜಮಾನ ಚಿತ್ರಕ್ಕೆ ಡೈಲಾಗ್ ಬರೆದಿರುವುದು ಹರಿಕೃಷ್ಣ ಅವರು ಮತ್ತು ಚೇತನ್ ಕುಮಾರ್. ಹೇ ಕ್ಯಾಡ್ಬರೀಸ್ ಅನ್ನೋದ ಪದ ನಾನು ಮೊದಲು ಬಳಸಿದ್ದು ನವಗ್ರಹ ಚಿತ್ರದಲ್ಲಿ, ಈಗ ಮತ್ತೆ ಯಜಮಾನ ಚಿತ್ರದಲ್ಲಿ. ಇದರಲ್ಲಿ ಟಾಂಗ್ ಅಂತ ಏನೂ ಇಲ್ಲ'' ಎಂದು ದರ್ಶನ್ ಹೇಳಿದ್ರು.
ಧನಂಜಯ್ ಅವರನ್ನ ದರ್ಶನ್ ಹೇಗೆ ಕರೆಯುತ್ತಾರೆ ಗೊತ್ತಾ?
ಮಾರ್ಚ್ 1ಕ್ಕೆ ಗ್ರ್ಯಾಂಡ್ ಎಂಟ್ರಿ
ಮಾರ್ಚ್ 1 ರಂದು ದರ್ಶನ್ ಯಜಮಾನ ತೆರೆಕಾಣುತ್ತಿದ್ದು, ಪಿ ಕುಮಾರ್ ಮತ್ತು ಹರಿಕೃಷ್ಣ ನಿರ್ದೇಶನ ಮಾಡಿದ್ದಾರೆ. ಬಿ ಸುರೇಶ್ ಮತ್ತು ಶೈಲಜಾ ನಾಗ್ ನಿರ್ಮಿಸಿದ್ದು, ರಶ್ಮಿಕಾ ಮಂದಣ್ಣ, ತಾನ್ಯ ಹೋಪ್, ದೇವರಾಜ್, ಧನಂಜಯ್, ರವಿಶಂಕರ್, ಸಾಧು ಕೋಕಿಲಾ ನಟಿಸಿದ್ದಾರೆ.