Don't Miss!
- News ವೃದ್ಧರ ಗೌಪ್ಯ ಮತದಾನ ವೇಳೆ ಅಕ್ರಮ: ಸಿಪಿಎಂ ಏಜೆಂಟ್ ಹಸ್ತಕ್ಷೇಪ: Video Viral
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
30 ವರ್ಷದ ಹಿಂದೆ ಡಿ ಬಾಸ್ ಮಾಡಿದ ಡ್ರಾಮಾ ಇದು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಬಣ್ಣದ ನಂಟು ಇಂದಿನಿಂದಲ್ಲ, ಸಾಕಷ್ಟು ವರ್ಷಗಳಿಂದಲೇ ದರ್ಶನ್ ನಾಟಕಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು ಅನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ.
ಚಿತ್ರರಂಗದಲ್ಲಿ ಲೈಟ್ ಬಾಯ್ ಆಗಿ ಕೆಲಸ ಮಾಡಿ ನಂತರ ನೀನಾಸಂ ನಲ್ಲಿ ನಟನೆಯನ್ನ ಕಲಿಯುವುದಕ್ಕೂ ಮುನ್ನ ದರ್ಶನ್ ಅವರಿಗೆ ಕಲಾ ಸರಸ್ವತಿ ಒಲಿದಿದ್ದಳು. ದರ್ಶನ್ ಅವರಿಗೆ ಸುಮಾರು 9 ವರ್ಷ ಆಗಿದ್ದಾಗಿನಿಂದಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.
ಸದ್ಯ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಆಗಿರುವ ಡಿ ಬಾಸ್ ಮೂವತ್ತು ವರ್ಷದ ಹಿಂದೆ ಅಭಿನಯಿಸುತ್ತಿದ್ದ ನಾಟಕದಲ್ಲೂ ರಾಜನೇ ಅನ್ನುವುದು ಅಭಿಮಾನಿಗಳಿಗೆ ಹೆಮ್ಮೆ ಪಡುವಂತಹ ವಿಚಾರ.
ನಟ, ನಿರ್ದೇಶಕ , ರಂಗಕರ್ಮಿ ಮಂಡ್ಯ ರಮೇಶ್ ಮಾಡಿಸಿದ 'ರಾಬಿನ್ ಗುಡ್ಫೆಲೊ' ನಾಟಕದಲ್ಲಿ ದರ್ಶನ್ ರಾಜನಾಗಿ ಅಭಿನಯಿಸಿದ್ದರಂತೆ. ಆ ನಾಟಕದ ಸಮಯದಲ್ಲಿ ತೆಗೆದ ಫೋಟೋ ರಮೇಶ್ ಅವರಿಗೆ ಸಿಕ್ಕಿದ್ದು ಈ ಬಗ್ಗೆ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ವೆನ್ನಿಲ್ಲಾ ರುಚಿ ಸವಿಯಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್
"ನಟನದ ಶಿಷ್ಯ ಮಿತ್ತ್ರೋತ್ತಮರು ಹತ್ತಾರು ಸಾವಿರ ಪುಸ್ತಕಗಳನ್ನು ಕ್ರಮವಾಗಿ ಜೋಡಿಸುವ ಕೈಂಕರ್ಯದಲ್ಲಿ ಕರಗಿಹೋಗಿದ್ದಾಗ ನಡುವಿನಲ್ಲಿ ಈ ಚಿತ್ರ ಸಿಕ್ಕಿತು!
ಮೂವತ್ತೊಂದು ವರುಷದ ಹಿಂದೆ ಈ ನಾಟಕ ಮಾಡಿಸುವಾಗ, ಅವನು ಈ'ಎತ್ತರ'ಕ್ಕೆ ಏರಬಹುದು ಅಂತಾ ನಮಗಾರಿಗೂ ಅನಿಸಿರಲಿಲ್ಲ! ಸೃಷ್ಟಿ ಕೊಡಗುರಂಗದ 'ರಾಬಿನ್ ಗುಡ್ಫೆಲೊ' ನಾಟಕದ ರಾಜ ಅವನು!ಗುರುತಿಸಿ?" ಫೋಟೋ ಜೊತೆಗೆ ಈ ಸಾಲುಗಳನ್ನು ಬರೆದಿದ್ದಾರೆ ಮಂಡ್ಯ ರಮೇಶ್.
ಒಂಬತ್ತು ವರ್ಷದ ಪ್ರಾಯದಲ್ಲೇ ಅಷ್ಟು ಎತ್ತರವಿದ್ದ ದರ್ಶನ್ ಇಂದು ಕನ್ನಡ ಸಿನಿಮಾರಂಗದಲ್ಲಿ ಎತ್ತರಕ್ಕೆ ಬೆಳೆದಿರುವುದು ಎಲ್ಲರಿಗೂ ಖುಷಿಯನ್ನ ನೀಡುವ ಸಂಗತಿ ಆಗಿದೆ.